By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Sasvehalli irrigation: ಶಿವಕುಮಾರ ಸ್ವಾಮೀಜಿ ಹುಟ್ಟೂರು ಮುತ್ತುಗದೂರು ಕೆರೆಗೆ ಹರಿದ ಭದ್ರೆ | ಭಕ್ತರಲ್ಲಿ ಸಂಭ್ರಮ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Sasvehalli irrigation: ಶಿವಕುಮಾರ ಸ್ವಾಮೀಜಿ ಹುಟ್ಟೂರು ಮುತ್ತುಗದೂರು ಕೆರೆಗೆ ಹರಿದ ಭದ್ರೆ | ಭಕ್ತರಲ್ಲಿ ಸಂಭ್ರಮ

ಮುಖ್ಯ ಸುದ್ದಿ

Sasvehalli irrigation: ಶಿವಕುಮಾರ ಸ್ವಾಮೀಜಿ ಹುಟ್ಟೂರು ಮುತ್ತುಗದೂರು ಕೆರೆಗೆ ಹರಿದ ಭದ್ರೆ | ಭಕ್ತರಲ್ಲಿ ಸಂಭ್ರಮ

News Desk Chitradurga News
Last updated: 25 September 2024 11:12
News Desk Chitradurga News
9 months ago
Share
Sasvehalli irrigation
ಜಾಜೂರು ಸಮೀಪದ ಮುತ್ತುಗದೂರು ಕೆರೆಗೆ ಭದ್ರೆ ನೀರು
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 24 SEPTEMBER 2024
ಚಿತ್ರದುರ್ಗ: ತರಳಬಾಳು ಮಠ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟೂರು ಮುತ್ತುಗದೂರಿನ ಕೆರೆಗೆ ಭದ್ರೆ ನೀರು ಹರಿದಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗೆ ಮಂಗಳವಾರ ನೀರು ಹರಿದು ಬಂದಿದೆ. ಈ ಮೂಲಕ ಹಲವು ದಶಕಗಳ ನಿರೀಕ್ಷೆ ಈಡೇರಿದೆ. ನೀರು ಬರುವ ದೃಶ್ಯವನ್ನು ಕಂಡು ರೈತರು ಪುಳಕಿತರಾದರು.

ನೀರು ಬರುತ್ತಿರುವ ವಿಷಯ ತಿಳಿದ ಮುತ್ತುಗದೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ವೀಕ್ಷಿಸಿದರು. ತರಳಬಾಳು ಮಠದ ಹಿರಿಯ ಗುರುಗಳಾದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಅವಧಿಯಲ್ಲೇ ಕೆರೆಗೆ ನೀರು ಹರಿದು ಬಂದಿರುವುದು ಗ್ರಾಮಸ್ಥರಲ್ಲಿ ಸಂತಸ ಉಂಟುಮಾಡಿದೆ.

ಕ್ಲಿಕ್ ಮಾಡಿ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ | ಬೈಕ್‌ ರ‍್ಯಾಲಿಗೆ ಸಿದ್ದತೆ

ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸಲು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕೈಗೊಳ್ಳಲಾಗಿತ್ತು. ಮಂಗಳವಾರ ಬೆಳಿಗ್ಗೆ ಸಾಸ್ವೆಹಳ್ಳಿಯಿಂದ ಕೊಳವೆ ಮೂಲಕ ನೀರು ಹರಿಸಲಾಯಿತು. ಸಮೀಪದ ಸಾಸಲು ಗ್ರಾಮದ ಬೆಟ್ಟದ ಮೇಲಿನ ನೀರು ವಿತರಣಾ ಸಂಗ್ರಹಣೆ ಸ್ಥಳಕ್ಕೆ ತಲುಪಿ, ಅಲ್ಲಿಂದ ಸಮೀಪದ ಮುತ್ತುಗದೂರು ಕೆರೆಗೆ ಹರಿಯಿತು.

ಕ್ಲಿಕ್ ಮಾಡಿ ಓದಿ: ನಮ್ಮ ಹೋರಾಟ ಸಿರಿಗೆರೆ ಸ್ವಾಮೀಜಿ ವಿರುದ್ಧವಲ್ಲ | ನಾವು ಹೈಕೋರ್ಟ್‌ ಮೆಟ್ಟಿಲೇರಿಲ್ಲ | ರೈತ ಮುಖಂಡರ ಸ್ಪಷ್ಟನೆ

ಕೆರೆಯ ಜಾಕ್‌ವೆಲ್‌ ಸ್ಥಳದಲ್ಲಿ ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ್‌ ಗುಂಗೆ, ಸಾಸ್ವೆಹಳ್ಳಿ ಏತ ನೀರಾವರಿಯ ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಎಇಇ, ಮಾಜಿ ಶಾಸಕ ಪಿ.ರಮೇಶ್‌ ಹಾಗೂ ಮುತ್ತುಗದೂರು ಗ್ರಾಮದ ಮುಖಂಡರಾದ ಎಂ.ಕೆ. ರುದ್ರಪ್ಪ, ಸಾಸಲು ಎಂ. ದೇವರಾಜ್‌, ಎಚ್‌.ಎಸ್‌. ವೀರಣ್ಣ, ಸಾಸಲುಹಳ್ಳ ಓಂಕಾರಸ್ವಾಮಿ, ಜಿವಿಪಿಆರ್‌ ಕಂಪನಿಯ ವ್ಯವಸ್ಥಾಪಕ ವಿನೋದ್‌ ರೆಡ್ಡಿ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BhadreBhaktaKereMuthugadurSambharamSasvehalli Eta IrrigationShivakumar SwamijiTownಊರುಕೆರೆಭಕ್ತರುಭದ್ರೆಮುತ್ತುಗದೂರುಶಿವಕುಮಾರ ಸ್ವಾಮೀಜಿಸಂಭ್ರಮಸಾಸ್ವೆಹಳ್ಳಿ ಏತ ನೀರಾವರಿ
Share This Article
Facebook Email Print
Previous Article Hindu Maha Ganapati 1 Hindu Mahaganapati Shobhayatra: ಹಿಂದೂ ಮಹಾಗಣಪತಿ ಶೋಭಾಯಾತ್ರೆ | ಬೈಕ್‌ ರ‍್ಯಾಲಿಗೆ ಸಿದ್ದತೆ
Next Article Cyber ಪೊಲೀಸರ ಕಾರ್ಯಾಚರಣೆ | ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಬಂಧನ
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up