Connect with us

    ಹಿರೇಗುಂಟನೂರಿನಲ್ಲಿ ಗಾಳಿಯ ಅವಾಂತರ | ಧರೆಗುರುಳಿದ ಮರ, ವಿದ್ಯುತ್ ಕಂಬಗಳು

    ಭಾರೀ ಗಾಳಿ ಬೀಸಿದ್ದರಿಂದ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಕಟ್ಟದ ಸಮೀಪದಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತಗೆ ಉರುಳಿದೆ.

    ಮುಖ್ಯ ಸುದ್ದಿ

    ಹಿರೇಗುಂಟನೂರಿನಲ್ಲಿ ಗಾಳಿಯ ಅವಾಂತರ | ಧರೆಗುರುಳಿದ ಮರ, ವಿದ್ಯುತ್ ಕಂಬಗಳು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 MAY 2024

    ಚಿತ್ರದುರ್ಗ: ಬುಧವಾರ ಸಂಜೆ ಭಾರೀ ಗಾಳಿಯೊಂದಿಗೆ ಆರಂಭವಾದ ಮಳೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರಿನಲ್ಲಿ ಅವಾಂತರ ಸೃಷ್ಟಿಸಿದ್ದಾನೆ.

    ಭಾರೀ ಗಾಳಿ ಬೀಸಿದ್ದರಿಂದ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಕಟ್ಟದ ಸಮೀಪದಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತಗೆ ಉರುಳಿದೆ.

    ಇದನ್ನೂ ಓದಿ: ಮಂಗಳವಾರ ಸಂಜೆ ಎಲ್ಲೆಲ್ಲಿ ಎಷ್ಟು ಮಳೆ ಸುರಿದಿದೆ

    ಮರ ಧರೆಗುರುಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಸುಮಾರು 8 ರಿಂದ 9 ವಿದ್ಯುತ್ ಕಂಬಗಳು ಕೂಡಾ ನೆಲಕ್ಕೆ ಅಪ್ಪಳಿಸಿವೆ. ವಿದ್ಯುತ್ ತಂತಿ ರಸ್ತೆಯಲ್ಲಿ ಹರಡಿಕೊಂಡಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.

    ಗ್ರಾಮದ ಪ್ರಮುಖ ಮಾರ್ಗದ ವಿದ್ಯುತ್ ಕಂಬಗಳೇ ನೆಲಕ್ಕೆ ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

    ಇದನ್ನೂ ಓದಿ: ಸಚಿವ ಸಂಪುಟದಿಂದ ಡಿಕೆಶಿ ವಜಾಗೊಳಿಸಿ | ಜೆಡಿಎಸ್ ಅಗ್ರಹ

    ಗಾಳಿಯೇ ಹೆಚ್ಚಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ
    ಚಿತ್ರದುರ್ಗ ನಗರದಲ್ಲೂ ಸಂಜೆ ಗಾಳಿ ಸಮೇತ ಸಣ್ಣ ಪ್ರಮಾಣದ ಮಳೆಯಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top