
CHITRADURGA NEWS | 06 JUNE 2025
ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರದ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಸಾಕ್ಷಿ ಹಾಗೂ ಮಾಹಿತಿ ನೀಡಿದ್ದರೂ ಪಿಡಿಓ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವ್ಯವಹಾರ ನಡೆಸಿರುವ ಪಿಡಿಓ ಅಮಾನತು ಆಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಬಂಜಾರ(ಲಂಬಾಣಿ)ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್ ಕುಮಾರ್ ಹೇಳಿದರು.
Also Read: ಜಿಲ್ಲಾಮಟ್ಟದ ಚರ್ಚಾಸ್ಪರ್ಧೆ | SRS ಕಾಲೇಜಿನ ಹರ್ಷಿತ ಹೂಗಾರ್ ಗೆ ತೃತೀಯ ಸ್ಥಾನ


ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭರಮಸಾಗರದ ಪಿಡಿಓ ವಿರೇಶ್ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. ಪಂಚಾಯಿತಿಯಲ್ಲಿ ಇರಬೇಕಾದ ಅಗತ್ಯ ದಾಖಲೆಗಳನ್ನು ಬೇರೆ ಯಾರದ್ದೋ ಮನೆಯಲ್ಲಿಟ್ಟಿದ್ದಾರೆ.
ಪಂಚಾಯಿತಿಯಿಂದ ಯಾವ ದಾಖಲೆಗಳು ಸಹಾ ಹೊರಗಡೆ ಹೋಗಬಾರದೆಂದು ಕಾನೂನು ಇದ್ದರೂ ನಿಯಮ ಮೀರಿ ಕಡತಗಳನ್ನು ಪಂಚಾಯಿತಿಯಿಂದ ಹೊರಗಡೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಪ್ರಶ್ನಿಸಿದ ಪಂಚಾಯಿತಿಯ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಪಂಚಾಯಿತಿಯಿಂದ ಪಂಚಾಯಿತಿಗೆ ಪಿಡಿಓರವರನ್ನು ವರ್ಗಾವಣೆ ಮಾಡಬಹುದು. ಆದರೆ, ತಾಲೂಕಿನಿಂದ ತಾಲೂಕಿಗೆ ಪಿಡಿಓರವರನ್ನು ವರ್ಗಾವಣೆ ಮಾಡುವಂತಿಲ್ಲ. ಇದಕ್ಕೆ ಕಾನೂನು ಒಪ್ಪುವುದಿಲ್ಲ. ಆದರೆ ಇದನ್ನು ಮೀರಿ ವಿರೇಶ್ ಅವರನ್ನು ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿದೆ.
Also Read: ಬಾಲಕನ ಮೇಲೆ ನಾಯಿ ದಾಳಿ | ಗಂಭೀರ ಗಾಯ
ಪಂಚಾಯಿತಿಯಲ್ಲಿನ ಕಡತಗಳನ್ನು ಅಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರ ಮನೆಗೆ ಸಾಗಿಸಿ ಅಲ್ಲಿ ಬದಲಾವಣೆ ಮಾಡಿದ್ದಾರೆ. ಇದ್ದಲ್ಲದೆ ಸರ್ಕಾರದ 15ನೇ ಹಣಕಾಸಿನಲ್ಲಿ ಕಾಮಗಾರಿಯನ್ನು ಪಂಚಾಯಿತಿ ಸದಸ್ಯರ ಯಾವುದೇ ರಕ್ತ ಸಂಬಂಧಿಗಳಿಗೆ ನೀಡುವಂತಿಲ್ಲ ಎಂದು ಇದ್ದರೂ ಸಹಾ ಪಂಚಾಯಿತಿಯ ಸದಸ್ಯರ ತಮ್ಮನಿಗೆ 26 ರೂ. ಲಕ್ಷದ ಕಾಮಗಾರಿ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಪಂಚಾಯಿತಿಯಲ್ಲಿ ಕಳೆದ ಹಲವಾರು ವರ್ಷದ ಹಿಂದೆ ಸರ್ಕಾರದ ಜಾಗವನ್ನು ಖಾಸಗಿಯರಿಗೆ ವರ್ಗಾವಣೆಯನ್ನು ಮಾಡಿಕೊಡಲಾಗಿದೆ ಇದನ್ನು ವಾಪಾಸ್ಸ್ ಪಡೆಯಬೇಕು, ಇದರ ಬಗ್ಗೆ ನೊಂದಾಣಿ ಇಲಾಖೆಯವರು ನಿವೇಶನವನ್ನು ವಾಪಾಸ್ಸ್ ಪಡೆಯುವಂತೆ ಸೂಚನೆ ನೀಡಿದ್ದರು ಅಹಾ ಇದರ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಈತನ ಬಗ್ಗೆ ಹಲವಾರು ಬಾರಿ ಜಿ.ಪಂ.ಮುಖ್ಯಸ್ಥರನ್ನು ಕಂಡು ಅವ್ಯವಹಾರದ ಸಾಕ್ಷಿಯನ್ನು ನೀಡಿದರೂ ಸಹಾ ಇದುವರೆವಿಗೂ ಯಾವುದೇ ಕ್ರಮವನ್ನು ಅವರ ಮೇಲೆ ಕೈಗ್ಗೊಂಡಿಲ್ಲ, ಪಂಚಾಯಿತಿ ಪಿಡಿಓ ವಿರೇಶ್ ಅಮಾನತ್ತು ಆಗುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸತೀಶ್ ತಿಳಿಸಿದರು.
ಗ್ರಾಮದ ಮುಖಂಡರಾದ ಲೋಕೇಶ್ ಮಾತನಾಡಿ, ಭರಮಸಾಗರ ಪಂಚಾಯಿತಿ ಪಿಡಿಓ ಮಾಡುತ್ತಿರುವ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಪಂಚಾಯಿತಿಯ ನೌಕರರನ್ನು ಸೇರಿಸಿಕೊಂಡು ನನ್ನ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
Also Read: ಮುರುಘಾ ಮಠದಿಂದ 25 ಎಕರೆ ತೋಟ ಮಾಡುವ ಸಂಕಲ್ಪ
ಸುದ್ದಿಗೋಷ್ಟಿಯಲ್ಲಿ ಶ್ರೀನಿವಾಸ್, ಗೀರೀಶ್, ಕುಪ್ಪಾನಾಯ್ಕ್ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
