ಚಿತ್ರದುರ್ಗ ನ್ಯೂಸ್.ಕಾಂ: ಪ್ರವಾದಿ ಮಹಮ್ಮದ್ ಜನ್ಮ ದಿನಾಚರಣೆ ಈದ್ ಮಿಲಾದ್ ಹಬ್ಬವನ್ನು ಮುಸ್ಲೀಂ ಬಾಂಧವರು ಜಿಲ್ಲೆಯಾದ್ಯಂತ ಭಕ್ತಿ, ಭಾವ ಹಾಗೂ ಸಡಗರದಿಂದ ಆಚರಣೆ ಮಾಡಿದರು.
ಇದನ್ನೂ ಓದಿ: ಡಿಸಿ ದಿವ್ಯಪ್ರಭು ಹೇಳಿದ ಶಿವ-ಪಾರ್ವತಿ ಕಥೆಯ ತಾತ್ಪರ್ಯ ಏನು ಗೊತ್ತಾ..
ನಗರದ ಚಳ್ಳಕೆರೆ ರಸ್ತೆಯ ವೆಂಕಟೇಶ್ವರ ಬಡಾವಣೆಯ ಯುವಕರು ಚಳ್ಳಕೆರೆ ಚಿತ್ರದುರ್ಗ ನಡುವೆ ಸಂಚರಿಸುವ ವಾಹನ ಸವಾರರಿಗೆ ಹಣ್ಣು, ಜ್ಯೂಸ್ ವಿತರಣೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಿದ್ದು, ಗಮನ ಸೆಳೆಯಿತು.
ಇಲ್ಲಿನ ಮದೀನ ಮಸ್ಜೀದ್ ನವ ಜವಾನ್ ಕಮಿಟಿಯ ಸುಮಾರು 20 ಯುವಕರು ಬೆಳಗ್ಗೆ 9 ಗಂಟೆಯಿಂದಲೇ ಸಾರ್ವಜನಿಕರಿಗೆ ಹಣ್ಣು, ಜ್ಯೂಸ್ ಹಾಗೂ ಪಾಯಸ ವಿತರಣೆ ಮಾಡಿ ಈದ್ ಮಿಲಾದ್ ಸಂಭ್ರಮಿಸಿದರು.
ಇದಕ್ಕಾಗಿ ಸುಮಾರು 60 ಕೆಜಿ ಪಾಯಸ, 30 ಕೆ.ಜಿ ಹಣ್ಣು ಹಾಗೂ ರೂವಾಬ್ಜಾ ಜ್ಯೂಸ್ ವಿತರಿಸಿದರು. ಮೂರ್ನಾಲ್ಕು ಡ್ರಮ್ಗಳಲ್ಲಿ ಜ್ಯೂಸ್ ತಯಾರಿಸಿ, ಈ ಮಾರ್ಗದಲ್ಲಿ ಸಾಗುವ ವಾಹನಗಳನ್ನು ತಡೆದು ವಿತರಣೆ ಮಾಡುತ್ತಿದ್ದರು.
ಬಡಾವಣೆಯ ಸಾಧಿಕ್, ಶಬಾಜ್, ಇಮ್ರಾನ್, ಸಲೀಂ, ಬಿಲ್ಲು, ದಾದಾಪೀರ್ ಸೇರಿದಂತೆ ಹಲವು ಯುವಕರು ಈ ಕಾರ್ಯಕ್ಕೆ ಕೈ ಜೋಡಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number