ಆಪರೇಷನ್‌ ಸಿಂದೂರ್ ಯಶಸ್ವಿಯಾಗಲೆಂದು ಬಿಜೆಪಿ ವಿಶೇಷ ಪೂಜೆ

CHITRADURGA NEWS | 10 may 2025

ಚಿತ್ರದುರ್ಗ: ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಹಾರೈಸಿ ಬಿಜೆಪಿ ಚಿತ್ರದುರ್ಗ ಜಿಲ್ಲಾ ಘಟಕದಿಂದ ನಗರದ ಬರಗೇರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ನಡೆಸಲಾಯಿತು.

Also Read: ಮಿಸ್ಟರ್‌ ಅಂಡ್‌ ಮಿಸ್‌ ಜೆಎಂಐಟಿ ಸ್ಪರ್ಧೆ | ಶೈಲೇಂದ್ರ, ರಕ್ಷಿತಾ ಆಯ್ಕೆ | ಸ್ಟೈಲಿಷ್‌ ವಾಕ್‌, ಸ್ಟೈಲ್‌ ಐಕಾನ್‌ ಪೈಪೋಟಿ

ಈ ವೇಳೆ ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ಭಾರತದ ಸೈನಿಕರು ಪಾಕಿಸ್ಥಾನದಲ್ಲಿನ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ಮಾಡದೇ ಕೇವಲ ಉಗ್ರರ ಅಡಗು ತಾಣಗಳನ್ನು ಹುಡುಕಿ ಹೊಡೆಯುತ್ತಿದ್ದಾರೆ. ನಮ್ಮ ಸೈನಿಕರಿಗೆ ನಾವುಗಳು ಬೆಂಬಲವಾಗಿ ನಿಲ್ಲಬೇಕಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ ಎಂದರು.

ಉಗ್ರ ಕೃತ್ಯಗಳಿಗೆ ಬೆಂಬಲ ನೀರುವ ಮೂಲಕ ಉಪಟಳ ನೀಡುತ್ತಿದ್ದ ಪಾಕಿಸ್ಥಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಫಹಲ್ಗಾಮ್‌ ಪ್ರವಾಸಿಗರ ಹತ್ಯೆ ನಡೆಸಿದ್ದ ಉಗ್ರರ ಹುಟ್ಟಡಗಿಸುವ ಕೆಲಸ ಮಾಡುತ್ತಿರುವ ಸೈನಿಕರಿಗೆ ನಮ್ಮ ಬೆಂಬಲ ಇರಬೇಕು. ಈ ಮೂಲಕ ಅಂದು ಕುಂಕುಮ ಅಳಿಸಿರುವ ಉಗ್ರರಿಗೆ ಆಪರೇಷನ್‌ ಸಿಂದೂರದ ಮೂಲಕ ಪಾಠ ಕಲಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ಕಳೆದ ಮೂರು ದಿನಗಳಿಂದ ನಮ್ಮ ಸೈನಿಕರು ಪಾಕಿಸ್ಥಾನದ ಉಗ್ರರ ಅಡಗು ತಾಣಗಳನ್ನು ಹುಡುಕಿ ಹೊಡೆದು ಉರುಳಿಸಿದ್ದಾರೆ. ಇದರಲ್ಲಿ ನಮ್ಮ ಸೇನೆಯ ನಿಖರತೆ ಜಗತ್ತಿಗೆ ಮಾದರಿಯಾಗಿದೆ.

Also Read: ಮೇ.26 ರಿಂದ SSLC ಪರೀಕ್ಷೆ-2 | ನೋಂದಣಿಗೆ ಸೂಚನೆ

ಭಾರತೀಯ ಸೇನೆ, ನಮ್ಮ ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿ, ಗೃಹ ಮಂತ್ರಿ ಹಾಗೂ ವಿದೇಶಾಂಗ ಮಂತ್ರಿ ನೇತೃತ್ವದಲ್ಲಿ ಉತ್ತಮ ತೀರ್ಮಾನ ತೆಗೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ದಾಳಿ ಮಾಡುವ ಸ್ವಾತಂತ್ರ್ಯವನ್ನು ಸೇನೆಗೆ ನೀಡಲಾಗಿದೆ. ಪಾಕಿಸ್ಥಾನದ ಮೇಲೆ ದಾಳಿ ನಡೆದರೂ ಅಲ್ಲಿನ ನಾಗರೀಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಇಷ್ಟಾದರೂ ಪಾಕಿಸ್ಥಾನ ತನ್ನ ನರಿ ಬುದ್ದಿ ಬಿಡದೆ ಮತ್ತೆ ಮತ್ತೆ ಕುತಂತ್ರ ಮಾಡಿ ಕೆಣಕುವ ಕೆಲಸ ಮಾಡುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಮತ್ತೇ ದಾಳಿ ಮಾಡುವ ಮೂಲಕ ಭಾರತೀಯ ನಾಗರೀಕರಿಗೆ ತೊಂದರೆ ಮಾಡಿದೆ. ಭಾರತದ ಮೇಲೆ ಬಂದ ಪಾಕ್‌ ಕ್ಷಿಪಣಿಗಳನ್ನು ನಮ್ಮ ಸೇನೆ ಆಕಾಶದಲ್ಲಿಯೇ ಹೊಡೆದು ಉರುಳಿಸಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ ಕುಮಾರ್, ಖಂಜಾಚಿ ಮಾಧುರಿ ಗೀರೀಶ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷರಾಧ ಶ್ಯಾಮಲ ಶಿವಪ್ರಕಾಶ್, ಮುಖಂಡರಾದ ನಾಗರಾಜ್ ಬೇದ್ರೇ, ಯಶವಂತ ಕುಮಾರ್, ರೇಖಾ, ಸುಮಾ, ಲೀಲಾ ಶಶಿಧರ್, ತಿಪ್ಪೇಸ್ವಾಮಿ, ಮಂಜುಳಮ್ಮ, ವಿರುಪಾಕ್ಷ ಯಾದವ್, ಪ್ರದೀಪ್ ಕುಮಾರ್, ಮೋಹನ್, ಓಂಕಾರಪ್ಪ, ಮಾಂತೇಶ್ ಯಾದವ್, ವಸಂತ ಲಕ್ಷ್ಮಸಾಗರ್, ಹೇರಿಸ್ವಾಮಿ, ಲೋಕೇಶ್ ಇತರರಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version