By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Jaldhi Festival; ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ | ಶಾಂತವೀರ ಶ್ರೀ ಭಾಗೀ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Jaldhi Festival; ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ | ಶಾಂತವೀರ ಶ್ರೀ ಭಾಗೀ

ಹೊಸದುರ್ಗ

Jaldhi Festival; ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ | ಶಾಂತವೀರ ಶ್ರೀ ಭಾಗೀ

News Desk Chitradurga News
Last updated: 13 October 2024 16:55
News Desk Chitradurga News
9 months ago
Share
ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ
ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 13 OCTOBER 2024

ಹೊಸದುರ್ಗ: ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆದ ಶ್ರೀ ತಾಯಮ್ಮದೇವಿ, ಶ್ರೀ ವೀರನಾಗಪ್ಪಸ್ವಾಮಿ ಹಾಗೂ ಶ್ರೀ ಬೊಮ್ಮಲಿಂಗೇಶ್ವರಸ್ವಾಮಿಯ ಜಲಧಿ ಉತ್ಸವ(Jaldhi festival)ದಲ್ಲಿ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಕ್ಲಿಕ್ ಮಾಡಿ ಓದಿ: Bichchugatti Bharamanna Nayaka; ಜಯದೇವ ಶ್ರೀಗಳಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಿಂದ ಭಕ್ತಿ ಸಮರ್ಪಣೆ

ನಂತರ ಆಶೀರ್ವಚನ ನೀಡಿದ ಶ್ರೀಗಳು, ಕುಂಚಿಟಿಗ ಜನಾಂಗ ಜಾತ್ರೆಯಿಂದ ಜಾಗೃತರಾಗಿ ಹೋರಾಟದಿಂದ ಮೀಸಲಾತಿ ಪಡೆಯಿರಿ, ದೇವರಿಗೆ ಜಲದಿಂದ ಶುದ್ದಿ ಮಾನವನಿಗೆ ಆತ್ಮನಿವೇದನೆಯಿಂದ ಸುದ್ದಿ ಎಂದು ತಿಳಿಸಿದರು.

ಬುಡಕಟ್ಟು ಸಂಪ್ರದಾಯದಂತೆ ಜಲಧಿ ಉತ್ಸವವು ನಡೆದು ದೇವರುಗಳನ್ನು ಕರೆದುಕೊಂಡು ಬಂದು ಜಲದ ಬಾವಿಯ ಪಕ್ಕ ಆಸೀನ ಮಾಡಿ ಆ ಜಲದಿಂದ ದೇವರುಗಳಿಗೆ ಪ್ರೋಕ್ಷಣೆ ಮಾಡಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ, ಹಾಗೆಯೇ ಮಾನವರಾದ ನಾವು ಮಾನವೀಯತೆಯ ಜಲದಿಂದ ಮಾನವತ್ವ, ದಿವ್ಯತ್ವವನ್ನು ಬೆಳೆಸಿಕೊಂಡು ಸಮಾಜದಲ್ಲಿ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವಂತ ವ್ಯಕ್ತಿತ್ವ ರೂಪಿಸಬೇಕು.

ಜಲಧಿ ಉತ್ಸವ ಮಾಡಿ ಖುಷಿಪಟ್ಟಂತೆ ಮನೋತ್ಸಹವನ್ನು ಹೆಚ್ಚಿಸಿಕೊಂಡು ಸಂತೋಷ ಕೊಡುವುದೇ ಆಧ್ಯಾತ್ಮ ಆದ್ಯರು ನಮಗೆ ಕೊಟ್ಟ ಸಾಂಸ್ಕೃತಿಕ ಬಳುವಳಿಯನ್ನು ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಸೊಬಗನ್ನು ಸಂಸ್ಕಾರದ ಜೀವನವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಬುಡಕಟ್ಟು ಸಮುದಾಯಗಳಾದ ಕುಂಚಿಟಿಗ, ಯಾದವ, ಕುರುಬ, ನಾಯಕ ಸೇರಿದಂತೆ ಇತರೆ ಸಮುದಾಯಗಳಲ್ಲಿ ಪ್ರತಿವರ್ಷ ದೇವರನ್ನು ಜಲದ ಬಳಿಗೆ ತೆಗೆದುಕೊಂಡು ಜಲಧಿ ಮಾಡುವುದು.

