CHITRADURGA NEWS | 24 MARCH 2025
ಹೊಸದುರ್ಗ: ಸಮಾಜ ಸಂಘಟನೆ ಎಂದರೆ ರಾಜಕೀಯ ಎಂದೇ ಬಿಂಬಿತವಾಗಿದೆ ಆದರೆ ನಾವುಗಳು ಸಂಘಟನೆಗಳು ಮಾಡಬೇಕಾಗಿರುವುದು ಬಡವರ ಕಣ್ಣೀರು ಒರೆಸಲು ಹೊರತು ರಾಜಕೀಯ ಮಾಡಲು ಅಲ್ಲ ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
Also Read: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?

ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಕಸಬಾ ಹಾಗೂ ಮತ್ತೋಡು ಹೋಬಳಿಗಳ ಜನಾಂಗದ ಸಂಘಟನಾ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿ.
ಗ್ರಾಮಗಳಲ್ಲಿ ಜಾತ್ಯತೀತ ಪಕ್ಷತೀತ ಮನೋಭಾವ ಬೆಳೆಸಿ ಸೌಹಾರ್ದ ವಾತಾವರಣವನ್ನು ನಿರ್ಮಿಸಿ ಸರ್ವರೂ ಶಾಂತಿಯಿಂದ ಬದುಕಲು ಮತ್ತು ಬಡವರಿಗೆ ಸಹಾಯ ಮಾಡಲು ಸಂಘಟನೆಯ ಅಸ್ತ್ರವನ್ನು ಬಳಸಿ ರಾಜಕೀಯದ ದುರುದ್ದೇಶಕಲ್ಲ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಂಘಟನೆ ಎಂದರೆ ಕೇವಲ ರಾಜಕೀಯ ಉದ್ದೇಶಕ್ಕೆ ಸ್ವಾರ್ಥಕ್ಕೆ ಬಳಸುತ್ತಿರುವುದು ಅತ್ಯಂತ ಕಳಗೋಳಕಾರಿ.
Also Read: ಹೊಳಲ್ಕೆರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ | ಇಲ್ಲಿದೆ ಪೂರ್ಣ ವಿವರ
ವ್ಯಕ್ತಿಯ ಹಿಂದೆ ಹೋದರೆ ಇನ್ನೊಬ್ಬ ವ್ಯಕ್ತಿ ಗೆದ್ದು ಬಂದು ನಿಮ್ಮ ಗ್ರಾಮಗಳನ್ನು ನಿರ್ಲಕ್ಷಿಸುತ್ತಾರೆ ಅಭಿವೃದ್ಧಿ ಕುಂಠಿತವಾಗುತ್ತದೆ ಆದ ಕಾರಣ ಹಳ್ಳಿಗಳು ಮತ್ತು ಹಳ್ಳಿಯ ಜನ ನಿಮ್ಮ ಅಭಿವೃದ್ಧಿಯನ್ನು ನೀವೇ ಮಾಡಿಕೊಳ್ಳಬೇಕು.
ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಹೊತ್ತು ನೀಡಿ, ಮಕ್ಕಳಿಗೆ ಶಿಕ್ಷಣ ಸಂಸ್ಕಾರ ಕೊಟ್ಟು ಬೆಳೆಸುವ ಪೋಷಿಸುವ ಜವಾಬ್ದಾರಿ ನಿಮ್ಮದೇ ಇರುವ ಕಾರಣ ಅಭಿವೃದ್ಧಿ ಶಿಕ್ಷಣ ಆರೋಗ್ಯಕ್ಕೆ ಒತ್ತುಕೊಟ್ಟು ಗ್ರಾಮಗಳಲ್ಲಿ ಗದ್ದಲ ಗಲಾಟೆಗಳಾಗದಂತೆ ಸರ್ವ ಸಮಾಜಗಳ ಮಧ್ಯೆ ಪ್ರೀತಿಯಿಂದ ಬದುಕಬೇಕೆಂದು ಸಲಹೆ ನೀಡಿದರು
ಶ್ರೀಮಠದ ವತಿಯಿಂದ ಹಳ್ಳಿಗಳಲ್ಲಿ ಆರ್ಥಿಕ ಸಬಲೀಕರಣ ಆಗಲಿ ಎಂದು ಒಂದು ಹಳ್ಳಿಗೆ ಒಂದು ಲಕ್ಷದಂತೆ 50 ಹಳ್ಳಿಗೆ 50 ಲಕ್ಷ ಧನ ಸಹಾಯ ಮಾಡುವ ಯೋಜನೆಯನ್ನು ರೂಪಿಸಿದ್ದೇವೆ. ಇದನ್ನು ಬಳಸಿಕೊಂಡು ನೀವು ಆರ್ಥಿಕ ಸಬಲೀಕರಣ ಸಾಧಿಸಿ ಎಂದು ತಿಳಿಸಿದರು.
ನಿಮ್ಮ ಗ್ರಾಮಗಳಲ್ಲಿ ಜ್ಞಾನ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಿ, ಜನಜಾಗೃತಿ ಮೂಡಿಸಲು ಹೆಚ್ಚು ಹೊತ್ತು ನೀಡಿ. ಶ್ರೀ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮದು. ರೈತರು ಯಾವುದೇ ಕಾರಣಕ್ಕೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಆತ್ಮಹತ್ಯೆ ಅಂತ ರಣಹೇಡಿ ಕೆಲಸವನ್ನು ಮಾಡಬೇಡಿ ನಿಮ್ಮ ಎಲ್ಲಾ ಸಂಕಷ್ಟಗಳಿಗೆ ಶ್ರೀಮಠ ಸದಾ ಇರುತ್ತದೆ ಎಂದು ಅಭಯ ನೀಡಿದರು.
Also Read: Kannada Novel: 25. ಉತ್ತರೆ ಮಳೆ ಸುರಿಯಿತು
ಅಧ್ಯಕ್ಷತೆ ವಹಿಸಿದ್ದ ಕುಂಚಿಟಿಗ ಸಮಾಜ ಅಧ್ಯಕ್ಷ ಕಲ್ಕೆರೆ ಶೇಖರಪ್ಪ ಮಾತನಾಡಿದರು.
ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಕೊಡಿಯಲ್ಲಿ ಧರ್ಮಪ್ಪ, ಕಾರ್ಯದರ್ಶಿ ತಣಿಗೇಕಲ್ಲು ಲೋಕೇಶ್, ನಿರ್ದೇಶಕ ಸಂಗೆನಹಳ್ಳಿ ಮಹೇಶ್, ಕಬ್ಬಳದ ಜ್ಞಾನೇಶ್, ದೊಡ್ಡಯ್ಯನಪಾಳ್ಯದ ನೀಲಕಂಠ ಸೇರಿದಂತೆ ಎರಡು ಹೋಬಳಿಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
