By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಪುಟ್ಟ ಕಂದನ ಪ್ರಾಣ ತೆಗೆದ ವಿದ್ಯುತ್ | ಮಕ್ಕಳನ್ನು ತೋಟಕ್ಕೆ ಕರೆದೊಯ್ಯುವ ಮುನ್ನಾ ಈ ಸುದ್ದಿ ಓದಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಪುಟ್ಟ ಕಂದನ ಪ್ರಾಣ ತೆಗೆದ ವಿದ್ಯುತ್ | ಮಕ್ಕಳನ್ನು ತೋಟಕ್ಕೆ ಕರೆದೊಯ್ಯುವ ಮುನ್ನಾ ಈ ಸುದ್ದಿ ಓದಿ

ಕ್ರೈಂ ಸುದ್ದಿ

ಪುಟ್ಟ ಕಂದನ ಪ್ರಾಣ ತೆಗೆದ ವಿದ್ಯುತ್ | ಮಕ್ಕಳನ್ನು ತೋಟಕ್ಕೆ ಕರೆದೊಯ್ಯುವ ಮುನ್ನಾ ಈ ಸುದ್ದಿ ಓದಿ

chitradurganews.com
Last updated: 15 May 2024 20:14
chitradurganews.com
1 year ago
Share
ಬಾಲಕ ವೆಂಕಟೇಶಮೂರ್ತಿ
ಬಾಲಕ ವೆಂಕಟೇಶಮೂರ್ತಿ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 15 MAY 2024

ಹೊಸದುರ್ಗ: ಬೆಸ್ಕಾಂ ಹಾಗೂ ರೈತನ ನಿರ್ಲಕ್ಷ್ಯದ ಕಾರಣಕ್ಕೆ ಪುಟ್ಟ ಜೀವವೊಂದು ಬಲಿಯಾದ ದುಃಖದ ಸಂಗತಿ ಹೊಸದುರ್ಗ ತಾಲೂಕಿನಲ್ಲಿ ಘಟಿಸಿದೆ.

ಜಮೀನಿನಲ್ಲಿ ಗೃಹ ಬಳಕೆಗೆಂದು ವೈರ್ ಮೂಲಕ ತೆಗೆದುಕೊಂಡು ಹೋಗಿದ್ದ ತಂತಿ ನೆಲಕ್ಕೆ ಜಗ್ಗಿದ್ದು, ಪುಟ್ಟ ಬಾಲಕ ತೆಂಗಿನ ಗರಿ ಎಳೆಯುವಾಗ ಅದರ ಮೂಲಕ ವಿದ್ಯುತ್ ಪ್ರವಹಿಸಿ ಅನಾಹುತ ನಡೆದು ಹೋಗಿದೆ.

ಇದನ್ನೂ ಓದಿ: ಡಾ.ಬಿ.ಎಲ್.ವೇಣುಗೆ ಅನಾರೋಗ್ಯ | ಫೋರ್ಟೀಸ್ ಆಸ್ಪತ್ರೆಗೆ ದಾಖಲು, ಚೇತರಿಕೆ

ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿಯ ಕಬ್ಬಳ ಗ್ರಾಮದ ಸವಿತಾ ಹಾಗೂ ರಂಗಸ್ವಾಮಿ ಎಂಬುವವರ 5 ವರ್ಷದ ಪುತ್ರ ವೆಂಕಟೇಶ್ ಮೂರ್ತಿ ಮೃತ ಬಾಲಕ.

ಕಬ್ಬಳ ಗ್ರಾಮದ ರಂಗಸ್ವಾಮಿ, ಸವಿತಾ ದಂಪತಿಗೆ ಸಂಬಂಧಿಸಿದ ಜಮೀನು ಪಕ್ಕದ ಬೊಮ್ಮೇನಹಳ್ಳಿ ಬಳಿಯಿದ್ದು, ತಾಯಿ ಸವಿತಾ ಜೊತೆಗೆ ಮೇ.14 ರಂದು ಪುತ್ರ ವೆಂಕಟೇಶಮೂರ್ತಿಯನ್ನು ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಬರ ಪರಿಹಾರ ವಿತರಣೆ ಮುಂದಾದ ಜಿಲ್ಲಾಡಳಿತ | ರೈತರಿಗೆ ಸಹಾಯವಾಣಿ ಸ್ಥಾಪನೆ | ಚಿತ್ರದುರ್ಗ ಜಿಲ್ಲೆಯ ಎಷ್ಟು ರೈತರಿಗೆ, ಎಷ್ಟು ಪರಿಹಾರ

