Connect with us

Ration rice seized: ಪಡಿತರ ಅಕ್ಕಿ ಅಕ್ರಮ ಸಾಗಣೆ | ನಾಲ್ವರ ವಿರುದ್ಧ ದೂರು ದಾಖಲು

ration-rice-seized

ಮುಖ್ಯ ಸುದ್ದಿ

Ration rice seized: ಪಡಿತರ ಅಕ್ಕಿ ಅಕ್ರಮ ಸಾಗಣೆ | ನಾಲ್ವರ ವಿರುದ್ಧ ದೂರು ದಾಖಲು

CHITRADURGA NEWS | 30 JULY 2024
ಚಿತ್ರದುರ್ಗ: ಪಡಿತರ ಅಕ್ಕಿ(Ration rice seized)ಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ನಾಲ್ವರ ವಿರುದ್ಧ ದೂರು ದಾಖಲಿಸಿರುವ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಸಮೀಪದ ವೇ ಬ್ರಿಡ್ಜ್‌ ಪಕ್ಕದಲ್ಲಿ ಪಡಿತರ ಅಕ್ಕಿಯನ್ನು ಲಾರಿಗೆ ಲೋಡ್‌ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪಿಎಸ್‌ಐ ಈರೇಶ್‌ ನೇತೃತ್ವದ ತಂಡ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪಡಿತರ ಯೋಜನೆಯ ಅಂದಾಜು 13 ಟನ್‌ನಷ್ಟು ಅಕ್ಕಿಯನ್ನು ವಶಕ್ಕೆ ಪಡೆದಿದೆ. ಅಕ್ಕಿಗೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳು ಇಲ್ಲದಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಬಗ್ಗೆ ಧ್ವನಿ ಎತ್ತಿದೆ ಎಚ್‌.ಡಿ.ದೇವೇಗೌಡ

ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಮೊಳಕಾಲ್ಮುರು ತಾಲ್ಲೂಕಿನ ಬೊಮ್ಮದೇವರಹಳ್ಳಿಯ ಹೇಳರಪ್ಪ, ಸಂಡೂರು ತಾಲ್ಲೂಕಿನ ಎನ್‌.‌ಬಸಾಪುರ ಗ್ರಾಮದ ರಾಮಣ್ಣ, ಚಳ್ಳಕೆರೆ ನಗರದ ಬಾಬಣ್ಣ, ಓಬಳೇಶ್‌ ವಿರುದ್ಧ ತಾಲ್ಲೂಕು ಆಹಾರ ನಿರೀಕ್ಷಕ ಗೀತಾಂಜನೇಯ ಅವರು ದೂರು ದಾಖಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version