ಕಬೀರಾನಂದಾಶ್ರಮದಲ್ಲಿ ಗುರುಪೂರ್ಣಿಮೆ ಆಚರಣೆ

ಕಬೀರಾನಂದಾಶ್ರಮದಲ್ಲಿ ಗುರುಪೂರ್ಣಮೆ ಆಚರಣೆ

CHITRADURGA NEWS | 23 JULY 2024

ಚಿತ್ರದುರ್ಗ: ನಗರದ ಕಬೀರಾನಂದಾಶ್ರಮದ ಆವರಣದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಶ್ರೀ ಶಿವಲಿಂಗಾನಂದ ಶ್ರೀಗಳು ಉದ್ಘಾಟಿಸಿದರು.

ಇದನ್ನೂ ಓದಿ: ನ್ಯಾಯಾಧೀಶರಿಂದ ಅಂಗನವಾಡಿ ಭೇಟಿ | ಅವ್ಯವಸ್ಥೆ ಕಂಡು ಅಸಮಧಾನ

ಈ ವೇಳೆ ಮಾತನಾಡಿದ ಅವರು, ದಾರಿಯನ್ನು ತಪ್ಪಿದಾಗ ಒಳ್ಳೆಯ ದಾರಿಯನ್ನು ತೋರಿಸುವವನೇ ಗುರು, ಮಾನವನ ಮನಸ್ಸಿನ ಕತ್ತಲೆಯನ್ನು ದೂರು ಮಾಡುವವರೆ ನಿಜವಾದ ಗುರು ಎಂದರು.

ನಮ್ಮ ಮನಸ್ಸಿನ ದುಃಖವನ್ನು ಕಳೆಯುವವನು ಗುರುವಾಗುತ್ತಾನೆ. ಗುರಿವಿನ ಪಾದಗಳಲ್ಲಿ ನಮ್ಮ ಮನಸ್ಸನ್ನು ನೀಡದೇ ಹೋದರೆ ನಮ್ಮಲ್ಲಿನ ಸಂಪತ್ತು ಯಾವ ಪ್ರಯೋಜಕ್ಕೂ ಸಹಾ ಬರುವುದಿಲ್ಲ, ನಮ್ಮೆಲ್ಲಾ ಜ್ಞಾನಕ್ಕೆ ಗುರುವಿನ ಕಾರುಣ್ಯ ಅಗತ್ಯವಾಗಿದೆ. ಗುರುವಿನ ಕೃಪೆ ಬಾರದೆ ಹೋದರೆ ನಾವು ಯಾವ ವಿದ್ಯೆಯಲ್ಲಿಯೂ ಸಹಾ ಪರಿಣಿತಿಯನ್ನು ಹೊಂದಲು ಸಾಧ್ಯವಿಲ್ಲ. ನಮ್ಮಲ್ಲಿ ಅಜ್ಞಾನ ಎಂಬ ಕಣ್ಣು ರೋಗ ಬಂದಿದೆ ಅದನ್ನು ಜ್ಞಾನ ಎಂಬ ಔಷಧಿಯಿಂದ ಯಾರು ತೆರೆಯುತ್ತಾರೋ ಅವರೇ ಗುರು ಎಂದರು.

ಇದನ್ನೂ ಓದಿ: Lok Sabha: ಲೋಕಸಭೆ ಅಧಿವೇಶನದಲ್ಲಿ ಕೇಂದ್ರೀಯ ವಿದ್ಯಾಲಯ ಸದ್ದು | ಮೊದಲ ದಿನ ಮೊದಲ ಪ್ರಶ್ನೆ ಕೇಳಿದ ಸಂಸದ ಗೋವಿಂದ ಎಂ.ಕಾರಜೋಳ

ಗುರುವಾದವರಿಗೆ ಜಾತಿ, ಮತಗಳಿಲ್ಲ, ಯಾರು ಅಜ್ಞಾನದಿಂದ ಬಳಲಿ ಬಂದವರಿಗೆ ಜ್ಞಾನವನ್ನು ನೀಡುವವನೇ ಗುರುವಾಗಿರುತ್ತಾನೆ. ತಮ್ಮ ಜ್ಞಾನಾರ್ಜನೆ ತಕ್ಕಂತೆ ಗುರುಗಳು ಇರುತ್ತಾರೆ. ಆಸೆಗೆ ಅಜ್ಞಾನವೇ ಕಾರಣವಾಗಿದೆ ಇದರಿಂದ ಮಾನವಗಳಿಕೆಯಲ್ಲಿ ತೊಡಗುತ್ತಾನೆ. ನಾನು, ನನ್ನದು ಎನ್ನುವುದು ದುಃಖಕ್ಕೆ ಕಾರಣವಾಗಿದೆ. ಮನಸ್ಸಿನ ಖಾಯಿಲೆ ದೂರವಾಗಬೇಕಾದರೆ ಗುರುವಿನ ಅನುಗ್ರಹ ಅಗತ್ಯವಾಗಿದೆ.

ಗುರುಗಳ ಸನ್ನಿಧಾನದಲ್ಲಿಯೇ ಜ್ಞಾನವನ್ನು ಪಡೆಯಬೇಕಿದೆ. ಗುರು ಎಂದರೆ ಶಿಕ್ಷಕ ಎಂದು ಅರ್ಥವಲ್ಲ, ಕಂಡ ಕಂಡವರೆಲ್ಲ ಗುರುಗಳಾಗಲು ಸಾಧ್ಯವಿಲ್ಲ, ಇನ್ನೂಬ್ಬರ ಹಿತವನ್ನು ಕಾಯುವವನೇ ಗುರು ಎಂದು ತಿಳಿಸಿದರು.

ಜಿಲ್ಲಾ ಯೋಗ ಸಂಸ್ಥೆಯ ಕಾರ್ಯದರ್ಶಿ ಹುರುಳಿ ಬಸವರಾಜು ಮಾತನಾಡಿ, ಜನನ ಮರಣಗಳ ನಡುವಿನ ಮನುಷ್ಯರ ಜೀವನದಲ್ಲಿ ನೋವು,ನಲಿವು ಸದಾ ಇದ್ದೇ ಇರುತ್ತದೆ. ಈ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸುವ ಮರ್ಮವನ್ನು ತಿಳಿಸಿ ಆ ಮೂಲಕ ಸಮನ್ವಯದಿಂದ ನಡೆಸಲು ಹೇಳುವವನೇ ಗುರು ಎಂದರು.

ಈ ಸಂದರ್ಭದಲ್ಲಿ ರಾಮ ಸುಬ್ರರಾಯ, ಮಂಜುನಾಥ್ ಗುಪ್ತ, ರಾಮಮೂರ್ತಿ ಅವರು ಮಾತನಾಡಿದರು.

ಇದನ್ನೂ ಓದಿ: self death : ಪರೀಕ್ಷೆಯಲ್ಲಿ ಕಡಿಮೆ ಅಂಕ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ

ಈ ವೇಳೆ ನಾಗರಾಜ್ ಸಂಗಂ, ಗೋಪಾಲಸ್ವಾಮಿ ನಾಯ್ಕ್, ಓಂಕಾರ ಮೂರ್ತಿ, ಭದ್ರಾವತಿಯ ರಾಮಮೂರ್ತಿ, ಪ್ರಶಾಂತ್, ಹೋಸಳ್ಳಿಯ ಶಿವಣ್ಣ ಭಾಗವಹಿಸಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version