ಕ್ಲಿಕ್ ಮಾಡಿ ಓದಿ: Folk art fair; ಮುರುಘಾ ಮಠದಿಂದ ಅದ್ದೂರಿ ಜಾನಪದ ಕಲಾಮೇಳ | ರಾಜಬೀದಿಯಲ್ಲಿ ಸಾಗಿದ ಶರಣರು

ಬುಡಕಟ್ಟು ಸಂಪ್ರದಾಯದ ಜಾತ್ರೆಯಂತೆ ಸೇರಿದ ಜನಗಳು ಬದುಕಿನ ತಪತ್ರಗಳನ್ನು ರಾಗ ದ್ವೇಷಗಳನ್ನು ಮರೆತು ನವೋತ್ಸಾಹದ ಜೊತೆಗೆ ದೇವರನ್ನು ನಂಬಿ ನಡೆಯುತ್ತಾರೆ, ನಂಬಿಕೆಯೇ ದೇವರು ಜಲ ಪ್ರಕೃತಿಗೆ ಮೂಲ ಹಾಗೆಯೇ ಕುಂಚಿಟಿಗ ಜನಾಂಗವನ್ನು ಕಾಪಾಡಿದ್ದು ಕೂಡ ಜಲಧಿ ಕುಲದವರು, 33 ಬಂಡಿ ಮನೆಯನ್ನು ಹೊಂದಿರುವ ವಶಿಷ್ಠ ಪರಂಪರೆಯೊಂದಿಗೆ ಸಾಗುತ್ತಿರುವುದು ಸಂತಸದ ಸಂಗತಿ.

ಐತಿಹಾಸಿಕ ಪರಂಪರೆಯೊಂದಿಗೆ ಆಧುನಿಕ ಸಮಾಜದ ಅನಿವಾರ್ಯವಾದ ಶಿಕ್ಷಣ, ಕಾಯಕ, ದಾಸೋಹ, ಸೌಹಾರ್ದತೆ, ಸಮಾನತೆ ಇವುಗಳನ್ನು ಪಾಲಿಸುವುದು ಸಂವಿಧಾನಕ್ಕೆ ಕೊಟ್ಟ ಗೌರವ. ವರ್ತಮಾನ ಕಾಲದಲ್ಲಿ ಸಂವಿಧಾನವೇ ನಮ್ಮ ಶ್ರೇಷ್ಠ ಗ್ರಂಥ ಸಂವಿಧಾನದ ಆಶಯಗಳನ್ನು ಈಡೇರಿಸುವುದು ಪಾಲಿಸುವುದು ಭಾರತೀಯರಾದ ನಮ್ಮ ಆಧ್ಯ ಕರ್ತವ್ಯ.

ಕುಂಚಿಟಿಗ ಜನಾಂಗವು ಸಂಘಟನೆ ಯಾಗದಿದ್ದರೆ ಸಾಮಾಜಿಕ ನ್ಯಾಯವನ್ನು ಪಡೆಯಲು ಸಾಧ್ಯವಿಲ್ಲ, ನಮ್ಮ ಹೋರಾಟದ ಫಲವಾಗಿ ಆಂಜನೇಯನವರ ಸಹಕಾರದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಬೆಂಬಲದಿಂದ 2015 ರಲ್ಲಿ ನಡೆದ ಸಮಾಜದ ಕುಲಶಾಸ್ತ್ರ ಅಧ್ಯಯನ ಈಗಾಗಲೇ ಸರ್ಕಾರದ ಕೈ ಸೇರಿದ್ದು.

ಅದರ ಯಥಾವತ್ ಜಾರಿಗಾಗಿ ಸಮಾಜದ ಸಂಘಟನೆಗಳು, ಮಠಗಳು ಸಾರ್ವಜನಿಕರು ಹೆಚ್ಚೆಚ್ಚು ರಾಜಕೀಯ ಒತ್ತಡಗಳನ್ನು ತಂದು ಜಾರಿಗೊಳಿಸಿದರೆ ಸಮಾಜದ ಬಡವರಿಗೆ, ನಿರ್ಗತಿಕರಿಗೆ ಮೀಸಲಾತಿ, ಸಾಮಾಜಿಕ ನ್ಯಾಯ, ಸರ್ಕಾರದ ಸೌಕರ್ಯಗಳು ಸಿಗಲು ಸಾಧ್ಯ.

