CHITRADURGA NEWS | 28 APRIL 2025
ಚಿತ್ರದುರ್ಗ: ಚಿತ್ರದುರ್ಗ ಪ್ರತಿಷ್ಠಿತ ನಾಟ್ಯಕಲಾ ಕೇಂದ್ರ ಲಾಸಿಕಾ ಫೌಂಡೇಶನ್ ನೃತ್ಯ ಗುರು ಶ್ವೇತಾ ಮಂಜುನಾಥ್ ಅವರ ಶಿಸ್ತು ಬದ್ದ ತರಬೇತಿಯಿಂದ ಉತ್ತಮ ಕಲಾವಿದೆಯಾಗಿ ರೂಪುಗೊಂಡ ಕಲಾಪ್ರತಿಭೆ ಕೆ.ಪಿ.ಚಂದನ, ಚಿನ್ಮಯಿ ಗುರುವಿಗೆ ತಕ್ಕ ಶಿಷ್ಯೆಯಾಗಿ ತಮ್ಮ ಅಪೂರ್ವ ನೃತ್ಯ ಕಲೆಯನ್ನು ಸಾಬೀತುಪಡಿಸಿದರು.
Also Read: ಅಸುರಕ್ಷಿತ ಲೈಂಗಿಕತೆಯು ಮಹಿಳೆಯರಲ್ಲಿ ಸಿಫಿಲಿಸ್ಗೆ ಕಾರಣವಾಗಬಹುದು ಎಚ್ಚರ

ಆಹ್ಲಾದಕಾರಿ ನೃತ್ಯಗಳ ಝೇಂಕಾರ, ಪ್ರಬುದ್ಧ ಅಭಿನಯದ ಮೂಲಕ ಶೋಭಿಸಿದ ರಂಗಪ್ರವೇಶ ನಗರದ ಜಿ.ಜಿ ಸಮುದಾಯ ಭವನದಲ್ಲಿ ಜರುಗಿತು.
ನಟುವಾಂಗದ ಮೂಲಕ ಇಡೀ ಕಾರ್ಯಕ್ರಮದ ಸೂತ್ರದಾರಿಯಾಗಿ ಭರತನಾಟ್ಯ ಗುರು ಶ್ವೇತಾ ಮಂಜುನಾಥ್ ಎಲ್ಲರ ಗಮನ ಸೆಳೆದು, ತಾನೊಬ್ಬ ಸಮರ್ಥ ನೃತ್ಯ ಗುರು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರೆ.
ಗಾಯನದಲ್ಲಿ ನಮ್ಮ ನಾಡಿನ ಭರವಸೆಯ ಉದಯೋನ್ಮುಖ ಕಲಾವಿದರಾದ ವಿದ್ವಾನ್ ಶ್ರೀ ರೋಹಿತ್ ಭಟ್ ಬೆಂಗಳೂರು, ಮೃದಂಗದಲ್ಲಿ ಬಹುಮುಖ ಪ್ರತಿಭೆ ವಿದ್ವಾನ್ ಶ್ರೀ ನಾಗೇಂದ್ರ ಪ್ರಸಾದ್ ಬೆಂಗಳೂರು, ಕೊಳಲು ವಾದನದಲ್ಲಿ ಯುವ ಕಲಾವಿದರಾದ ವಿದ್ವಾನ್ ಶಶಾಂಕ್ ಜೋಡೀದಾರ್ ಬೆಂಗಳೂರು, ರಿಧಮ್ ಪಾಡ್ ನಲ್ಲಿ ಸಾಯಿ ವಂಶಿ ಬೆಂಗಳೂರು, ಅಪಾರ ಅನುಭವಿಗಳು ಆದ ವಿದ್ವಾನ್ ಗೋಪಾಲ್ ವೆಂಕಟರಮಣ ಇವರು ವೀಣಾ ವಾದನದಲ್ಲಿ ಎಲ್ಲ ಪೇಕ್ಷಕರ ಮನಗೆದ್ದರು.
