Connect with us

    ಮೂರು ದಿನ ‘ಮಳೆರಾಯನ ಜಿಲ್ಲಾ ಪ್ರವಾಸ’ | ಹರ್ಷ ಮೂಡಿಸುವ ಮುನ್ಸೂಚನೆ ನೀಡಿದ ವರುಣ ದೇವ

    ಮಳೆ

    ಮುಖ್ಯ ಸುದ್ದಿ

    ಮೂರು ದಿನ ‘ಮಳೆರಾಯನ ಜಿಲ್ಲಾ ಪ್ರವಾಸ’ | ಹರ್ಷ ಮೂಡಿಸುವ ಮುನ್ಸೂಚನೆ ನೀಡಿದ ವರುಣ ದೇವ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 19 APRIL 2024
    ಚಿತ್ರದುರ್ಗ: ಬಿಸಿಲಿನ ತೀವ್ರತೆಗೆ ಕಂಗಲಾಗಿದ್ದ ಜನತೆಗೆ ಕಳೆದ ಕೆಲ ದಿನಗಳಿಂದ ವಾತಾವರಣದಲ್ಲಿ ಆದ ಬದಲಾವಣೆ ಕೊಂಚ ನೆಮ್ಮದಿ ತಂದಿದೆ. ಸಂಜೆ ವೇಳೆಗೆ ಗಾಳಿ ಜತೆ ಬರುತ್ತಿರುವ ಮಳೆರಾಯ ನಾನಿದ್ದೇನೆ ಎಂಬ ಧೈರ್ಯವನ್ನು ನಾಲ್ಕೈದು ದಿನದಿಂದ ತುಂಬಿದೆ. ಇದೀಗ ಸತತ ಮೂರು ದಿನ ಮಳೆರಾಯ ಜಿಲ್ಲಾ ಪ್ರವಾಸ ನಿಗಧಿಗೊಳಿಸಿದಂತೆ ಕಾಣುತ್ತಿದೆ.

    ಮಳೆರಾಯನ ಜಿಲ್ಲಾ ಪ್ರವಾಸವನ್ನು ಖದ್ದು ಹವಾಮಾನ ಇಲಾಖೆ ಖಚಿತ ಪಡಿಸಿದೆ. ಶುಕ್ರವಾರ ಚಿತ್ರದುರ್ಗ ಸೇರಿದಂತೆ ದಾವಣಗೆರೆ, ಶಿವಮೊಗ್ಗ, ವಿಜಯನಗರ, ತುಮಕೂರು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ರಭಸವಾಗಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.

    ಕ್ಲಿಕ್ ಮಾಡಿ ಓದಿ: ವದ್ದೀಕೆರೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ | 22 ರಂದು ಬ್ರಹ್ಮ ರಥೋತ್ಸವ

    ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳ ಕೆಲವು ಭಾಗ ಗಳಲ್ಲಿ ಮಳೆ ಬೀಳುವ ಸಂಭವವಿದೆ.

    ಶನಿವಾರದಂದು ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ, ಭಾನುವಾರ ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top