By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಜಯಸುವರ್ಣಪುರದಲ್ಲಿ ಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಜಯಸುವರ್ಣಪುರದಲ್ಲಿ ಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ

ಮುಖ್ಯ ಸುದ್ದಿ

ಜಯಸುವರ್ಣಪುರದಲ್ಲಿ ಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ

News Desk Chitradurga News
Last updated: 10 May 2025 20:32
News Desk Chitradurga News
2 months ago
Share
ಜಯಲಿಂಗೇಶ್ವರ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 10 MAY 2025

ಹೊಸದುರ್ಗ: ತಾಲ್ಲೂಕಿನ ಜಯಸುವರ್ಣಪುರದಲ್ಲಿ ಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಸಮಾರಂಭ ಜರುಗಿತು.

Also Read: ಭಾರತ-ಪಾಕ್‌ ಸಮರ | ವಿವಿ ಸಾಗರ ಜಲಾಶಯ ಪ್ರವಾಸಕ್ಕೆ ಪ್ರವೇಶ ನಿಷೇಧ | ಡ್ಯಾಂ ಭದ್ರತೆಗೆ ಯೋಜನೆ

ಈ ವೇಳೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಜಯಸುವರ್ಣಪುರ ಗ್ರಾಮಕ್ಕೆ ಈ ಹೆಸರು ಬರಲು ಐತಿಹ್ಯವಿದೆ.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಈ ಗ್ರಾಮದಲ್ಲಿ ತಲೆದೋರಿದ್ದ ಯಾವುದೋ ಸಮಸ್ಯೆ ಅಂದು ಜಾಡ್ಯವೋ ಬಾಣಂತಿ ಶಿಶುಮರಣ, ವೃದ್ಧರುಗಳು ಹೀಗೆ ಸಾಲು ಸಾಲು ಮರಣ ಹೊಂದುತ್ತಿರುವ ಹಿನ್ನೆಲ್ಲೆಯಲ್ಲಿ ಗ್ರಾಮದ ಜನತೆ ಜಯದೇವಶ್ರೀಗಳ ಮೊರೆ ಹೋಗಿ ಶ್ರೀಗಳು ಗ್ರಾಮಕ್ಕೆ ಬಂದು ಮುಕ್ಕಾಂ ಮಾಡಿ ಅಲ್ಲಿನ ಸಮಸ್ಯಗೆ ಪರಿಹಾರ ಎನ್ನುವಂತೆ ಕಂಡುಹಿಡಿದು ಗ್ರಾಮದಲ್ಲಿ ನೆಮ್ಮದಿ ನೆಲಸುವಂತೆ ಮಾಡಿದ ಹಿನ್ನೆಲೆಯಲ್ಲಿ ಜಯದೇವ ಜಗದ್ಗುರುಗಳವರ ಅಣತೆಯಂತೆ ಜಯಸುವರ್ಣಪುರ ಎಂಬ ಹೆಸರು ಬಂತು ಎಂದರು.

ಸಾನ್ನಿಧ್ಯವಹಿಸಿದ್ದ ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ತಮ್ಮ ಆರ್ಶೀವಚನದಲ್ಲಿ ತಿರುನಾಳ್ ಪಾಳ್ಯ ಹೋಗಿ ಜಯದೇವರ ಪಾದಸ್ಪರ್ಶದಿಂದ ಜಯಸುವರ್ಣಪುರವಾಗಲು ಹೊಸತಿರುವು ಪಡೆದದ್ದು ಸೋಜಿಗದ್ದು, ಅವರ ದೂರದೃಷ್ಟಿ ಚಿಕಿತ್ಸಕ ಮನೋಭಾವ ಜನರ ದೇಹ ಬೌಧ್ಧಿಕತೆಯ ನಾಡಿಮಿತ ಬಲ್ಲವರಾಗಿದ್ದರಿಂದ ಅದಕ್ಕೆ ಪರಿಹಾರ ಕಂಡು ಹಿಡಿದು ಕೊಡುವ ಧೀರೋದಾತ್ತ ಮನಸ್ಸು ಇತ್ತು ಎಂದು ನುಡಿದರು.

Also Read: ಯೋಧರಿಗಾಗಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ

ಪುಷ್ಪಗಿರಿ ಮಠದ ಡಾ.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಈ ಗ್ರಾಮದ ಜನರು ಕೃಷಿ ಮಾಡಿ ಕೃಷಿಯಿಂದ ಬಂದ ಹಣ ಮತ್ತು ಭಕ್ತರ ದೇಣಿಗೆಯಿಂದ ಹಣದಲ್ಲಿ ದೇವಸ್ಥಾನ ಕಟ್ಟಿಸಿದ್ದಿರಿ. ಕಟ್ಟಿದಮೇಲೆ ಸಾರ್ಥಕವಾಗಬೇಕಾದರೆ ನಿಮ್ಮಲ್ಲಿ ಉತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.

ಈ ಗ್ರಾಮಕ್ಕೆ ಶ್ರೀ ಮುರುಘಾಮಠದ ಶ್ರೀ ಜಯದೇವ ಸ್ವಾಮಿಗಳ ಆಶೀರ್ವಾದ ಮಾಡಿದ್ದಾರೆ. ಊರಿನ ಜನರು ಪುಣ್ಯವಂತರು ಎಂದು ಸ್ಮರಿಸಿದರು

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ನಿವೃತ್ತ ಜಿಲ್ಲಾಧಿಕಾರಿಗಳಾದ ಶ್ರೀ ರಂಗಯ್ಯನವರು, ನಿವೃತ್ತ ಐ.ಪಿ.ಎಸ್ ಆದ ಎಸ್.ಎನ್ ಸಿದ್ದರಾಮಪ್ಪ ಮತನಾಡಿದರು.

ಈ ಸಂದರ್ಭದಲ್ಲಿ ಜಯಲಿಂಗೇಶ್ವರ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesJayadeva SriJayasuvarnapurKannada Latest NewsKannada NewsMurugha MathNew Templeಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜಯದೇವ ಶ್ರೀಗಳುಜಯಸುವರ್ಣಪುರನೂತನ ದೇವಸ್ಥಾನಮುರುಘಾ ಮಠ
Share This Article
Facebook Email Print
Previous Article ಯೋಧರಿಗಾಗಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ
Next Article ಚಿತ್ರದುರ್ಗ ನಗರಸಭೆ ಆಸ್ತಿ ತೆರಿಗೆ | ಶೇ.5ರ ರಿಯಾಯಿತಿ ಅವಧಿ ಜೂನ್ 30 ರವರೆಗೆ ವಿಸ್ತರಣೆ
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up