By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: 20 ದಿನಗಳಿಂದ ನಗರದಲ್ಲಿ ಕುಡಿಯಲು ನೀರಿಲ್ಲ | ಪೌರಾಯುಕ್ತರು ಏನು ಮಾಡುತ್ತಿದ್ದಾರೆ? ತರಾಟೆಗೆ ತೆಗೆದುಕೊಂಡ ನಗರಸಭೆ ಸದಸ್ಯರು
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » 20 ದಿನಗಳಿಂದ ನಗರದಲ್ಲಿ ಕುಡಿಯಲು ನೀರಿಲ್ಲ | ಪೌರಾಯುಕ್ತರು ಏನು ಮಾಡುತ್ತಿದ್ದಾರೆ? ತರಾಟೆಗೆ ತೆಗೆದುಕೊಂಡ ನಗರಸಭೆ ಸದಸ್ಯರು

ಮುಖ್ಯ ಸುದ್ದಿ

20 ದಿನಗಳಿಂದ ನಗರದಲ್ಲಿ ಕುಡಿಯಲು ನೀರಿಲ್ಲ | ಪೌರಾಯುಕ್ತರು ಏನು ಮಾಡುತ್ತಿದ್ದಾರೆ? ತರಾಟೆಗೆ ತೆಗೆದುಕೊಂಡ ನಗರಸಭೆ ಸದಸ್ಯರು

News Desk Chitradurga News
Last updated: 26 March 2025 19:38
News Desk Chitradurga News
3 months ago
Share
ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 26 MARCH 2025

ಚಿತ್ರದುರ್ಗ: ನಗರದಲ್ಲಿ ಕಳೆದ 20 ದಿನಗಳಿಂದ ಜನರಿಗೆ ಕುಡಿಯುವ ನೀರು ಬಿಟ್ಟಿಲ್ಲ. ಪೌರಾಯುಕ್ತರು ಏನು ಮಾಡುತ್ತಿದ್ದಾರೆ? ಅಧ್ಯಕ್ಷರ ಮಾತಿಗೆ ಕಿಮ್ಮತ್ತೇ ಕೂಡುವುದಿಲ್ಲ. ಈ ರೀತಿ ಮಾಡಿದರೆ ನಗರದ ಅಭಿವೃದ್ದಿ ಆಗುತ್ತಾ ಮಾತನಾಡಿ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪೌರಾಯುಕ್ತೆ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡದರು.

Also Read: ಸಾಲ ನೀಡಲು ಲಂಚದ ಬೇಡಿಕೆ | ಡಿಸಿಸಿ ಬ್ಯಾಂಕ್ ನೌಕರ ಲೋಕಾಯುಕ್ತ ಬಲೆಗೆ

ಬುಧವಾರ ನಗರಸಭೆಯಲ್ಲಿ ಅಧ್ಯಕ್ಷೆ ಸುಮಿತಾ ಅವರ ಆಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬೇಸಿಗೆ ಕಾಲ ಬಂದರು ಕುಡಿಯುವ ನೀರು ಸಿಗದಿರುವ ಬಗ್ಗೆ ಸಾಕಷ್ಟು ಸದಸ್ಯರ ಆಕ್ರೋಶಕ್ಕೆ ಪೌರಾಯುಕ್ತೆ ರೇಣುಕಾ ಗುರಿಯಾದರು.

ಯುಗಾದಿ, ರಂಜಾನ್ ಹಬ್ಬ ಹತ್ತಿರ ಬಂದಿದೆ. ಎಲ್ಲೆಡೆ ಬೇಸಿಗೆಯ ಬಿಸಿಲು ಧಗೆ ಏರುತ್ತಿದೆ. ಆದರೂ 20 ದಿನಗಳಿಂದ ಜನರಿಗೆ ನೀರು ಸಿಗುತ್ತಿಲ್ಲ. ಮತ ಹಾಕಿರುವ ಜನರು ನಮ್ಮ ಮನೆಗಳಿಗೆ ಬಂದು ಮನಃ ಬಂದಂತೆ ಕೆಟ್ಟದಾಗಿ ಮಾತಾಡುತ್ತಾರೆ.

ನೀವು ಎ.ಸಿ. ರೂಮಿನಲ್ಲಿ ನಿಮ್ಮದಿಯಾಗಿ ಮಲಗಿರುತ್ತಿರಾ. ಯಾರು ಇದಕ್ಕೆ ಉತ್ತರ ಕೊಡಬೇಕು ಎಂದು ಅಧ್ಯಕ್ಷೆ ಸುಮೀತಾ, ಉಪಾಧ್ಯಕ್ಷೆ ಶ್ರೀದೇವಿ ಸೇರಿದಂತೆ ಸದಸ್ಯರಾದ ಶ್ರೀನಿವಾಸ್, ದೀಪು, ಮೊಹಮ್ಮದ್ ಜೈಲುದ್ದಿನ್, ಶಶಿಧರ್, ಮೀನಾಕ್ಷಿ, ಮಹಮದ್ ಅಹ್ಮದ್ ಪಾಷ ಅವರುಗಳು ಪೌರಾಯುಕ್ತರ ಮೇಲೆ ಹರಿಹಾಯ್ದರು.

