By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್

ಹೊಳಲ್ಕೆರೆ

ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್

News Desk Chitradurga News
Last updated: 4 March 2024 17:30
News Desk Chitradurga News
1 year ago
Share
ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್
ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 04 MARCH 2024

ಹೊಳಲ್ಕೆರೆ: ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂಗಳನ್ನು ಘೋಷಿಸಿ ಇದುವರೆಗೂ ಹಣ ಬಿಡುಗಡೆಗೊಳಿಸದೆ ರೈತರನ್ನು ನಿರ್ಲಕ್ಷೆಯಿಂದ ಕಾಣುತ್ತಿರುವುದನ್ನು ವಿರೋಧಿಸಿ ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕು ರೈತರಿಂದ ಹೊಳಲ್ಕೆರೆಯಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಇದನ್ನೂ ಓದಿ: ಶಿವರಾತ್ರಿ ಅಬ್ಬರಿಸಲಿದ್ದಾನೆ ವರುಣ ದೇವ | ಭರ್ಜರಿ ಮಳೆಯ ಮುನ್ಸೂಚನೆ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಎಲ್ಲಾ ಜನಪರ, ಕನ್ನಡ ಪರ, ದಲಿತ ಪರ ಸಂಘಟನೆಗಳಿಂದ ಸೋಮವಾರ ಹೊಳಲ್ಕೆರೆ ಪಟ್ಟಣವನ್ನು ಸ್ವಯಂ ಪೇರಿತ ಬಂದ್ ಮಾಡಲಾಯಿತು.

ಬೆಳ್ಳೆಗೆ 9 ಗಂಟೆ ಯಿಂದ ಪ್ರಾರಂಭವಾದ ಸ್ವಯಂ ಪ್ರೇರಿತ ಬಂದ್ ಸಂಜೆ 6 ಗಂಟೆವರಿಗೆ ನೆಡೆಯಿತು. ಬೆಳಿಗ್ಗೆಯಿಂದ ವ್ಯಾಪಾರ ಮಾಡಲು ಅಂಗಡಿ ಮಾಲೀಕರು ಅಂಗಡಿಗಳನ್ನು ತೆಗೆದಿದ್ದರೂ, ತೆಗೆದಂತಹ ಅಂಗಡಿ ಬಳಿ ರೈತರು ತೆರಳಿ ಅಂಗಡಿಗಳನ್ನು ಮುಚ್ಚಿಸಿದರು.
ಮುಖ್ಯ ವೃತ್ತದಲ್ಲಿ ರೈತರು ತಮ್ಮ ಎತ್ತಿನ ಗಾಡಿ ಹಾಗೂ ಟ್ಯಾಕ್ಟರ್ ನಿಲ್ಲಿಸಿ ಪ್ರತಿಭಟನೆ ನೆಡೆಸಿದರು.

ಇದನ್ನೂ ಓದಿ: ಕರ್ತವ್ಯ ಲೋಪ | ನಾಲ್ವರು ಪಿಡಿಓಗಳು ಅಮಾನತು

ಕೇಂದ್ರ ಸರ್ಕಾರ ಭದ್ರಾ ಮೇಲ್ದಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಶೀಘ್ರದಲ್ಲಿ ರೂ.5300 ಕೋಟಿ ಹಣ ಬಿಡುಗಡೆ ಗೊಳಿಸಬೇಕು, ರಾಜ್ಯ ಸರ್ಕಾರ ಶೀಘ್ರಗತಿಯಲ್ಲಿ ಭದ್ರಾ ಮೇಲ್ದದೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

29 ದಿನ ಕಾಲ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ  ಸರ್ಕಾರ, ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಯಂ ಪ್ರೇರಿತ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಘ, ಚಿತ್ರದುರ್ಗ ಕರುನಾಡ ವಿಜಯ ಸೇನೆ  ವತಿಯಿಂದ ರೈತರಿಗೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟ | ಡಿವೈಡರ್ಗೆ ಡಿಕ್ಕಿ | ಐವರು ಪ್ರಾಣಾಪಾಯದಿಂದ ಪಾರು

ಸ್ವಯಂ ಪ್ರೇರಿತಾ ಬಂದ್ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಈಚ್ಗಟ್ಟದ ಸಿದ್ಧವೀರಪ್ಪ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿ, ಚಿತ್ರದುರ್ಗ ಮಲ್ಲಿಕಾರ್ಜುನ, ಸತೀಶ್, ಬಿ.ಎಸ್.ರಂಗಸ್ವಾಮಿ, ಹೊಸದುರ್ಗ ಬೋರೇಶ್, ಹಿರಿಯೂರು ತಿಪ್ಪೇಸ್ವಾಮಿ, ಮೊಳಕಾಲ್ಮೂರು ರವಿ ಕುಮಾರ್, ಅಜಯ್, ಲೋಕೇಶ್, ಸಿದ್ರಾಮಪ್ಪ ಸೇರಿದಂತೆ ರೈತ ಮುಖಂಡರುಗಳು ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BandhFarmersHolalkereSafe upper embankment projectಬಂದ್ಭದ್ರ ಮೇಲ್ದಂಡೆ ಯೋಜನೆರೈತರುಹೊಳಲ್ಕೆರೆ
Share This Article
Facebook Email Print
Previous Article ದೇವಸ್ಥಾನದಂತೆ ಮನುಷ್ಯನ ಜೀವನ ಕೂಡಾ ಜೀರ್ಣೋದ್ಧಾರ ಆಗಬೇಕು | ಮಾದಾರ ಚನ್ನಯ್ಯ ಶ್ರೀ
Next Article arecanut price list ಚನ್ನಗಿರಿ ಮಾರುಕಟ್ಟೆಯಲ್ಲಿ ಜಿಗಿತ ಕಂಡ ರಾಶಿ ಅಡಿಕೆ
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up