CHITRADURGA NEWS | 08 NOVEMBER 2024
ಚಿತ್ರದುರ್ಗ: ಅನ್ನ ಬೇಕು, ಹಸಿವಾಗಿದೆ ಎಂದ ಸ್ವಂತ ಮಗನನ್ನೇ ಪಾಪಿ ತಂದೆಯೊಬ್ಬ ಗುದ್ದಿ ಕೊಂದಿರುವ ಘಟನೆ ವರದಿಯಾಗಿದೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಮತ್ತೆ ಹರಿದು ಬಂದಳು ಭದ್ರೆ | ಕೋಡಿ ಬೀಳಲು ಎರಡೂವರೆ ಅಡಿ ಬಾಕಿ

ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ರಂಗಾಪುರ ಗ್ರಾಮದ ತಿಪ್ಪೇಶ ಎಂಬುವ ವ್ಯಕ್ತಿ ತನ್ನ 6 ವರ್ಷದ ಮಗ ಮಂಜುನಾಥನನ್ನು ಕೊಲೆ ಮಾಡಿರುವ ಕುರಿತು ಭರಮಸಾಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನ.7 ಗುರುವಾರ ಮಧ್ಯಾಹ್ನ 1.30 ರ ವೇಳೆಗೆ ಮನೆಯಲ್ಲಿ ಮಗು ಊಟ ಬೇಕು ಎಂದು ಅಳುವುದಕ್ಕೆಶುರು ಮಾಡಿದೆ. ಈ ವೇಳೆ ತಾಯಿ ಗೌರಮ್ಮ ಪಕ್ಕದ ಮನೆಗೆ ಹೋಗಿ ಊಟ ತೆಗೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಿ ಮಗ ಮಂಜುನಾಥ್ ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿದ್ದಾನೆ. ಆಗ ಯಾಕೆ ಎಂದು ತಾಯಿ ವಿಚಾರಿಸಿದಾಗ, ಅಪ್ಪ ಬೆನ್ನು ಮತ್ತು ಪಕ್ಕೆಗೆ ಗುದ್ದಿದ ಎಂದು ತಿಳಿಸಿದ್ದಾನೆ.
ಅಳುತ್ತಿದ್ದ ಮಗು ಮೂರ್ಚೆ ಹೋಗಿದ್ದು, ತಕ್ಷಣ ಸಿರಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆ ತರಲಾಗಿದೆ.
ಕ್ಲಿಕ್ ಮಾಡಿ ಓದಿ: CMCRI: ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಡೀನ್ ನೇಮಕ
ಬಸವೇಶ್ವರ ಆಸ್ಪತ್ರೆಯ ವೈದ್ಯರು ಮಗುವನ್ನು ಪರೀಕ್ಷಿಸಿದಾಗ, ಮಾರ್ಗ ಮಧ್ಯೆ ಮೃತಪಟ್ಟಿರುವುದು ಗೊತ್ತಾಗಿದೆ.
ಗೌರಮ್ಮ ಹಾಗೂ ತಿಪ್ಪೇಶ ಅಂತರ್ಜಾತಿಯ ವಿವಾಹವಾಗಿದ್ದು, ಮುಂದೆ ತಮ್ಮ ಆಸ್ತಿ ಆ ಜಾತಿಯವರಿಗೆ ಸೇರುತ್ತದೆ ಎನ್ನುವ ದುರುದ್ದೇಶದಿಂದಲೇ ಕೊಲೆ ಮಾಡಿದ್ದಾನೆ.
ಕ್ಲಿಕ್ ಮಾಡಿ ಓದಿ: ಅಖಿಲ ಭಾರತ ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಸ್ಥಾನ | ಚಿತ್ರದುರ್ಗದ ಮೂರು ಹೆಸರು ಪ್ರಸ್ತಾಪಕ್ಕೆ ನಿರ್ಧಾರ
ಈ ಕೊಲೆಗೆ ತಿಪ್ಪೇಶನ ತಾಯಿ ಶೆಟ್ಯಮ್ಮ ಕೂಡಾ ಕುಮ್ಮಕ್ಕು ನೀಡಿದ್ದಾರೆ ಎಂದು ಮೃತ ಮಗುವಿನ ತಾಯಿ ಗೌರಮ್ಮ ದೂರು ದಾಖಲಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
