CHITRADURGA NEWS | 24 JUNE 2025
ಚಿತ್ರದುರ್ಗ: ಯುದ್ಧೋನ್ಮಾದದಲ್ಲಿ ಮುಳುಗಿರುವ ಇರಾನ್ ಹಾಗೂ ಇಸ್ರೇಲ್ನಲ್ಲಿ ಸಿಲುಕಿರುವ ಬೇರೆ ಬೇರೆ ದೇಶಗಳ ಪ್ರಜೆಗಳು ಅಲ್ಲಿಂದ ಹೊರಗೆ ಬರಲು ಹರಸಾಹಸ ಮಾಡುತ್ತಿದ್ದಾರೆ.
ಇದೇ ರೀತಿ ಭಾರತದ ಪ್ರಜೆಗಳು ಕೂಡಾ ಅಲ್ಲಿ ಸಿಲುಕಿದ್ದು, ಕೇಂದ್ರ ಸರ್ಕಾರ ನಿರಂತರವಾಗಿ ಅಲ್ಲಿಂದ ಸುರಕ್ಷಿತವಾಗಿ ವಾಪಾಸು ಕರೆತರುವಲ್ಲಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಿದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ಎಂಎಸ್ಸಿ ಪರಿಸರ ಸೂಕ್ಷ್ಮ ಅಧ್ಯಯನಕ್ಕಾಗಿ ಇಸ್ರೇಲ್ಗೆ ತೆರಳಿದ್ದ ಚಿತ್ರದುರ್ಗದ ಯುವಕ ಅಲ್ಲಿನ ಯುದ್ಧದ ಅಪಾಯದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ಚಿತ್ರದುರ್ಗದ ಜಬೀವುಲ್ಲಾ ಎಂ.ಎ ಇಸ್ರೇಲ್ನಲ್ಲಿ ಸಿಲುಕಿದ್ದರು. ಈ ವಿಚಾರವನ್ನು ಆತನ ಕುಟುಂಬದವರು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅವರ ಗಮನಕ್ಕೆ ತಂದಿದ್ದು, ಶಾಸಕರು ದೆಹಲಿಯಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಜಬೀವುಲ್ಲಾ ಸುರಕ್ಷಿತವಾಗಿ ಮರಳಲು ನೆರವಾಗಿದ್ದಾರೆ.
ಇದನ್ನೂ ಓದಿ: ಹೊಸದುರ್ಗ ತಾಲೂಕಿನಲ್ಲಿ ಭೀಕರ ಕೊಲೆ | ಹಾಡಹಗಲೆ ಮನೆಗೆ ನುಗ್ಗಿ ಹತ್ಯೆ
ಇಸ್ರೇಲ್ನಲ್ಲಿ ಎಂಎಸ್ಸಿ ಅಧ್ಯಯನಕ್ಕೆ ತೆರಳಿದ್ದ ಜಬಿಉಲ್ಲಾ ಅವರ ಜೊತೆಗೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಪೋನ್ ಮೂಲಕ ಮಾತನಾಡಿದ್ದು, ಕೇಂದ್ರ ಸರ್ಕಾರ ಅಲ್ಲಿದ್ದ ಭಾರತೀಯ ಪ್ರಜೆಗಳನ್ನು ಕರೆತಂದಿರುವ ವಿಚಾರ ತಿಳಿದಿದೆ.
ಆದರೆ, ದೆಹಲಿಯ ಕರ್ನಾಟಕ ಭವನದಲ್ಲಿದ್ದ ಜಬೀವುಲ್ಲಾ ಅವರ ಬಳಿ ಕರ್ನಾಟಕಕ್ಕೆ ಮರಳಲು ಹಣದ ಸಮಸ್ಯೆ ಎದುರಾಗಿದ್ದು, ಶಾಸಕರು, ವಿಮಾನದ ಟಿಕೇಟ್ ಬುಕ್ ಮಾಡಿಸಿ, ಅಲ್ಲಿಂದ ಚಿತ್ರದುರ್ಗಕ್ಕೆ ಕರೆತರಲು ನೆರವಾಗಿದ್ದಾರೆ ಎಂದು ಜಬೀವುಲ್ಲಾ ಸ್ಮರಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number