CHITRADURGA NEWS | 07 SEPTEMBER 2024
ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC) ಚುನಾವಣೆ ಸೆ.12ಕ್ಕೆ ನಿಗಧಿಯಾಗಿದೆ.
ಈಗಾಗಲೇ 6 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂ 6 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.

ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಸಚಿವ ಡಿ.ಸುಧಾಕರ್ ಸೇರಿ 6 ಜನರ ಅವಿರೋಧ ಆಯ್ಕೆ
ಹಾಲಿ ಕಣದಲ್ಲಿ ಉಳಿದಿರುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಿತ್ರದುರ್ಗ ತಾಲೂಕಿನ ಎ ವರ್ಗದಿಂದ ಎಚ್.ಎಂ.ದ್ಯಾಮಣ್ಣ ಮೆದೇಹಳ್ಳಿ, ಟಿ.ಪಿ.ಅನೂಫ್ ಭೀಮಸಮುದ್ರ ಹಾಗೂ ಬಿ.ಮಂಜುನಾಥ್ ಪಿಳ್ಳೆಕೇರೆನಹಳ್ಳಿ ನಡುವೆ ಸ್ಪರ್ಧೆ ಇದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಸದುರ್ಗ ತಾಲೂಕಿನಿಂದ ಎಚ್.ಬಸವರಾಜಪ್ಪ ಕಾರೇಹಳ್ಳಿ ಹಾಗೂ ಕೆ.ಅನಂತ್ ವೆಂಗಳಾಪುರ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ | ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನಾಮಪತ್ರ ತಿರಸ್ಕøತ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೊಳಕಾಲ್ಮೂರು ತಾಲೂಕಿನಿಂದ ಎಚ್.ಟಿ.ನಾಗೀರೆಡ್ಡಿ ಜೆ.ಬಿ.ಹಳ್ಳಿ ಹಾಘೂ ಜಿಂಕಲ್ ಬಸವರಾಜ್ ತಿರುಮಲಾಪುರ ಇವರ ನಡುವೆ ಜಿದ್ದಾಜಿದ್ದಿ ಇದೆ.
ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲೂಕಿನ ಹಾಲು ಉತ್ಪಾಧಕರ ಸಹಕಾರ ಸಂಘದ ಕ್ಷೇತ್ರದಿಂದ ಪಿ.ವಿನೋದ್ ಸ್ವಾಮಿ ತಿಮ್ಮಪ್ಪಯ್ಯನಹಳ್ಳಿ ಹಾಗೂ ಎಂ.ಭಾರತಿ ಲಕ್ಕವ್ವನಹಳ್ಳಿ ಇವರ ನಡುವೆ ಪೈಪೋಟಿ ಇದೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ | 200 ಸಹಕಾರ ಸಂಘಗಳು ಅನರ್ಹ | ಕೋರ್ಟ್ ಮೆಟ್ಟಿಲೇರಿದ ಶಾಸಕ
ಜಿಲ್ಲೆಯಲ್ಲಿರುವ ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಆಯ್ಕೆಯಾಗುವ ನಿರ್ದೇಶಕರ ಸ್ಥಾನಕ್ಕೆ ಎಂ.ನಿಶಾನಿ ಜಯ್ಯಣ್ಣ(ಬುರುಜನಹಟ್ಟಿ) ಹಾಗೂ ಬಿ.ಸಿ.ಸಂಜೀವಮೂರ್ತಿ ಚಳ್ಳಕೆರೆ ಇವರ ನಡುವೆ ಪೈಪೋಟಿ ಇದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
