CHITRADURGA NEWS | 17 JUNE 2025
ಹೊಳಲ್ಕೆರೆ: ತಾಲ್ಲೂಕಿನ ಗುಂಡೇರಿ ಕಾವಲಿನಲ್ಲಿ 2.15 ಕೋಟಿ ರೂ.ವೆಚ್ಚದಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣ ಮತ್ತು ಸಿ.ಸಿ.ರಸ್ತೆ ಕಾಮಗಾರಿ ಹಾಗೂ ಶಾಲಾ ಕೊಠಡಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
Also Read: ಅಡಿಕೆ ಧಾರಣೆ | ಜೂನ್ 17 | ಇಂದಿನ ಮಾರುಕಟ್ಟೆ ಪೂರ್ಣ ವಿವರ
ನಂತರ ಮಾತನಾಡಿದ ಶಾಸಕರು, ಬಡವರಿಗೆ ಸೈಟ್ಗಳನ್ನು ನೀಡಿ ಮನೆ ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗುಂಡೇರಿ, ತಾಳಿಕಟ್ಟೆಯಲ್ಲಿ ಜಮೀನುಗಳನ್ನು ಹಂಚಲು ಆದೇಶ ಮಾಡಿದ್ದರು. ಹೈಕೋರ್ಟ್ನಲ್ಲಿರುವುದರಿಂದ ತಡವಾಗಿದೆ. ಸ್ಟೇ ತೆರವುಗೊಂಡ ಕೂಡಲೆ ಜಮೀನುಗಳನ್ನು ಹಂಚಿ ನನ್ನ ಅವಧಿಯಲ್ಲಿಯೇ ಸಾಗುವಳಿ ಪತ್ರಗಳನ್ನು ವಿತರಿಸುತ್ತೇನೆ. ರಸ್ತೆ, ಶಾಲಾ-ಕಾಲೇಜು, ಮುನ್ಸಿಪಲ್ ಕಟ್ಟಡ ಕಟ್ಟಿಸಿ ಕೆರೆ ಏರಿಗಳನ್ನು ಅಭಿವೃದ್ದಿಪಡಿಸುತ್ತೇನೆ ಎಂದರು.
150 ಸೈಟ್ಗಳನ್ನು ಮಾಡಿ ಮನೆ ಕಟ್ಟಲು ಅವಕಾಶ ಕಲ್ಪಿಸುತ್ತೇನೆ. ಈ ಗ್ರಾಮದಲ್ಲಿ ಒಂದು ಶಾಲೆಗೆ ಹದಿನೈದು ಲಕ್ಷ ರೂ.ಗಳನ್ನು ನೀಡಿದ್ದೇನೆ. ಗ್ರಾಮಕ್ಕೆ ಏನೇನು ಸೌಲಭ್ಯ ಬೇಕೋ ಎಲ್ಲವನ್ನು ಕಲ್ಪಿಸಿದ್ದೇನೆ. ಆಂಜನೇಯಸ್ವಾಮಿ ದೇವಸ್ಥಾನದ ಶಿಖರಕ್ಕೆ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
Also Read: ಜೇನು ಕೃಷಿಯನ್ನು ಸಮಗ್ರ ಕೃಷಿಯನ್ನಾಗಿ ಅಳವಡಿಸಿಕೊಳ್ಳಿ | ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಪ್ಪ, ಸದಸ್ಯ ತ್ಯಾಗರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಲಮ್ಮ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನಾಗರಾಜ್, ಕೆ.ಆರ್.ಡಿ.ಐ.ಎಲ್. ಇಂಜಿನಿಯರ್ ತೇಜಸ್ ಸೇರಿದಂತೆ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number