ಗಾಳಿ, ಮಳೆಗೆ ಜಮೀನಿನಲ್ಲಿ ಬಿದ್ದಿದ್ದ ತೆಂಗಿನ ಗರಿಗಳನ್ನು ತಾಯಿ ಸವಿತಾ ಎಳೆದು ಬದುವಿಗೆ ಹಾಕುತ್ತಿದ್ದಾರೆ. ಈ ವೇಳೆ ಬಾಲಕ ಕೂಡಾ ಒಂದು ಗರಿ ಎಳೆದಿದ್ದು, ಅಲ್ಲೇ ನೆಲದಿಂದ ಸುಮಾರು 3 ಅಡಿ ಎತ್ತರದಲ್ಲಿದ್ದ ವಿದ್ಯುತ್ ತಂತಿ ಬಾಲಕಿನಿಗೆ ತಾಗಿದೆ.

ಈ ವೇಳೆ ತಾಯಿ ಸವಿತಾ ಒಣಗಿದ ಕೋಲಿನ ಸಹಾಯದಿಂದ ಬಾಲಕನನ್ನು ಬಿಡಿಸಿ, ಪತಿ ರಂಗಸ್ವಾಮಿಗೆ ಪೋನ್ ಮಾಡಿದ್ದಾರೆ. ತಕ್ಷಣ ಬಂದು ಬೆಲಗೂರು ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜವೀರ ಮದಕರಿ ನಾಯಕರ ಪುಣ್ಯಸ್ಮರಣೆ | ಅದ್ದೂರಿ ಪಟ್ಟಾಭಿಷೇಕಕ್ಕೆ ನಿರ್ಧಾರ

ಕಬ್ಬಳ ಗ್ರಾಮದ ಸಣ್ಣರಂಗಪ್ಪ ಎಂಬುವವರು ತಮ್ಮ ತೊಟದ ಮನೆಗೆ ನಿರಂತರ ಜ್ಯೋತಿ ಮೂಲಕ ಇವರ ತೋಟದ ಮೂಲಕ ವಿದ್ಯುತ್ ವೈಯರ್ ಎಳೆದುಕೊಂಡು ಹೋಗಿದ್ದರು.

ಗಾಳಿಗೆ ಆ ವೈಯರ್ ನೆಲಕ್ಕೆ ಜಗ್ಗಿತ್ತು. ಈ ಬಗ್ಗೆ ಸಣ್ಣ ರಂಗಪ್ಪನಿಗೆ ತಿಳಿಸಿ ಬದುವಿನಲ್ಲಿ ಎಳೆಯುವಂತೆ ಹೇಳಿದ್ದರೂ ಎಳೆದಿರಲಿಲ್ಲ. ಈ ಬಗ್ಗೆ KEB ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷಿಸಿದ್ದರು ಎಂದು ದೂರಿ ಬಾಲಕನ ತಾಯಿ ಸಣ್ಣ ರಂಗಪ್ಪ ಹಾಗೂ ಕೆಇಬಿ ಅಧಿಕಾರಿಗಳ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BescomBoyboy deadcrimeelectricityKEBPoliceಅಪರಾಧಕೆಇಬಿಪೊಲೀಸ್ಬಾಲಕಬಾಲಕ ಮೃತಬೆಸ್ಕಾಂವಿದ್ಯುತ್
Share This Article
Facebook Email Print
Previous Article ರಾಜವೀರ ಮದಕರಿ ನಾಯಕರ ಪುಣ್ಯಸ್ಮರಣೆ | ಅದ್ದೂರಿ ಪಟ್ಟಾಭಿಷೇಕಕ್ಕೆ ನಿರ್ಧಾರ
Next Article ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಕ್ಷದ ಪದಾಧಿಕಾರಿಗಳ ಸಭೆ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ | ವೈ.ಎ.ನಾರಾಯಣಸ್ವಾಮಿ
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up