Connect with us

    ದಿವ್ಯ ಕ್ಷಣಕ್ಕೆ ಸಾಕ್ಷಿಯಾದ ರಂಗಕಾಶಿ ಸಾಣೇಹಳ್ಳಿ | ಸಮಾಗಮವಾಯ್ತು ಮಲೆನಾಡು, ಬಯಲುಸೀಮೆ ಸೊಬಗು

    ಮುಖ್ಯ ಸುದ್ದಿ

    ದಿವ್ಯ ಕ್ಷಣಕ್ಕೆ ಸಾಕ್ಷಿಯಾದ ರಂಗಕಾಶಿ ಸಾಣೇಹಳ್ಳಿ | ಸಮಾಗಮವಾಯ್ತು ಮಲೆನಾಡು, ಬಯಲುಸೀಮೆ ಸೊಬಗು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 FEBRUARY 2024
    ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದ ದಿವ್ಯ ಕ್ಷಣಕ್ಕೆ ರಂಗಕಾಶಿ ಸಾಣೇಹಳ್ಳಿ ಶುಕ್ರವಾರ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿರುವ ಅಂತರ್‌ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ವಿದ್ಯುಕ್ತ ಚಾಲನೆ ದೊರೆಯಿತು.

    ಇದನ್ನೂ ಓದಿ: ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ.ಎಲ್‌.ವೇಣು | ಅಭಿಮಾನಿಗಳ ಮನದಲ್ಲಿ ಸಂತಸ

    ಬೆಳಿಗ್ಗೆ ತಹಶೀಲ್ದಾರ್‌ ತಿರುಪತಿ ಪಾಟೀಲ ರಾಷ್ಟ್ರ ಧ್ವಜಾರೋಹಣ, ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ. ಚಂದ್ರಪ್ಪ ನಾಡ ಧ್ವಜಾರೋಹಣ, ಕೋಶಾಧ್ಯಕ್ಷ ಆರ್.‌ಮಲ್ಲಿಕಾರ್ಜುನಯ್ಯ ಪರಿಷತ್‌ ಧ್ವಜಾರೋಹಣ ನೇರವೇರಿಸಿದರು. ಬಳಿಕ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಪಂಡಿತಾರಾಧ್ಯ ಶ್ರೀಗಳು ರಚಿಸಿರುವ 126 ಗ್ರಂಥಗಳ ಮೆರವಣೆಗೆ ಶ್ರೀಮಠದಿಂದ ಆರಂಭವಾಯಿತು. ಸಾಣೇಹಳ್ಳಿಯ ಜಾನಪದ ಕಲಾತಂಡಗಳೊಂದಿಗೆ ಪ್ರತಿ ಬೀದಿಯಲ್ಲೂ ಭವ್ಯ ಮೆರವಣಿಗೆ ಸಾಗಿತು.

    ಉಭಯ ಜಿಲ್ಲೆಗಳ 15 ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಾಣೇಹಳ್ಳಿಯ ಅಂಗಳದಲ್ಲಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಾಹಿತ್ಯ ಸಮಾಗಮವನ್ನು ಸಾಹಿತ್ಯಾಭಿಮಾನಿಗಳು ಉತ್ಸುಕರಾಗಿ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಟ್ರ್ಯಾಕ್ಟರ್ ಬಸ್ ಅಪಘಾತ | ಪಲ್ಟಿಯಾದ ರಾಜಹಂಸ ಬಸ್‌

    ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷರಾಗಿದ್ದು, ಸಾಹಿತ್ಯ ಸಮ್ಮೇಳನದ ಅಂಗವಾಗಿ ಕುವೆಂಪು ಮಹಾದ್ವಾರ’, ‘ತರಾಸು ಮಹಾಮಂಟಪ’ ಹಾಗೂ ಅಲ್ಲಮಪ್ರಭು ಹೆಸರಿನ ಮೂರು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ.

    ಕಸಾಪ ಅಧ್ಯಕ್ಷ ಮಹೇಶ್‌ ಜೋಷಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಸಾಪ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್‌ ಉಪಸ್ಥಿತರಿರುವರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top