By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಮನಮೋಹಕ ಭರತನಾಟ್ಯ ಪ್ರದರ್ಶಿಸಿದ ಚಂದನ, ಚಿನ್ಮಯಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಮನಮೋಹಕ ಭರತನಾಟ್ಯ ಪ್ರದರ್ಶಿಸಿದ ಚಂದನ, ಚಿನ್ಮಯಿ

ಮುಖ್ಯ ಸುದ್ದಿ

ಮನಮೋಹಕ ಭರತನಾಟ್ಯ ಪ್ರದರ್ಶಿಸಿದ ಚಂದನ, ಚಿನ್ಮಯಿ

News Desk Chitradurga News
Last updated: 29 April 2025 07:28
News Desk Chitradurga News
2 months ago
Share
ಮನಮೋಹಕ ಭರತನಾಟ್ಯ ಪ್ರದರ್ಶಿಸಿದ ಚಂದನ, ಚಿನ್ಮಯಿ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 28 APRIL 2025

ಚಿತ್ರದುರ್ಗ: ಚಿತ್ರದುರ್ಗ ಪ್ರತಿಷ್ಠಿತ ನಾಟ್ಯಕಲಾ ಕೇಂದ್ರ ಲಾಸಿಕಾ ಫೌಂಡೇಶನ್ ನೃತ್ಯ ಗುರು ಶ್ವೇತಾ ಮಂಜುನಾಥ್ ಅವರ ಶಿಸ್ತು ಬದ್ದ ತರಬೇತಿಯಿಂದ ಉತ್ತಮ ಕಲಾವಿದೆಯಾಗಿ ರೂಪುಗೊಂಡ ಕಲಾಪ್ರತಿಭೆ ಕೆ.ಪಿ.ಚಂದನ, ಚಿನ್ಮಯಿ ಗುರುವಿಗೆ ತಕ್ಕ ಶಿಷ್ಯೆಯಾಗಿ ತಮ್ಮ ಅಪೂರ್ವ ನೃತ್ಯ ಕಲೆಯನ್ನು ಸಾಬೀತುಪಡಿಸಿದರು.

Also Read: ಅಸುರಕ್ಷಿತ ಲೈಂಗಿಕತೆಯು ಮಹಿಳೆಯರಲ್ಲಿ ಸಿಫಿಲಿಸ್‍ಗೆ ಕಾರಣವಾಗಬಹುದು ಎಚ್ಚರ

ಆಹ್ಲಾದಕಾರಿ ನೃತ್ಯಗಳ ಝೇಂಕಾರ, ಪ್ರಬುದ್ಧ ಅಭಿನಯದ ಮೂಲಕ ಶೋಭಿಸಿದ ರಂಗಪ್ರವೇಶ ನಗರದ ಜಿ.ಜಿ ಸಮುದಾಯ ಭವನದಲ್ಲಿ ಜರುಗಿತು.

ನಟುವಾಂಗದ ಮೂಲಕ ಇಡೀ ಕಾರ್ಯಕ್ರಮದ ಸೂತ್ರದಾರಿಯಾಗಿ ಭರತನಾಟ್ಯ ಗುರು ಶ್ವೇತಾ ಮಂಜುನಾಥ್ ಎಲ್ಲರ ಗಮನ ಸೆಳೆದು, ತಾನೊಬ್ಬ ಸಮರ್ಥ ನೃತ್ಯ ಗುರು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರೆ.

ಗಾಯನದಲ್ಲಿ ನಮ್ಮ ನಾಡಿನ ಭರವಸೆಯ ಉದಯೋನ್ಮುಖ ಕಲಾವಿದರಾದ ವಿದ್ವಾನ್ ಶ್ರೀ ರೋಹಿತ್ ಭಟ್ ಬೆಂಗಳೂರು, ಮೃದಂಗದಲ್ಲಿ ಬಹುಮುಖ ಪ್ರತಿಭೆ ವಿದ್ವಾನ್ ಶ್ರೀ ನಾಗೇಂದ್ರ ಪ್ರಸಾದ್ ಬೆಂಗಳೂರು, ಕೊಳಲು ವಾದನದಲ್ಲಿ ಯುವ ಕಲಾವಿದರಾದ ವಿದ್ವಾನ್ ಶಶಾಂಕ್ ಜೋಡೀದಾರ್ ಬೆಂಗಳೂರು, ರಿಧಮ್ ಪಾಡ್ ನಲ್ಲಿ ಸಾಯಿ ವಂಶಿ ಬೆಂಗಳೂರು, ಅಪಾರ ಅನುಭವಿಗಳು ಆದ ವಿದ್ವಾನ್ ಗೋಪಾಲ್ ವೆಂಕಟರಮಣ ಇವರು ವೀಣಾ ವಾದನದಲ್ಲಿ ಎಲ್ಲ ಪೇಕ್ಷಕರ ಮನಗೆದ್ದರು.