ಆರಂಭದಲ್ಲಿ ಹಿಮ್ಮೇಳ ಕಲಾವಿದರಿಂದ ವಿನಾಯಕನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ವೇದಿಕೆಗೆ ನಯ – ನಾಜೂಕಿನ ಹೆಜ್ಜೆಗಳಲ್ಲಿ ಬಳಕುತ್ತ ಪ್ರವೇಶಿಸಿದ ಕಲಾವಿದೆಯರು ಮೊದಲಿಗೆ ನೃತ್ಯದ ಅಧಿದೇವತೆ ನಟರಾಜನಿಗೆ ಪೂಜೆಯನ್ನು ಸಲ್ಲಿಸಿದರು.
ಶ್ವೇತ ಮಂಜುನಾಥರವರು ತಮ್ಮ ನೃತ್ಯ ಕಲಿಕೆಯ ಗುರುಗಳಾದ ಹಾಗು ನೃತ್ಯ ಕಲಿಕೆಯಲ್ಲಿ ತಮ್ಮ ಬೆನ್ನೆಲುಬಾಗಿ ನಿಂತಿರುವಂತಹ ನಾಟ್ಯ ಸರಸ್ವತಿ ಬಿರುದಾಂಕಿತೆ , ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭ ಧನಂಜಯರವರಿಗೆ ವಂದನೆ ಸಲ್ಲಿಸಿ, ತನ್ನ ಶಿಷ್ಯೆ ಯಶಸ್ವಿನಿಗೆ ಗೆಜ್ಜೆ ತೊಡಿಸುವುದರ ಮೂಲಕ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಣಪತಿ ಸ್ತುತಿ, ಅರ್ಧನಾರೀಶ್ವರ, ಭರತನಾಟ್ಯದ ಕೇಂದ್ರ ಭಾಗವಾಗಿರುವ ವರ್ಣ ನೃತ್ಯ ಸುಮನೋಹರವಾಗಿ ಕಣ್ಮುಂದೆ ತಂದಳು, ಬೆಡಗು ತುಂಬಿದ ನೃತ್ಯಗಳಲ್ಲೇ ಆಕರ್ಷಕ ಭಂಗಿಗಳನ್ನು ಕೊಟ್ಟಿದ್ದು ವಿಶೇಷ.
Also Read: ಒಣದ್ರಾಕ್ಷಿ ನೀರನ್ನು ಇವರು ಯಾರು ಸೇವಿಸಬಾರದು?
ಹನುಮಾನ್ ಚಾಲೀಸ್ ಮತ್ತು ಜಾವಳಿ ನ್ರತ್ಯಗಳು ಕಲಾ ವಿದ್ವಾಂಸರ ಮತ್ತು ಕಲಾರಸಿಕರ ಪ್ರಶಂಸೆಗೆ ಪಾತ್ರವಾದವು. ಕೊನೆಯದಾಗಿ ತಿಲ್ಲಾನ ಮತ್ತು ಮಂಗಳದೊಂದಿಗೆ ಭರತನಾಟ್ಯ ರಂಗಪ್ರವೇಶವನ್ನು ಸುಮಾರು ಮೂರು ಘಂಟೆಗಳ ಕಾಲ ಏಕವ್ಯಕ್ತಿ ಪ್ರದರ್ಶನ ನೀಡುವುದರ ಮೂಲಕ ಯಶಸ್ವಿಯಾಗಿ ತಮ್ಮ ನ್ರತ್ಯ ಪ್ರದರ್ಶನವನ್ನು ಸಂಪನ್ನಗೊಳಿಸಿದರು.
ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶುಭ ಧನಂಜಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ರೇವಣಸಿದ್ದಪ್ಪ ರಾಮಾಂಜನೇಯ, ಲಾಸಿಕ ಫೌಂಡೇಶನ್ ಅಧ್ಯಕ್ಷ ರತ್ನಾಕರ ಭಟ್, ಮಂಜುನಾಥ್ ಭಾಗವತ್ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