ಕ್ಲಿಕ್ ಮಾಡಿ ಓದಿ: MOLAKALMURU: ಬರದ ನಾಡಿನಲ್ಲಿ ಭರ್ಜರಿ ಮಳೆ | ರಂಗಯ್ಯನದುರ್ಗ ಜಲಾಶಯ ಭರ್ತಿ

ಆ ನಿಟ್ಟಿನಲ್ಲಿ ಕುಂಚಿಟಿಗ ಸಮಾಜ ಜಾಗೃತರಾಗಬೇಕು ಕೇವಲ ಜಾತ್ರೆಯಿಂದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ನಾವುಗಳು ಕರೆಕೊಟ್ಟಾಗ ಸಮಾಜದ ಎಲ್ಲ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿ ಕುಂಚಿಲಿಗ ಸಮಾಜದ ಹೇಳಿಗೆಗಾಗಿ ಸಹಕರಿಸಬೇಕೆಂದು ಎಂದು ತಿಳಿಸಿದರು.

ಸಮಾರಂಭದಲ್ಲಿ ಶ್ರೀ ಶೈಲ ಮೂರ್ತಿಗಳು, ಶ್ರೀ ಚಿದಾನಂದ ಭಾರತಿ ಸ್ವಾಮಿಗಳು, ಶ್ರೀ ತಾಯಿ ಮುದ್ದಮ್ಮದೇವಿ. ಶ್ರೀ ವೀರನಾಗಪ್ಪಸ್ವಾಮಿ, ಶ್ರೀ ಬೊಮ್ಮಲಿಂಗೇಶ್ವರಸ್ವಾಮಿ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಭಕ್ತಾದಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesHosadurgaJaldhi FestivalKannada Latest NewsKannada NewspavagadaSri Shantaveera SwamijiTraditiontribeಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಲೇಟೆಸ್ಟ್ ಸುದ್ದಿಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಲಧಿ ಉತ್ಸವಪಾವಗಡಬುಡಕಟ್ಟುಶ್ರೀ ಶಾಂತವೀರ ಸ್ವಾಮೀಜಿಸಂಪ್ರದಾಯಹೊಸದುರ್ಗ
Share This Article
Facebook Email Print
Previous Article ಜಯದೇವ ಶ್ರೀಗಳಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಿಂದ ಭಕ್ತಿ ಸಮರ್ಪಣೆ Bichchugatti Bharamanna Nayaka; ಜಯದೇವ ಶ್ರೀಗಳಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಿಂದ ಭಕ್ತಿ ಸಮರ್ಪಣೆ
Next Article ಹೊಳಲ್ಕೆರೆ ನಗರದ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕರ್ತರ ಸಭೆ  Membership Registration; ಸದಸ್ಯತ್ವ ನೊಂದಣಿ ಹೆಚ್ಚಾದರೆ ಜಿಪಂ ಚುನಾವಣೆ ಗೆಲುವು ಸುಲಭ | ಎಂ.ಚಂದ್ರಪ್ಪ
Leave a Comment

Leave a Reply Cancel reply

Your email address will not be published. Required fields are marked *

ಕಾಂಗ್ರೆಸ್ ಅವಧಿಯಲ್ಲಿ ಶೇ.60 ರಷ್ಟು ಕಮಿಷನ್ ನಡೆಯುತ್ತಿದೆ | AAP ಜಿಲ್ಲಾಧ್ಯಕ್ಷ ಜಗದೀಶ್
ಮುಖ್ಯ ಸುದ್ದಿ
ಗಾಂಧಿವೃತ್ತ, ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ವೀಕ್ಷಿಸಿದ ಸಚಿವರು
ಮುಖ್ಯ ಸುದ್ದಿ
ಸಚಿವ ಸ್ಥಾನದಿಂದ ಜಮೀರ್ ಅಹಮದ್‍ ಖಾನ್ ವಜಾಗೊಳಿಸಿ | ಜೆಡಿಎಸ್ ಪ್ರತಿಭಟನೆ
ಮುಖ್ಯ ಸುದ್ದಿ
ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು
ಮುರುಘಾ ಶ್ರೀಗಳ ಪ್ರಕರಣ ಅಂತಿಮ ಹಂತಕ್ಕೆ | ಖುದ್ದು ಹೇಳಿಕೆ ದಾಖಲಿಸಲು ದಿನಾಂಕ ನಿಗಧಿ | ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಶರಣರು
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up