Connect with us

ತಿಂಗಳ ಅಂತ್ಯಕ್ಕೆ ದುರ್ಗಕ್ಕೆ ಕಾದಿದೆ ನೀರಿನ ಗಂಡಾಂತರ | ಕುಸಿಯುತ್ತಿದೆ ಸೂಳೆಕೆರೆ ನೀರಿನ ಮಟ್ಟ

ಮುಖ್ಯ ಸುದ್ದಿ

ತಿಂಗಳ ಅಂತ್ಯಕ್ಕೆ ದುರ್ಗಕ್ಕೆ ಕಾದಿದೆ ನೀರಿನ ಗಂಡಾಂತರ | ಕುಸಿಯುತ್ತಿದೆ ಸೂಳೆಕೆರೆ ನೀರಿನ ಮಟ್ಟ

ಚಿತ್ರದುರ್ಗನ್ಯೂಸ್‌.ಕಾಂ

ಮಳೆ ಕೊರತೆ ಕಾರಣಕ್ಕೆ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಚಿತ್ರದುರ್ಗದ ಜನರಿಗೆ ಜಲಮೂಲದ ಆಸರೆಯಾಗಿರುವ ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂದೇ ಖ್ಯಾತಿ ಪಡೆದಿರುವ ಚನ್ನಗಿರಿ ತಾಲೂಕಿನ ಶಾಂತಿಸಾಗರ (ಸೂಳೆಕೆರೆ)ದಲ್ಲಿ ನೀರಿ ಮಟ್ಟ ಸಂಪೂರ್ಣ ಕುಸಿದಿರುವುದು ಆತಂಕ ಸೃಷ್ಟಿಸಿದೆ.

ಸದ್ಯದ ನೀರಿನ ಮಟ್ಟದ ಆಧಾರದಲ್ಲಿ ಜನವರಿ ಅಂತ್ಯದವರೆಗೆ ಮಾತ್ರ ನೀರು ಲಭ್ಯವಾಗಲಿದೆ. 2022 ರಲ್ಲಿ ಉತ್ತಮ ಮಳೆಯಾದ ಕಾರಣ ಶಾಂತಿಸಾಗರ ಭರ್ತಿಯಾಗಿತ್ತು. ಆದರೆ 2023 ರ ಪ್ರಾರಂಭ ಹೊರತುಪಡಿಸಿದರೆ ಬಳಿಕ ಸರಿಯಾದ ಸಮಯಕ್ಕೆ ಮಳೆಯ ಆಗಮನ ಆಗದೆ ಇರುವುದರಿಂದ ದಿನೇ ದಿನೆ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ. ಜತೆಗೆ ಮುಂಗಾರಿನಲ್ಲಿ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಯದಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ವೇದಗಳಷ್ಟೇ ಪ್ರಾಮುಖ್ಯತೆ ಶ್ರೀರಾಮಾಯಣಕ್ಕಿದೆ | ಬೆಲಗೂರು ಮಾರುತಿ ವಿಜಯ ಶರ್ಮಾ ಸ್ವಾಮೀಜಿ

ಈ ಕೆರೆಯು ಒಟ್ಟು 32 ಅಡಿ ಆಳವಿದ್ದು, 5 ಅಡಿಯಷ್ಟು ಹೂಳು ತುಂಬಿಕೊಂಡಿದ್ದರಿಂದ 27 ಅಡಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಕೆರೆ ಹೊಂದಿದೆ. ಚಿತ್ರದುರ್ಗ, ಹೊಳಲ್ಕೆರೆ, ಸಿರಿಗೆರೆ, ಮಲ್ಲಾಡಿಹಳ್ಳಿ, ಜಗಳೂರು ಕೆರೆಯ ನೀರನ್ನು ಆಶ್ರಯಿಸಿವೆ. ಈ ಎಲ್ಲ ಭಾಗಕ್ಕೂ ನೀರು ಹರಿಸಲು ನಿತ್ಯ ನೀರು ಎತ್ತುವುದರಿಂದ ಕೆರೆಯಲ್ಲಿ ನೀರಿನಮಟ್ಟ ಕುಸಿಯುತ್ತಿದೆ. ಜಾಕ್‌ವೆಲ್‌ಗಳಿಂದ ನೀರಿನ ಮಟ್ಟ ದೂರ ಸರಿದಿರುತ್ತಿದ್ದು, ಜೆಸಿಬಿ ಮೂಲಕ ಕಾಲುವೆ ನಿರ್ಮಿಸಿ ಪಂಪ್‌ಹೌಸ್‌ಗೆ ನೀರು ಹರಿಸಲಾಗುತ್ತಿದೆ.

ಬೇಸಿಗೆಯಲ್ಲಿ ನೀರು ಪೂರೈಸಲು ಕನಿಷ್ಠ 1.5 ಟಿಎಂಸಿ ಅಡಿ ನೀರಿನ ಸಂಗ್ರಹ ಇರಬೇಕು. ಸದ್ಯ ನೀರಿನ ಸಂಗ್ರಹ ಕಡಿಮೆ ಇದೆ. ಭದ್ರಾ ನಾಲೆಯಿಂದ ನೀರು ಹರಿಸಿದರೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಸಾಧ್ಯ. ಇಲ್ಲವಾದರೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಲಿದೆ ಎನ್ನುತ್ತಾರೆ ದಾವಣಗೆರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ಗಳು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version