By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ

ಮುಖ್ಯ ಸುದ್ದಿ

ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ

chitradurganews.com
Last updated: 29 June 2025 20:23
chitradurganews.com
31 minutes ago
Share
Gavayi smaranothsava
ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಗೀತಾ ಗಾಯನ ಕಾರ್ಯಕ್ರಮ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 29 JUNE 2025

ಚಿತ್ರದುರ್ಗ: ಗಾನಯೋಗಿ ಪಂಚಾಕ್ಷರ ಗವಾಯಿಗಳು ಮತ್ತು ಪುಟ್ಟರಾಜ ಕವಿ ಗವಾಯಿಗಳು ಸಮಾಜ, ಸಂಗೀತ ಮತ್ತು ದೀನದಲಿತರ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಗುರುಮಠಕಲ್‌ನ ಶ್ರೀ ಶಾಂತವೀರ ಮುರುಘ ಶ್ರೀಗಳು ತಿಳಿಸಿದರು.

ಶ್ರೀ ಗಾನಯೋಗಿ ಸಂಗೀತ ಬಳಗದಿಂದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಲಿಂ.ಪಂಚಾಕ್ಷರ ಗವಾಯಿಗಳ 81ನೇ ಹಾಗೂ ಲಿಂ. ಡಾ.ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯ ಸ್ಮರಣೋತ್ಸವದ ಸಾನಿಧ್ಯವಹಿಸಿ ಮಾತನಾಡಿದರು.

ಇದನ್ನೂ ಓದಿ: ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ

ಗಾನಯೋಗಿ ಪಂಡಿತ್ ಪಂಚಾಕ್ಷರ ಗವಾಯಿ ಒಬ್ಬ ಹಿಂದೂಸ್ತಾನಿ ಸಂಗೀತಗಾರ ಮತ್ತು ಕರ್ನಾಟಕದ ಗುರುವಾಗಿದ್ದರು, ಪಂಚಾಕ್ಷರ ಗವಾಯಿ ತಬಲಾ ಜೊತೆಗೆ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಶೈಲಿಗಳೆರಡರಲ್ಲೂ ಪರಿಣಿತರಾಗಿ ಬೆಳೆದು ಜನಪ್ರಿಯರಾದರು. ಹಾನಗಲ್ ಕುಮಾರ ಸ್ವಾಮೀಜಿಯವರ ಆಜ್ಞೆಯಂತೆ, ಅವರು ಅಂಧ ಮತ್ತು ಅನಾಥ ಮಕ್ಕಳಿಗೆ ಸಂಗೀತದಲ್ಲಿ ತರಬೇತಿ ನೀಡಲು ಪ್ರಾರಂಭಿಸಿದರು.

ಗವಾಯಿಗಳು ಬ್ರಹ್ಮಚಾರಿಯಾಗಿ ಉಳಿದು ಕಡಿಮೆ ಸೌಲಭ್ಯ ಹೊಂದಿರುವ ಜನರಿಗೆ ಸೇವೆ ಸಲ್ಲಿಸಿದರು. ಗದಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ’ವನ್ನು ಸ್ಥಾಪನೆ ಮಾಡಿದ್ದು, ಇದು ಈಗ ಸಂಗೀತ ಪ್ರಿಯರಿಗೆ ತೀರ್ಥಯಾತ್ರೆಯ ಕೇಂದ್ರವಾಗಿದೆ. ಸಾವಿರಾರು ಅಂಧ, ಬಡ ಹುಡುಗರು ಇಲ್ಲಿ ಸಂಗೀತ ಕಲಿತು ದೇಶಾದ್ಯಂತ ಸಂಗೀತಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗಾನಯೋಗಿ ಪಂಚಾಕ್ಷರ ಗವಾಯಿ ಸಮಾಜ, ಸಂಗೀತ ಮತ್ತು ದೀನದಲಿತರ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದರು.

ಇದನ್ನೂ ಓದಿ: ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್

ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ವಿಜಯಕುಮಾರ್ ಗವಾಯಿಗಳ ಕುರಿತು ಉಪನ್ಯಾಸ ನೀಡುತ್ತಾ, ಉಭಯ ಶ್ರೀಗಳು ತಮ್ಮ ಚಿಂತನ ಮಂಥನದಿಂದ ದೊಡ್ಡವರಾಗಿದ್ದಾರೆ. ಸಂಗೀತದ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಗವಾಯಿಗಳಿಗೆ ಭೌತಿಕವಾಗಿ ಅಂಧರಾಗಿದ್ದರೂ ಸಹಾ ಅಂತರಿಕವಾಗಿ ಒಳಗಣ್ಣನಿಂದ ಲೋಕವನ್ನು ನೋಡುತ್ತಾ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದರು ಎಂದರು.