Also Read: ನಿರುದ್ಯೋಗಿಗಳಿಗೆ ಸುವರ್ಣವಕಾಶ | ನೇರ ನೇಮಕಾತಿ ಸಂದರ್ಶನ ಮಾರ್ಚ್ 28ಕ್ಕೆ

ಇದಕ್ಕೆ ಪೌರಾಯುಕ್ತರು ಉತ್ತರಿಸುತ್ತಾ, ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದರು.

ಕುಡಿಯಲು ನೀರು ಕೊಡಿ ಎಂದು ಜನರು ಮನೆ ಬಾಗಿಲಿಗೆ ಬಂದು ಗಲಾಟೆ ಮಾಡುತ್ತಾರೆ. ಏನು ಸಮಸ್ಯೆ ಎಂದು ಕೇಳಲು ಇಂಜಿನಿಯರ್ ಮುನಿಸ್ವಾಮಿ ಪೋನ್ ಮಾಡಿದರೆ ಪೋನ್ ರೀಸಿವ್ ಮಾಡುವುದಿಲ್ಲ. ಪೌರಾಯುಕ್ತರೆ ಮಾತನಾಡಿ ಬಾಯಿಗೆ ಏನು ಲಕ್ವಾ ಹೊಡಿದಿದೆಯಾ? ಎಂದು 25 ನೇ ವಾರ್ಡಿನ ಸದಸ್ಯ ಮೊಹಮ್ಮದ್ ಜೈಲುದ್ದೀನ್ ಏರುಧ್ವನಿಯಲ್ಲಿ ಮಾತನಾಡಿದರು.

ಇದಕ್ಕೆ ಪೌರಾಯುಕ್ತರು ಮೌನ ವಹಿಸಿದ್ದು ಸದಸ್ಯರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಇಂಜಿನಿಯರ್ ಮುನಿಸ್ವಾಮಿ ಅವರನ್ನು ಕೂಡಲೇ ಅಮಾನತ್ತು ಮಾಡಿ ಎಂದು ಒತ್ತಾಯಿಸಿದರು.

Also Read: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?

ಚಿತ್ರದುರ್ಗದ ಬಹುತೇಕ ನಗರಸಭೆ ಆಸ್ತಿಯನ್ನು ಸದಸ್ಯರು ಉಳಿಸಿಕೊಟ್ಟಿದ್ದೆವೆ. ಆದರೂ ಇವುಗಳನ್ನು ಒಳಗಿಂದ ಒಳಗೆ ಮಾರಾಟ ಮಾಡಿರುವ ವಿಷಯ ಕೇಳಿ ಬರುತ್ತಿದೆ. ಒಂದು ವೇಳೆ ಯಾರಿಗಾದರೂ ಮಾರಾಟ ಮಾಡಿದರೆ ಜೈಲಿಗೆ ಕಳಿಸಬೇಕಾಗುತ್ತದೆ, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸದಸ್ಯ ಶ್ರೀನಿವಾಸ್ ಹೇಳಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Chairperson Sumita RaghavendraChitradurgaChitradurga newsChitradurga UpdatesGeneral MeetingKannada Latest NewsKannada NewsMembersMunicipal Commissioner RenukaMunicipal CouncilWaterಅಧ್ಯಕ್ಷೆ ಸುಮಿತಾ ರಾಘವೇಂದ್ರಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ನಗರಸಭೆನೀರುಪೌರಾಯುಕ್ತೆ ರೇಣುಕಾಸದಸ್ಯರುಸಾಮಾನ್ಯ ಸಭೆ
Share This Article
Facebook Email Print
Previous Article ನಿರುದ್ಯೋಗಿಗಳಿಗೆ ಸುವರ್ಣವಕಾಶ | ನೇರ ನೇಮಕಾತಿ ಸಂದರ್ಶನ ಮಾರ್ಚ್ 28ಕ್ಕೆ
Next Article ಕೊಳಾಳು ಗ್ರಾಮದಲ್ಲಿ 2 ಚಿರತೆ ಮರಿ ಪತ್ತೆ | ಆಡುಮಲ್ಲೇಶ್ವರ ಮೃಗಾಯಲಕ್ಕೆ ಹಸ್ತಾಂತರ
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
ಸೋಲು ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‍ ಗೌಡ
ಮುಖ್ಯ ಸುದ್ದಿ
Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up