CHITRADURGA NEWS | 31 MARCH 2025
ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನ ಸಹಯೋಗದೊಂದಿಗೆ ನಡೆದ ಶೂನ್ಯಪೀಠ ಪರಂಪರೆಯ ಪ್ರಥಮಾಧ್ಯಾಕ್ಷರಾದ ಅಲ್ಲಮಪ್ರಭುದೇವರ ಜಯಂತಿ (ಶರಣೋತ್ಸವ) ಹಾಗೂ ನೂತನ ವರ್ಷಾರಂಭ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
Also Read: ಯುಗಾದಿ ಅಮವಾಸ್ಯೆಯಂದೇ ಭೀಕರ ಅಪಘಾತ | ಮೂವರ ದುರ್ಮರಣ
ಈ ವೇಳೆ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಆಧ್ಯಾತ್ಮಿಕ ಪರಂಪರೆಯಲ್ಲಿ ಅಲ್ಲಮಪ್ರಭುವನ್ನು ತಾತ್ವಿಕವಾಗಿ ಸರಿಗಟ್ಟಲು ಸಾದ್ಯವಿಲ್ಲವೇನೋ? ಎಂಬ ಆಶಯ ಶಿಶುನಾಳ ಶರೀಫರದಾಗಿದೆ. ಅವರಿಗೆ ಅವರೇ ಸಾಟಿ. ಒಂದು ಆಧ್ಯಾತ್ಮಿಕ ಪುರುಷ ಅವರು.
ಯಾವುದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವಂತಹ ಜಾಯಮಾನದವರಾಗಿರಲಿಲ್ಲ. ಅಂತಹ ಪ್ರಚಂಡ ಶಕ್ತಿ ಅನುಭವ ಮಂಟಪದ ಅಧ್ಯಕ್ಷಾರಾಗಿದ್ದು ಒಂದು ವಿಸ್ಮಯ. ಅಂದಿನ ಆ ಸಂಸತ್ತನ್ನು ಮುನ್ನಡೆಸಿದ ಪರಿಯೇ ರೋಮಾಂಚನಕಾರಿ ಎಂದು ಅಭಿಪ್ರಾಯಪಟ್ಟರು.
ತತ್ವಜ್ಞಾನವೂ ಕೂಡ ಪ್ರಭುದೇವರ ಮುಂದೆ ನಿಂತುಕೊಳ್ಳುವoತಹ ಮಹಾಜ್ಞಾನಿಯಾಗಿದ್ದ ಅಲ್ಲಮರು ಈ ನಾಡಿನಲ್ಲಿ ಅವರ ವಚನಗಳಿಗೆ ನಿರ್ವಚನ ಮಾಡಿದವರನ್ನು ನಾನು ಕಂಡಿಲ್ಲ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳವರಿಂದ ಒಂದೆರಡು ಕೃತಿಗಳು ಬಂದದ್ದು ಬಿಟ್ಟರೆ ಪರಿಪೂರ್ಣವಾದ ಸಾರವತ್ತಾದ ವಚನ- ನಿರ್ವಚನ ಕೃತಿಗಳು ಬಂದಿಲ್ಲ ಎಂದರು.
Also Read: 2 ಅಂಗಡಿಗೆ ಆಕಸ್ಮಿಕ ಬೆಂಕಿ | ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ
ಮಾತಿಗೆ ಜ್ಯೋತಿರ್ಲಿಂಗ ಅಂದವರು ಪ್ರಭುದೇವರು. ಶಬ್ದದೆಂಜಲು ಅನ್ನುವ ಪದ ಕಂಡುಹಿಡಿದವರು ಅದಕ್ಕೆ ಅವರೇ ಹೇಳುವಂತೆ ಶಬ್ದದಲ್ಲಿ ನಿಶ್ಯಬ್ದವಿಲ್ಲದೆ ಹೋದಾಗ ಅದು ಶಬ್ದದೆಂಜಲು ಎಂದು ವ್ಯಾಖ್ಯಾನಿಸಿದ್ದಾರೆ.
ಶೂನ್ಯ-ಸಂಪಾದನೆ ಆಗಬೇಕು ಆದರೆ ಸಂಪಾದನೆ ಶೂನ್ಯವಾಗಿರಬಾರದು ಎಂದು ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ವಿದ್ವಾಂಸರೊಬ್ಬರಿಗೆ ಹೇಳಿದ ಮಾತನ್ನು ನೆನಪಿಸಿದ ಶ್ರೀಗಳು,
ಶೂನ್ಯಪೀಠ ಪರಂಪರೆಯು ಬೌದ್ಧಿಕತೆಗೆ ಒತ್ತು ಕೊಟ್ಟಿದ್ದನ್ನು ನಾವು ಕಾಣಬಹುದಾಗಿದೆ. ಅಲ್ಲಿ ದ್ವೇಷ, ಅಸೂಯೆ ಗುಣಕ್ಕಿಂತ ಜೀವನ ಮೌಲ್ಯವನ್ನು ಬಸವಾದಿ ಶರಣರು ಅನುಭವ ಮಂಟಪದ ಮೂಲಕ ನಮಗೆ ಬಿಟ್ಟು ಹೋಗಿದ್ದಾರೆ. ಅಂತಹ ಪರಂಪರೆಯಲ್ಲಿ ಸಾಗಿ ಬಂದ ಮುರುಘಾಮಠದಲ್ಲಿ ಆಗಿಹೋದ ಪೂಜ್ಯರೆಲ್ಲರೂ ಸಮಾಜ ಸೇವೆಯೇ ಪರಮಗುರಿ ಎಂದು ನಡೆದ ಮಾರ್ಗವನ್ನ ನಾವು ಅನುಸರಿಸಿ ನಡೆಯಬೇಕಾಗುತ್ತದೆ. ಜೀವನದಲ್ಲಿ ಬರುವ ಸಿಹಿ ಕಹಿ ಅನುಭವವನ್ನು ಬೇವು ಬೆಲ್ಲಕ್ಕೆ ಹೋಲಿಸಿ ಪ್ರಕೃತಿ ಸಹಜ ನಡೆಯನ್ನು ಹಿಂದಿನವರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ನುಡಿದರು.