avayi smaranothsava
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ಇಂತಹ ಗವಾಯಿಗಳು ನಮಗೆ ಆದರ್ಶವಾಗಬೇಕಿದೆ. ತಮಲ್ಲಿ ದೃಷ್ಟಿ ಇಲ್ಲದಿದ್ದರೂ ಸಹಾ ಬೇರೆಯವರ ದೃಷ್ಟಿ ಕೋನವನ್ನು ಗವಾಯಿಗಳು ಬದಲಾಯಿಸಿದ್ದಾರೆ. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ್ ಬಸವಣ್ಣ ರವರನ್ನು ದೆಹಲಿಯವರೆಗೂ ಕೊಂಡ್ಯೋದ ಕೀರ್ತಿ ಗವಾಯಿಗಳಿಗೆ ಸಲ್ಲುತ್ತದೆ ಎಂದರು.

ಇದನ್ನೂ ಓದಿ: ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ

ಅಂಧರಾಗಿದ್ದ `ಪಂಚಾಕ್ಷರ ಗವಾಯಿ’ಯವರ ಅವರ ಹುಟ್ಟು ಹೆಸರು ಗದಿಗೆಯ್ಯ. ಹುಟ್ಟು ಕುರುಡರಾದ ಗದಿಗೆಯ್ಯ ಮತ್ತು ಅವರ ಅಣ್ಣ ಗುರುಬಸವ ಇಬ್ಬರೂ ಮಧುರವಾದ ಧ್ವನಿ ಮತ್ತು ಸಂಗೀತ ಪ್ರತಿಭೆಯನ್ನು ಹೊಂದಿದ್ದರು.

ಅವರು ಅನೇಕ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಅವರ ಸಂಗೀತ ಸಾಮಥ್ರ್ಯದಿಂದ ಸಂತಸಗೊಂಡ ಹಾನಗಲ್ಲಿನ ಶ್ರೀ ಕುಮಾರ ಸ್ವಾಮೀಜಿ ಅವರಿಗೆ ಸರಿಯಾದ ಸಂಗೀತ ತರಬೇತಿಯನ್ನು ಏರ್ಪಡಿಸಲು ಮುಂದೆ ಬಂದರು. ತಂಜಾವೂರಿನ ಸಂಗೀತಗಾರರೊಬ್ಬರು ಈ ಮಕ್ಕಳಿಗೆ ಸ್ವಲ್ಪ ಸಮಯ ದವರೆಗೆ ಕರ್ನಾಟಕ ಸಂಗೀತವನ್ನು ಕಲಿಸಿದರು ಎಂದು ತಿಳಿಸಿದರು.

ಇದನ್ನೂ ಓದಿ: ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ

ಅಂಧ ಬಾಲಕ ಗದಿಗೆಯ್ಯ ಸಂಗೀತಾಭ್ಯಾಸ ಮುಂದುವರಿಸಲು ಮೈಸೂರಿಗೆ ಹೋದ. ವಿದ್ವಾನ್ ವೆಂಕಟರಮಣಯ್ಯ ಅವರ ಬಳಿ 4 ವರ್ಷ ಕಲಿತರು. ಗದಿಗೆಯ್ಯ ಮೈಸೂರಿನಲ್ಲಿ ಜನಪ್ರಿಯರಾದರು ಅಖಿಲ ಭಾರತ ವೀರಶೈವ ಸಮಾವೇಶದಲ್ಲಿ ಹಾಡಿ ಮೆಚ್ಚುಗೆ ಗಳಿಸಿದರು. ಕುಮಾರ ಸ್ವಾಮೀಜಿ ಅವರಿಗೆ `ಪಂಚಾಕ್ಷರ ಗವಾಯಿ’ ಎಂಬ ಹೊಸ ಹೆಸರನ್ನಿಟ್ಟರು. ಕುಮಾರ ಸ್ವಾಮೀಜಿ ರೋಣದಲ್ಲಿ ‘ಕುಮಾರೇಶ್ವರ ಕೃಪೋಷಿತ ಸಂಗೀತ – ಸಾಹಿತ್ಯ ಮಹಾವಿದ್ಯಾಲಯ’ವನ್ನು ಪ್ರಾರಂಭಿಸಿದಾಗ, ಪಂಚಾಕ್ಷರ ಗವಾಯಿ ಅದರ ಮುಖ್ಯಸ್ಥರಾದರು.

