CHITRADURGA NEWS | 09 NOVEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ(VV SAGARA) ಜಲಾಶಯಕ್ಕೆ ಒಳಹರಿವು(INFLOW) ಮತ್ತಷ್ಟು ಹೆಚ್ಚಾಗಿದೆ.
ಮಳೆ ನಿಂತ ಮೇಲೆ ಮತ್ತೆ ವಿವಿ ಸಾಗರಕ್ಕೆ ನೀರಿ ಹರಿಯುವುದು ಹೆಚ್ಚಾಗಿದ್ದು ಜಲಾಶಯ ಮಟ್ಟ ಕೂಡಾ ಏರಿಕೆ ಕಾಣುತ್ತಿದೆ.
ಕ್ಲಿಕ್ ಮಾಡಿ ಓದಿ: ಶಸ್ತ್ರಾಸ್ತ್ರ ತಂದು ಪೊಲೀಸ್ ಠಾಣೆಗೆ ಒಪ್ಪಿಸಿ | ಡಿಸಿ ವೆಂಕಟೇಶ್
ಭದ್ರಾದಿಂದ ಮೂರು ದಿನಗಳಿಂದ ನೀರು ಹರಿಯಲು ಶುರುವಾಗಿದೆ.
ಕಳೆದೊಂದು ತಿಂಗಳಿಂದ ಜಿಲ್ಲೆಯ ವೇದಾವತಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಾಣಿವಿಲಾಸ ಸಾಗರ ಜಲಾಶಯಕ್ಕೆ 6 TMC ಗಿಂತಲೂ ಅಧಿಕ ಪ್ರಮಾಣದ ನೀರು ಹರಿದು ಬಂದಿತ್ತು. ಇದರಿಂದಾಗಿ ವಿವಿ ಸಾಗರ ಜಲಾಶಯ ಮಟ್ಟ ಬರೋಬ್ಬರಿ 127 ಅಡಿ ದಾಟಿತ್ತು.
ಕ್ಲಿಕ್ ಮಾಡಿ ಓದಿ: ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ
ಆನಂತರ ಮಳೆ ಬಿಡುವು ಕೊಟ್ಟಾಗ ಜಲಾಶಯದ ಒಳಹರಿವು ಸಂಪೂರ್ಣ ನಿಂತು ಹೋಗಿತ್ತು.
ಈಗ ಭದ್ರಾ ಮೇಲ್ದಂಡೆ ಯೋಜನೆಯಡಿ ಜಲಾಶಯಕ್ಕೆ ಮತ್ತೆ ನೀರು ಹರಿಸಲು ಆರಂಭಿಸಲಾಗಿದೆ.
ಇದರಿಂದ ನ.8ರಂದು 924 ಕ್ಯೂಸೆಕ್ ಹಾಗೂ ಇಂದು ಅಂದರೆ ನವೆಂಬರ್ 7 ರಂದು 924 ಕ್ಯೂಸೆಕ್ ನೀರಿ ಹರಿದು ಬಂದಿದೆ.
ಕ್ಲಿಕ್ ಮಾಡಿ ಓದಿ: ಹಸಿವು ಎಂದು ಅನ್ನ ಕೇಳಿದ ಮಗುವನ್ನೇ ಗುದ್ದಿ ಕೊಂದನಾ ತಂದೆ..!
ಜಲಾಶಯಕ್ಕೆ ಮತ್ತೆ ಒಳಹರಿವು ಪ್ರಾರಂಭವಾಗಿದ್ದು, ಕೋಡಿ ಬೀಳಲು ಇನ್ನು ಎರಡುವರೆ ಅಡಿ ಮಾತ್ರ ಬಾಕಿ ಇದೆ.
ಸದ್ಯ ಜಲಾಶಯದಲ್ಲಿ 127.50 ಅಡಿಗೆ ನೀರು ಬಂದಿದ್ದು, ಒಟ್ಟಾರೆ 28.32 TMC ಅಡಿ ನೀರು ಸಂಗ್ರಹವಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number