Also Read: ವಿಟಮಿನ್ ಇ ಕ್ಯಾಪ್ಸುಲ್‍ಗಳ ಜೊತೆ ಇದನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೊಳೆಯುತ್ತದೆ

ಆರಂಭದಲ್ಲಿ ಹಿಮ್ಮೇಳ ಕಲಾವಿದರಿಂದ ವಿನಾಯಕನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ವೇದಿಕೆಗೆ ನಯ – ನಾಜೂಕಿನ ಹೆಜ್ಜೆಗಳಲ್ಲಿ ಬಳಕುತ್ತ ಪ್ರವೇಶಿಸಿದ ಕಲಾವಿದೆಯರು ಮೊದಲಿಗೆ ನೃತ್ಯದ ಅಧಿದೇವತೆ ನಟರಾಜನಿಗೆ ಪೂಜೆಯನ್ನು ಸಲ್ಲಿಸಿದರು.

ಶ್ವೇತ ಮಂಜುನಾಥರವರು ತಮ್ಮ ನೃತ್ಯ ಕಲಿಕೆಯ ಗುರುಗಳಾದ ಹಾಗು ನೃತ್ಯ ಕಲಿಕೆಯಲ್ಲಿ ತಮ್ಮ ಬೆನ್ನೆಲುಬಾಗಿ ನಿಂತಿರುವಂತಹ ನಾಟ್ಯ ಸರಸ್ವತಿ ಬಿರುದಾಂಕಿತೆ , ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭ ಧನಂಜಯರವರಿಗೆ ವಂದನೆ ಸಲ್ಲಿಸಿ, ತನ್ನ ಶಿಷ್ಯೆ ಯಶಸ್ವಿನಿಗೆ ಗೆಜ್ಜೆ ತೊಡಿಸುವುದರ ಮೂಲಕ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗಣಪತಿ ಸ್ತುತಿ, ಅರ್ಧನಾರೀಶ್ವರ, ಭರತನಾಟ್ಯದ ಕೇಂದ್ರ ಭಾಗವಾಗಿರುವ ವರ್ಣ ನೃತ್ಯ ಸುಮನೋಹರವಾಗಿ ಕಣ್ಮುಂದೆ ತಂದಳು, ಬೆಡಗು ತುಂಬಿದ ನೃತ್ಯಗಳಲ್ಲೇ ಆಕರ್ಷಕ ಭಂಗಿಗಳನ್ನು ಕೊಟ್ಟಿದ್ದು ವಿಶೇಷ.

Also Read: ಒಣದ್ರಾಕ್ಷಿ ನೀರನ್ನು ಇವರು ಯಾರು ಸೇವಿಸಬಾರದು?

ಹನುಮಾನ್ ಚಾಲೀಸ್ ಮತ್ತು ಜಾವಳಿ ನ್ರತ್ಯಗಳು ಕಲಾ ವಿದ್ವಾಂಸರ ಮತ್ತು ಕಲಾರಸಿಕರ ಪ್ರಶಂಸೆಗೆ ಪಾತ್ರವಾದವು. ಕೊನೆಯದಾಗಿ ತಿಲ್ಲಾನ ಮತ್ತು ಮಂಗಳದೊಂದಿಗೆ ಭರತನಾಟ್ಯ ರಂಗಪ್ರವೇಶವನ್ನು ಸುಮಾರು ಮೂರು ಘಂಟೆಗಳ ಕಾಲ ಏಕವ್ಯಕ್ತಿ ಪ್ರದರ್ಶನ ನೀಡುವುದರ ಮೂಲಕ ಯಶಸ್ವಿಯಾಗಿ ತಮ್ಮ ನ್ರತ್ಯ ಪ್ರದರ್ಶನವನ್ನು ಸಂಪನ್ನಗೊಳಿಸಿದರು.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶುಭ ಧನಂಜಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ವೇಳೆ ರೇವಣಸಿದ್ದಪ್ಪ ರಾಮಾಂಜನೇಯ, ಲಾಸಿಕ ಫೌಂಡೇಶನ್ ಅಧ್ಯಕ್ಷ ರತ್ನಾಕರ ಭಟ್, ಮಂಜುನಾಥ್ ಭಾಗವತ್ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BharatanatyamChitradurgaChitradurga newsChitradurga UpdatesDanceKannada Latest NewsKannada NewsPerformancestage entranceಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ನೃತ್ಯಪ್ರದರ್ಶನಭರತನಾಟ್ಯರಂಗಪ್ರವೇಶ
Share This Article
Facebook Email Print
Previous Article ಜಯಂತಿಗಳು ಅರ್ಥಪೂರ್ಣವಾಗಿರಬೇಕು | ಡಾ.ಬಸವಕುಮಾರ ಸ್ವಾಮೀಜಿ
Next Article ಈ ಜನರು ಸೋರೆಕಾಯಿಯನ್ನು ಸೇವಿಸಬಾರದು? 
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
ಸೋಲು ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‍ ಗೌಡ
ಮುಖ್ಯ ಸುದ್ದಿ
Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up