CHITRADURGA NEWS | 17 JULY 2024
ಚಿತ್ರದುರ್ಗ: ಆಸ್ತಿ ವಿಚಾರದಲ್ಲಿ ತಮ್ಮನ ಪತ್ನಿಯನ್ನೇ ಅಣ್ಣ ಕೊಲೆ (Murder) ಮಾಡಿದ ಘಟನೆ ಚಳ್ಳಕೆರೆ ತಾಲ್ಲೂಕಿನ ಹಾಲಗೊಂಡನಹಳ್ಳಿಯಲ್ಲಿ ನಡೆದಿದೆ.
ಹಾಲಗೊಂಡನಹಳ್ಳಿ ಈರಕ್ಕ (45) ಮೃತ ಮಹಿಳೆ. ಚಂದ್ರಣ್ಣ ಹಾಗೂ ಆತನ ಪುತ್ರ ಗಂಗಾಧರ ಬುಧವಾರ ಬೆಳಿಗ್ಗೆ ಕೊಲೆ ಮಾಡಿದ್ದಾರೆ. ಆರೋಪಿ ಚಂದ್ರಣ್ಣನನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಹತ್ಯೆ ಬಳಿಕ ಪರಾರಿ ಆಗಿದ್ದ ಗಂಗಾಧರನ ಪೊಲೀಸರು ಬಂಧಿಸಿದ್ದಾರೆ. ಅಪ್ಪ, ಮಗ ಪೊಲೀಸರ ವಶದಲ್ಲಿದ್ದಾರೆ.
ಇದನ್ನೂ ಓದಿ: Heavy Rain; ದುರ್ಗದಲ್ಲಿ ಉತ್ತಮ ಮಳೆ | ಸಂಚಾರ ಅಸ್ತವ್ಯಸ್ತ | ನಗರದಲ್ಲಿ ಸುರಿದ ಮಳೆಯ ದೃಶ್ಯ ಇಲ್ಲಿವೆ
ಘಟನೆ ವಿವರ: ಚಂದ್ರಣ್ಣನ ತಮ್ಮ ಗೋವಿಂದಪ್ಪ 8 ವರ್ಷದ ಹಿಂದೆ ನಿಧನರಾಗಿದ್ದರು. ಈ ವೇಳೆ ಪತ್ನಿ ಈರಕ್ಕ ತವರು ಮನೆಗೆ ಹೋಗಿ ಅಲ್ಲೇ ಜೀವನ ಸಾಗಿಸುತ್ತಿದ್ದರು. ಈ ವೇಳೆ 8 ಎಕರೆ ಜಮೀನಲ್ಲಿ ಆಸ್ತಿ ಪಾಲನ್ನು ಈರಕ್ಕ ಮಾವನ ಚಂದ್ರಣ್ಣ ಬಳಿ ಕೇಳಿದ್ದಳು.
ಇದನ್ನೂ ಓದಿ: RAIN; ಬಾಗೂರಿನಲ್ಲಿ ಅತೀ ಹೆಚ್ಚು ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ | ಇಲ್ಲಿದೆ ವರದಿ..
ಆಸ್ತಿ ಪಾಲು ಕೇಳಿದ್ದಕ್ಕೆ ಕೋಪಗೊಂಡ ಚಂದ್ರಣ್ಣ ತನ್ನ ಮಗ ಗಂಗಾಧರನ ಜತೆ ಸೇರಿ ಬೆಳಿಗ್ಗೆ ಈರಕ್ಕನನ್ನು ಭರ್ಬರವಾಗಿ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಪರಶುರಾಂಪುರ ಠಾಣೆ ಪಿಎಸ್ಐ ಬಸವರಾಜ್, ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಭೇಟಿ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number