ದೇವಸ್ಥಾನದ ಗಂಟೆ ಬಾರಿಸುವಾಗ ಹಲ್ಲೆ; ಹಾರಿತು ಪ್ರಾಣಪಕ್ಷಿ; ಕಾರಣವಾಯ್ತು ₹ 150 ಸಾಲ

FIR

ಚಿತ್ರದುರ್ಗನ್ಯೂಸ್‌.ಕಾಂ

ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಾಗಿ ತಮಾಷೆಯಿಂದ ಸಂಭ್ರಮದಿಂದ ಇರಬೇಕಿದ್ದ ಸಮಯದಲ್ಲಿ ಇಬ್ಬರ ಪಾಲಿಗೆ ಕರಾಳ ರೂಪ ತಾಳಿದೆ ₹150. 60 ವರ್ಷದ ವ್ಯಕ್ತಿ ಉಸಿರು ನಿಲ್ಲಿಸಿದರೆ, 65 ವರ್ಷದ ವ್ಯಕ್ತಿ ಜೈಲು ಸೇರಿದ್ದಾನೆ. ಇದು ಸಾಲದ ವಿಷಯ. ಈ ಎಲ್ಲ ಘಟನೆಗೆ ಸಿರಿಗೆರೆ ಸಮೀಪದ ಕೊಡಗವಳ್ಳಿ ಸಾಕ್ಷಿಯಾಗಿದೆ.

ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ ಒಂದೂವರೆ ಕೋಟಿ ರೂ.ದರೋಡೆ

ಚಿತ್ರದುರ್ಗದ ತಾಲ್ಲೂಕಿನ ಸಿರಿಗೆರೆ ಸಮೀಪದ ಕೊಡಗವಳ್ಳಿ ಗ್ರಾಮದ ನಾಗರಾಜ್‌ (60) ಎಂಬಾತ ಗ್ರಾಮದ ಶೇಖರಪ್ಪ (65) ಬಳಿ ₹ 150 ಸಾಲ ಪಡೆದಿದ್ದ. ಸಾಲ ಹಿಂತಿರುಗಿಸುವ ವಿಚಾರವಾಗಿ ಈ ಇಬ್ಬರ ನಡುವೆ ಪದೇ ಪದೇ ಮಾತಿನ ಚಕಮಕಿ ನಡದಿದೆ.

ಹಣದ ವಿಚಾರಕ್ಕೆ ನಡೆಯುತ್ತಿದ್ದ ಗಲಾಟೆಯಿಂದ ಬೇಸತ್ತಿದ್ದ ನಾಗರಾಜ್‌ ಪುತ್ರ ಶೇಖರಪ್ಪ ಅವರಿಗೆ ವಾರದ ಹಿಂದೆ ಹಣ ಹಿಂದಿರುಗಿಸಿದ್ದರು. ಆದರೆ, ಕುಡಿದ ಅಮಲಿನಲ್ಲಿದ್ದ ಶೇಖರಪ್ಪ, ನಾಗರಾಜ್ ಅವರ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ನಾಗರಾಜ್‌ ನನ್ನ ಮಗ ನಿನಗೆ ಸಾಲ ಹಿಂತಿರುಗಿಸಿದ್ದಾನೆ ಎನ್ನುತ್ತಾ ದೇವಾಲಯದ ಗಂಟೆ ಬಾರಿಸಿ ಪ್ರಮಾಣ ಮಾಡಲು ದೇವಾಲಯಕ್ಕೆ ತೆರಳಿದ್ದಾನೆ. ಗಂಟೆ ಬಾರಿಸುತ್ತಿದ್ದಂತೆಯೇ ನಾಗರಾಜ್‌ ಮೇಲೆ ಶೇಖರಪ್ಪ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಕೆನ್ನೆಗೆ ಹೊಡೆದು ಕೆಳಕ್ಕೆ ನೂಕಿದ ಪರಿಣಾಮ, ತಲೆಗೆ ಪೆಟ್ಟು ಬಿದ್ದು ನಾಗರಾಜ್ ಮೃತಪಟ್ಟಿದ್ದಾರೆ.

ಪ್ರಕರಣ ಸಂಬಂಧ ಶೇಖರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version