ಕ್ರೈಂ ಸುದ್ದಿ
ವಿಚಾರಣಾಧೀನ ಕೈದಿ ಸಾವು

Published on
CHITRADURGA NEWS | 03 APRIL 2024
ಚಿತ್ರದುರ್ಗ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಬುಧವಾರ ನಸುಕಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.
ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ಕೆ.ಎನ್.ರಮೇಶ್ (33) ಮೃತ ಕೈದಿ. ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ, 2021ರಿಂದ ಜೈಲಿನಲ್ಲಿದ್ದ.
ಇದನ್ನೂ ಓದಿ: ಅಡಿಕೆ ತೋಟದಲ್ಲಿ ಗಾಂಜಾ ಬೆಳೆ ಹತ್ತು ವರ್ಷ ಜೈಲು ಶಿಕ್ಷೆ
ಬುಧವಾರ ನಸುಕಿನಲ್ಲಿ ರಮೇಶ್ಗೆ ಎದೆನೋವು ಕಾಣಿಸಿಕೊಂಡಿದೆ. ಕಾರಾಗೃಹ ಸಿಬ್ಬಂದಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾರ್ಗ ಮಾಧ್ಯದಲ್ಲಿಯೇ ಕೈದಿ ಮೃತಪಟ್ಟಿದ್ದಾನೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading
You may also like...
Related Topics:a prisoner, Chitradurga, deceased, District Jail, ಕೈದಿ, ಚಿತ್ರದುರ್ಗ, ಜಿಲ್ಲಾ ಕಾರಾಗೃಹ, ಮೃತ

Click to comment