ತಮ್ಮ ಗುರುಗಳ ಆಶಯವನ್ನು ಪಾಲಿಸಿದರು. ಅವರ ಸಂಚಾರಿ ಸಂಗೀತ ಶಾಲೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳಿದ್ದರು. ಗದಗಿನ ಶ್ರೀಮಂತ ಭಕ್ತ ಶ್ರೀ ಬಸರಿಗಿಡದ ವೀರಪ್ಪ ಅವರು ತಮ್ಮ ಭೂಮಿಯನ್ನು ದಾನ ಮಾಡಿ ಗವಾಯಿಗಾಗಿ ಅಲ್ಲಿ ಒಂದು ಆಶ್ರಮವನ್ನು ನಿರ್ಮಿಸಿದರು. ಈ ಆಶ್ರಮವು ಪ್ರಸಿದ್ಧ ‘ವೀರೇಶ್ವರ ಪುಣ್ಯಾಶ್ರಮ’ ವಾಗ್ಮಿ ಪಂಚಾಕ್ಷರ ಗವಾಯಿಯವರ ಅನೇಕ ವಿದ್ಯಾರ್ಥಿಗಳು ಇಂದು ಪ್ರಸಿದ್ಧ ಸಂಗೀತಗಾರರಾಗಿದ್ದಾರೆ ಎಂದರು.

ಇದನ್ನೂ ಓದಿ: ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ

ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ, ಸಾಧನೆ ಮಾಡಿದ ಹಿರಿಯ ಪತ್ರಕರ್ತರು, ಬರಹಗರರಾದ ಜಿ.ಎಸ್.ಉಜ್ಜನಪ್ಪ, ಜಾನಪದ ಗಾಯಕಿ ಶ್ರೀಮತಿ ಸುಶೀಲಮ್ಮ, ಪರಿಸರ ಪ್ರೇಮಿ ಸಿದ್ದರಾಜು ಜೋಗಿ, ಸಂಗೀತಗರರಾದ ರಾಮಲಿಂಗ ಜಲ್ಲಾಪುರ ಹಾಗೂ ರಂಗಕರ್ಮಿ ಪ್ರಕಾಶ್ ಬಾದರದಿನ್ನಿಯವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಾನಯೋಗಿ ಸಂಗೀತ ಬಳಗದ ಎಂ.ತೋಟಪ್ಪ ಉತ್ತಂಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಮ್ಮ ರುದ್ರಪ್ಪ, ಶ್ರೀಮತಿ ಉಮಾ ರಮೇಶ್, ಶ್ರೀಮತಿ ಪ್ರೇಮ ಬಾಲಚಂದ್ರಪ್ಪ, ಶ್ರೀಮತಿ ನೀಲಮ್ಮ ಬಸಯ್ಯ ಹಾಗೂ ಬ್ರಹ್ಮಚಾರಿ ಕೆ.ಎಂ. ವಿರೇಶ್, ನಾಗರಾಜ್ ಸಗಂ, ಶ್ರೀ ಗಾನಯೋಗಿ ಸಂಗೀತ ಬಳಗದ ಕಾರ್ಯಾಧ್ಯಕ್ಷರಾದ ನಂದೀಶ್ ಜಿ.ಟಿ, ಜ್ಞಾನಮೂರ್ತಿ ಭಾಗವಹಿಸಿದ್ದರು.

ಇದನ್ನೂ ಓದಿ: ಎಣ್ಣೆಯುಕ್ತ ಕೂದಲಿಗೆ ಮೊಸರು ಹಚ್ಚಬೇಕೇ ಅಥವಾ ಬೇಡವೇ? 

ವರದಶಂಕರ್ ಸ್ವಾಗತಿಸಿದರೆ, ಶ್ರೀಮತಿ ಜಗದೀಶ್ವರಿ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ನೇತ್ರಾ ವಂದಿಸಿದರು, ಶ್ರೀಮತಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಹಿಂದೂಸ್ತಾನಿ ಗಾಯಕರಾದ ಆನಂದ ಪಾಟೀಲ್ ಗೀತನಮನ ಸಲ್ಲಿಸಿದರೆ ಕುಮಾರಿ ಗಾನಶ್ರೀಯವರು ಗೀತ ನೃತ್ಯವನ್ನು ಮಾಡಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:achievementChitradurga newsGawaisGS UjjinappaKannada NewsMusicPanchakshara GawaiPandit Puttaraja GawaiSmt. Sharadamma Rudrappa Kalyana MantapaSongThotappa Uttangiಕನ್ನಡ ಸುದ್ದಿಗವಾಯಿಗಳುಚಿತ್ರದುರ್ಗ ನ್ಯೂಸ್ಜಿ.ಎಸ್.ಉಜ್ಜಿನಪ್ಪತೋಟಪ್ಪ ಉತ್ತಂಗಿಪಂಚಾಕ್ಷರ ಗವಾಯಿಪಂಡಿತ್‌ ಪುಟ್ಟರಾಜ ಗವಾಯಿಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪಸಂಗೀತಸಾಧನೆಹಾಡು
Share This Article
Facebook Email Print
Previous Article ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
Leave a Comment

Leave a Reply Cancel reply

Your email address will not be published. Required fields are marked *

ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up