Also Read: ಯುಗಾದಿ ಹಬ್ಬ | ಶ್ರೀ ನೀಲಕಂಠೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಅಲ್ಲಮರದು ಅನುಭವ ಮಾರ್ಗ ನಡೆ ಆಧ್ಯಾತ್ಮಿಕದ ಮೌಂಟ್ ಎವರೆಸ್ಟ್ ಇದ್ದಂತೆ. ಅವರ ರಚನೆಯ ಬೆಡಗಿನ, ಒಗಟಿನಂತಿರುವ ವಚನಗಳು ಸಾಮಾನ್ಯರಿಗೆ ಅರ್ಥವಾಗುವುದೇ ಕಷ್ಟ. ಅಂಥವರ ನೆರಳಿನಲ್ಲಿ ನಾವು ಇರುವುದು ಮತ್ತು ನಡೆಯುತ್ತಿರುವುದು ವೈಶಿಷ್ಟಪೂರ್ಣ ಮತ್ತು ನಮ್ಮಗಳ ಸೌಭಾಗ್ಯವೇ ಸರಿ ಎಂದು ಹೇಳಿದರು.
ಸಾಮಾಜಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಮನುಷ್ಯರು ಸಾಗಬೇಕಿದೆ. ನಮ್ಮ ಪಂಚೇoದ್ರಿಯಗಳನ್ನು ಶುದ್ಧವಾಗಿಸುವುದೇ ಶ್ರೇಷ್ಠತೆ. ಇವನ್ನು ಪರಿಶುದ್ಧವಾಗಿಟ್ಟುಕೊಂಡು ಅವುಗಳಿಂದ ಆಗುವ ಪರಿಣಾಮವನ್ನು ಪರಿಭಾವಿಸಬೇಕಾಗಿದೆ.
ಮನಸನ್ನು ಬೇರೆ ಕಡೆ ಹರಿಯದಂತೆ ಏಕಾಗ್ರಚಿತ್ತದಲ್ಲಿರಿಸಿ ದ್ವಂದ್ವ ನಿಲುವುಗಳನ್ನು ಅನುಸರಿಸದೇ ಒಂದೇ ಮನದಲ್ಲಿ ಇರಿಸುವುದು ಕಷ್ಟವಾದರೂ ಅದನ್ನು ಹಿಡಿತದಲ್ಲಿಟ್ಟುಕೊಳ್ಳುವುದು ನಮ್ಮ ಆದ್ಯತೆಯಾಗಬೇಕೆಂದು ಪ್ರಭುದೇವರ ಮರ್ನಾಲ್ಕು ವಚನಗಳಿಗೆ ಅರ್ಥ ವಿವರಣೆಯನ್ನು ಸಂಕ್ಷಿಪ್ತವಾಗಿ ನೀಡುವ ಮೂಲಕ ಶ್ರೀಗಳು ಚಿಂತನೆ ನೀಡಿದರು.
Also Read: ಹಿರಿಯೂರು, ಹೊಳಲ್ಕೆರೆಯ ಅಂಗನವಾಡಿ ಕಾರ್ಯಕರ್ತೆ ಆಯ್ಕೆ ಪಟ್ಟಿ ಪ್ರಕಟ | ಏಪ್ರಿಲ್ 5ರೊಳಗೆ ಆಕ್ಷೇಪಣೆ ಇದ್ದರೆ ಸಲ್ಲಿಸಿ
ಗುರುಮಠಕಲಾ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಹಿರಿಯ ಪತ್ರಕರ್ತರು ಜಿ.ಎಸ್. ಉಜ್ಜಿನಪ್ಪ ಕವಿ ಮತ್ತು ಸಾಹಿತಿಯಾದ ಎಚ್.ಆನಂದಕುಮಾರ್ ಮಾತನಾಡಿದರು.
ಸಮಾಜದ ಗಣ್ಯರುಗಳಾದ ಎಸ್. ಷಣ್ಮುಖಪ್ಪ, ಕೆ.ಎಂ. ವೀರೇಶ್, ಡಿ.ಎಸ್. ಸುರೇಶ್ಬಾಬು, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ರುದ್ರಮುನಿ, ಆನಂದ್, ವಿನಯ್, ನವೀನ್ ಸಜ್ಜನ್, ಪತ್ರಕರ್ತ ಮಾಲತೇಶ ಅರಸ್, ರವಿ ಅಂಬೇಕರ್, ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿವಿಧ ಸಮಾಜಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number