ಚಿತ್ರದುರ್ಗ ನ್ಯೂಸ್.ಕಾಂ:
ಭಾರತ ಟ್ರೋಫಿ ಎತ್ತಲಿ
ಆಸ್ಟ್ರೇಲೊಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಮಬಲದ ಹೋರಾಟ ನಿರೀಕ್ಷೆ ಮಾಡುತ್ತಿದ್ದೇವೆ. ಭಾರತೀಯ ಆಟಗಾರರು ದಿಟ್ಟತನ ಪ್ರದರ್ಶಿಸಿ ಈ ಬಾರಿಯ ಕಪ್ ಎತ್ತಲಿ| ಹರೀಶ್ ಗೌಡ್ರು, ಸಜ್ಜನಕೆರೆ.

****
ನಮ್ಮವರ ಗೆಲುವು ಖಚಿತ
ನಮ್ಮವರ ಗೆಲುವನ್ನು ತಡೆಯಲು ಯಾವ ತಂಡಕ್ಕೂ ಸಾಧ್ಯವಿಲ್ಲ. 20 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಇದೀಗ ಬಂದಿದೆ.
| ಟಿ.ದಿಲೀಪ್ಕುಮಾರ್, ನನ್ನಿವಾಳ.
****
ವಿಶ್ವಕಪ್ ಗೆಲುವು ನಮ್ದೆ
ವಿಶ್ವಕಪ್ ಫೈನಲ್ ಪಂದ್ಯವನ್ನು ನಾವೆಲ್ಲಾ ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ವಿಶ್ವಕಪ್ ಗೆಲುವು ಖಂಡಿತವಾಗಿಯೂ ಹೆಚ್ಚು ಹೆಚ್ಚು ಯುವಕರನ್ನು ಕ್ರೀಡೆಯತ್ತ ಆಕರ್ಷಿಸಲಿದೆ. ಗೆದ್ದು ಬಾ ಇಂಡಿಯಾ..
| ಸ್ವಾತಿಗೌಡ, ಪ್ರವಾಸಿ.
*****
ಗೆಲುವಿನ ವಿಶ್ವಾಸ
ಭಾರತೀಯ ತಂಡ ಟೂರ್ನಿ ಆರಂಭದಿಂದಲೂ ಅತ್ಯಂತ ವಿಶ್ವಾಸದಲ್ಲಿ ಆಡುತ್ತಿದೆ. ಕ್ರಿಕೇಟ್ ಇತಿಹಾಸದಲ್ಲಿ ಈ ಹಿಂದೆ ಸಾಕಷ್ಟು ಮೈಲುಗಲ್ಲುಗಳನ್ನು ಭಾರತ ಸಾಧಿಸಿದೆ. ವಿಶ್ವಕಪ್ ಗೆಲ್ಲುವ ಮೂಲಕ ಮತ್ತೊಂದು ಮೈಲುಗಲ್ಲು ತಲುಪಲಿದೆ.
| ಎಚ್.ಎಸ್.ಸಹನ
*****
ಗೆಲ್ಲುವ ಪ್ರಬಲ ತಂಡ
ಭಾರತ ಈ ಬಾರಿಯ ವಿಶ್ವಕಪ್ ಗೆಲ್ಲುವ ಪ್ರಬಲ ತಂಡವಾಗಿದೆ. ಎಲ್ಲ ವಿಭಾಗಗಳಲ್ಲೂ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ಖಂಡಿತ ಕಪ್ ಭಾರತದ ಮಡಿಲು ಸೇರಲಿದೆ.
| ಬಿ.ವಿಶ್ವನಾಥ, ಬೋಸೆದೇವರಹಟ್ಟಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
