CHITRADURGA NEWS | 09 OCTOBER 2024
ಚಿತ್ರದುರ್ಗ: ನವರಾತ್ರಿ ಹಾಗೂ ದಸರಾ ಹಬ್ಬ(Dasara festival)ದಲ್ಲಿ ಗೊಂಬೆಗಳನ್ನು ಕೂರಿಸುವುದು ವಿಶೇಷ. ಅದೇ ರೀತಿ ಪ್ರತಿವರ್ಷವೂ ತಮ್ಮ ಮನೆಯನ್ನೇ ಬೊಂಬೆಗಳ ಆಲಯವಾನ್ನಾಗಿಸಿ ಪೂಜಿಸುವ ಅನೇಕ ಕುಟುಂಬಗಳು ಮಧ್ಯ ಕರ್ನಾಟಕ(Karnataka) ಚಿತ್ರದುರ್ಗದಲ್ಲೂ ಸಾಕಷ್ಟಿವೆ. ಈ ಸಾಲಿಗೆ ನಗರದ ವಿಪಿ ಬಡಾವಣೆಯ ಎಂ.ಬಿ.ಲಕ್ಷ್ಮೀ ಅವರ ಮನೆಯೂ ಸೇರಿದೆ.
ಕ್ಲಿಕ್ ಮಾಡಿ ಓದಿ: Heart Hospital; ಜಯದೇವ ಶ್ರೀಗಳ ಹೆಸರಿನಲ್ಲಿ ಚಿತ್ರದುರ್ಗದಲ್ಲಿ ಹೃದ್ರೋಗ ಆಸ್ಪತ್ರೆಗೆ ಅಧಿವೇಶನದಲ್ಲಿ ಒತ್ತಾಯ | ಸಚಿವ ರಾಮಲಿಂಗಾರೆಡ್ಡಿ ಭರವಸೆ

ಪ್ರತಿ ವರ್ಷವೂ ದಸರಾ ಹಬ್ಬದ ಪ್ರಯುಕ್ತ 10 ದಿನಗಳ ಕಾಲ ಗೊಂಬೆಗಳನ್ನು ಕೂರಿಸಿ ಸಂಪ್ರದಾಯದಂತೆ ತಾಯಿ ದುರ್ಗೆಯ ಆರಾಧನೆ ಮಾಡುತ್ತಿದ್ದಾರೆ.
ಕಳೆದ 30 ವರ್ಷಗಳಿಂದ ಗೊಂಬೆ ಕೂರಿಸುತ್ತಿದ್ದು, ಇವರಲ್ಲಿ ಅನೇಕ ವಿವಿಧ ಗೊಂಬೆಗಳ ಸಂಗ್ರಹವೇ ಇದೆ.
ವರ್ಷದಿಂದ ವರ್ಷಕ್ಕೆ ಗೊಂಬೆಗಳು ಹೆಚ್ಚಾಗುತ್ತಿವೆ. ಇದನ್ನ ನೋಡಿದರೆ ಮೈಸೂರಿನಲ್ಲಿರುವ ಗೊಂಬೆ ಮನೆ ನೋಡಿದ ಅನುಭವವಾಗುತ್ತದೆ.
ಗೊಂಬೆ ಕೂರಿಸಿದ ದಿನದಿಂದ ಪ್ರತಿದಿನ ಸಂಜೆ ಭಜನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಕ್ಲಿಕ್ ಮಾಡಿ ಓದಿ: Madakari Nayaka; ಅ.13 ರಂದು ವಕೀಲರ ಸಂಘದಿಂದ ಮದಕರಿ ನಾಯಕ ನಾಟಕ ಪ್ರದರ್ಶನ
ಗೊಂಬೆ ನೋಡಲು ಲಕ್ಷ್ಮೀ ಅವರ ಮನೆಗೆ ಬರುವ ಸಾರ್ವಜನಿಕರಿಗೆ ಪ್ರಸಾದ ನೀಡಿ ಸತ್ಕರಿಸುತ್ತಾರೆ.
ಗೊಂಬೆಗಳಲ್ಲಿ ದಶಾವತಾರ ಸೇರಿದಂತೆ ವಿವಿಧ ದೇವಿ – ದೇವರ ಬೊಂಬೆಗಳು, ಗುರುಗಳು ದಾರ್ಶನಿಕರ ಬೊಂಬೆಗಳು, ಕ್ರಿಕೆಟ್ ಮೈದಾನ ಆಟಗಾರರ ಪ್ರತಿಕೃತಿ, ಅಡಿಗೆಮನೆಯ ಸಾಮಾನುಗಳ ಆಕರ್ಷಣಿಯ ಕಿರು ಪ್ರತಿಕೃತಿಗಳು, ಮೋಟಾರ್ ವಾಹನ ಕಾರುಗಳ ಕಿರು ಮಾದರಿ ಬೊಂಬೆಗಳು ಒಳಗೊಂಡಂತೆ ಮುದ್ದಾದ ಬೊಂಬೆಗಳ ಪುಟ್ಟ ಲೋಕವೇ ಇಲ್ಲಿ ಅನಾವರಣವಾಗುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
