CHITRADURGA NEWS | 25 MARCH 2025
ಹೊಸದುರ್ಗ: ರೈತರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಡಿಸಿಸಿ) ಮೂಲಕ ಸಾಲ ನೀಡಲು ಹೊಸದುರ್ಗ ಶಾಖೆಯ ಮೇಲ್ವಿಚಾರಕ ಎ.ಎಂ.ನವೀನ್ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಸಮೇತ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.
ಹೊಸದುರ್ಗ ತಾಲೂಕು ಮಾಡದಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಕುಮಾರ್ ರೈತರ ಸಾಲದ ಅರ್ಜಿಗಳನ್ನು ಡಿಸಿಸಿ ಬ್ಯಾಂಕ್ ಹೊಸದುರ್ಗ ಶಾಖೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಮತ್ತಷ್ಟು ಹೆಚ್ಚಳ
ಈ ಕಡತಗಳನ್ನು ಇಲ್ಲಿ ಪರಿಶೀಲನೆ ನಡೆಸಿದ ನಂತರ ಚಿತ್ರದುರ್ಗ ಮುಖ್ಯ ಕಚೇರಿ ಸಿಡಿಸಿಸಿ ಬ್ಯಾಂಕ್ಗೆ ರವಾನಿಸಲಾಗುತ್ತದೆ.
ಆದರೆ, ಮಾರ್ಚ್ 2025 ರಲ್ಲಿ ಸಲ್ಲಿಸಿದ ಸಾಲದ ಅರ್ಜಿಗಳನ್ನು ಹೊಸದುರ್ಗ ಶಾಖೆಗೆ ಸಲ್ಲಿಸಿದ್ದು, ನಂತರ ಇಲ್ಲಿನ ನೌಕರ ಎ.ಎಂ.ನವೀನ್ ಅವರನ್ನು ಭೇಟಿ ಮಾಡಿದಾಗ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚದ ಬೇಡಿಕೆ ಕುರಿತು ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಕುಮಾರ್ ಲಂಚ ಕೊಡಲು ಇಷ್ಟವಿಲ್ಲದೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ:PMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಇಂದು ಮಾ.25 ಮಂಗಳವಾರ ಹೊಸದುರ್ಗ ಡಿಸಿಸಿ ಬ್ಯಾಂಕಿನ ನೌಕರ ಕುಮಾರ್ ಅವರಿಂದ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಬಸವರಾಜ ಬಿ. ಲಮಾಣಿ ತಂಡ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಲಂಚ ಪಡೆದ ಹೊಸದುರ್ಗ ಡಿಸಿಸಿ ಬ್ಯಾಂಕ್ ನೌಕರ ನವೀನ್ ಬಂಧಿಸಿದ್ದು, ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ನಮ್ಮ ಅವಧಿಯಲ್ಲೇ ರಸ್ತೆ ಅಗಲೀಕರಣ | ಸಚಿವ ಡಿ.ಸುಧಾಕರ್
ಸದರಿ ಕಾರ್ಯಾಚರಣೆ ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯಂಜಯ ನೇತೃತ್ವದಲ್ಲಿ ನಡೆದಿದ್ದು, ನಿರೀಕ್ಷಕರಾದ ಬಿ.ಮಂಜುನಾಥ್, ಸಿಬ್ಬಂದಿಗಳಾದ ಜೆ.ಎಂ.ತಿಪ್ಪೇಸ್ವಾಮಿ, ಎಚ್.ಶ್ರೀನಿವಾಸ್, ಎಸ್.ಆರ್.ಪುಷ್ಪ, ಎಲ್.ಜಿ.ಸತೀಶ್, ಮಂಜುನಾಥ್, ಎಂ.ವೀರೇಶ್, ಕೆ.ಟಿ.ಮಾರುತಿ, ಆರ್.ವೆಂಕಟೇಶ್ ಕುಮಾರ್, ಡಿ.ಮಾರುತಿ, ಎಸ್.ಎಲ್.ಶ್ರೀಪತಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number