CHITRADURGA NEWS | 18 JULY 2024
ಚಿತ್ರದುರ್ಗ: ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ, ಆಂಧ್ರ ಪ್ರದೇಶದವರಿಂದ ₹ 54 ಲಕ್ಷ ಪಡೆದು ಪರಾರಿಯಾಗಿದ್ದ ಮೂವರನ್ನು ಚಿಕ್ಕಜಾಜೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಚಿಕ್ಕಅಬ್ಬಿಗೆರೆ ಗ್ರಾಮದ ಪರಶುರಾಮ, ರುದ್ರಪ್ಪ ಹಾಗೂ ಧರ್ಮಪ್ಪ ಬಂಧಿತರು. ಬಂಧಿತರಿಂದ ₹ 47.18 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿಗಳಾದ ಜಗಳೂರು ತಾಲ್ಲೂಕು ಅಗಸನಹಳ್ಳಿ ಗ್ರಾಮದ ನಾಗರಾಜ, ಚಿಕ್ಕಬ್ಬಿಗೆರೆ ಗ್ರಾಮದ ಮನು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು 2.2 ಕೆ.ಜಿ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಹೈದರಾಬಾದ್ ಮೂಲದ ಮೂವರಿಂದ ₹54 ಲಕ್ಷ ಪಡೆದು ವಂಚಿಸಿದ್ದರು. ಸಮೀಪದ ಸಾಸಲುಹಳ್ಳ ಗ್ರಾಮದ ಬಳಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ಬೇಲಿ ಮೇಲಿನ ಹಣ್ಣು ತಿಂದು ಮಕ್ಕಳು ಅಸ್ವಸ್ಥ | ಆಸ್ಪತ್ರೆಗೆ ದಾಖಲು
ದೂರು ದಾಖಲಿಸಿಕೊಂಡ ಚಿಕ್ಕಜಾಜೂರು ಪೊಲೀಸರು ಸಿಪಿಐ ಚಿಕ್ಕಣ್ಣನವರ್ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಪಿಎಸ್ಐಗಳಾದ ಎಂ.ಟಿ. ದೀಪು ಹಾಗೂ ಸಚಿನ್ ಪಟೇಲ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ರುದ್ರೇಶ್, ಕುಮಾರಸ್ವಾಮಿ, ಗಿರೀಶ್ ಮತ್ತಿತರರು ಹುಡುಕಾಟ ನಡೆಸಿ ಮಂಗಳವಾರ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಜಿ.ಎಸ್.ಉಜ್ಜಿನಪ್ಪ ಅವರ ಪತ್ನಿ ಎಸ್.ಭೈರಮ್ಮ ನಿಧನ
ಆರೋಪಿತರು ತಾವು ಪಡೆದ ಹಣದಲ್ಲಿ ₹ 6,82,000 ಹಣವನ್ನು ಐದು ಜನರು ಹಂಚಿಕೊಂಡು ಖರ್ಚು ಮಾಡಿಕೊಂಡಿದ್ದು, ಉಳಿದ ₹ 47,18,000 ಹಣವನ್ನು ಮುಂದಿನ ದಿನಗಳಲ್ಲಿ ಎಲ್ಲಾರು ಸೇರಿ ಹಂಚಿಕೊಳ್ಳುವ ಉದ್ದೇಶದಿಂದ ಸಂತೇಬೇನ್ನೂರು ವ್ಯಾಪ್ತಿಯಲ್ಲಿರುವ ದೊಡ್ಡಬ್ಬಿಗರೆ ಗ್ರಾಮದ ಸಮೀಪದ ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
