Connect with us

    ಏ.28 ರಿಂದ ಮುರುಘಾಮಠದಲ್ಲಿ ಬಸವ ಜಯಂತಿ ಕಾರ್ಯಕ್ರಮ | ಸಭೆಯಲ್ಲಿ ತೀರ್ಮಾನ

    ಮುಖ್ಯ ಸುದ್ದಿ

    ಏ.28 ರಿಂದ ಮುರುಘಾಮಠದಲ್ಲಿ ಬಸವ ಜಯಂತಿ ಕಾರ್ಯಕ್ರಮ | ಸಭೆಯಲ್ಲಿ ತೀರ್ಮಾನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 09 APRIL 2025

    ಚಿತ್ರದುರ್ಗ: ಇಲ್ಲಿನ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಇದೇ ಏಪ್ರಿಲ್ 28, 29, 30ರಂದು ಮೂರು ದಿನಗಳ ಕಾಲ ಬಸವ ಜಯಂತಿ ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆವು ಅನುಭವ ಮಂಟಪದಲ್ಲಿ ನಡೆಯಿತು.

    Also Read: ದ್ವಿತೀಯ ಪಿಯುಸಿ ರಿಸಲ್ಟ್‌ | ಇವರೇ ನೋಡಿ ಜಿಲ್ಲೆಯ ಟಾಪರ್ಸ್‌ | ಜಿಲ್ಲೆಗೆ ಶೇ.59.87 ಫಲಿತಾಂಶ

    ಸಭೆಯಲ್ಲಿ ಸಾನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರಸ್ವಾಮಿಗಳು ಮಾತನಾಡಿ, ಬಸವಣ್ಣನವರನ್ನು ಎರಡು ರೀತಿಯಲ್ಲಿ ಅನುಸಂಧಾನ ಮಾಡುವುದಿದೆ. ಒಂದು ಶೈವ ಮತ್ತೊಂದು ಶಕ್ತಿಯಾಗಿ. ಮೂರ್ತಿರೂಪದಲ್ಲಿ ಅವರನ್ನು ನಾಲ್ಕು ಕಾಲಿನ ಎತ್ತಿನ ರೂಪದಲ್ಲಿ ನೋಡುವುದು ಶೈವ ಪದ್ಧತಿಯಾದರೆ, ಆತನನ್ನು ಶಕ್ತಿಯಾಗಿ ನೋಡುವುದರಲ್ಲಿ ಬಸವಣ್ಣ ಎತ್ತಲ್ಲ, ಬದಲಿಗೆ, ಕೆಳಗೆ ಬಿದ್ದವರನ್ನು ಎತ್ತುವ ಕೆಲಸವನ್ನು ಮಾಡಿದ್ದಾರೆ.

    ತನ್ನ ಸಾಧನೆ, ಕತೃತ್ವ ಶಕ್ತಿಯಿಂದ ಅನೇಕ ಆಯಾಮಗಳಿಂದ ಬಸವಣ್ಣ ಈ ನಾಡಿಗೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಸಮಾಜದ ಶಕ್ತಿಯಾಗಿದ್ದಾರೆ. ಅಂತಹ ಪ್ರಬಲ ಶಕ್ತಿ ಸದಾಕಾಲ ನಮ್ಮೊಂದಿಗಿದ್ದರೆ ನಾವು ಜೀವನದಲ್ಲಿ ಸೋಲುವುದಿಲ್ಲ. ಹಾಗೆ ನೋಡಿದರೆ ಅವರು ಕೇವಲ ಕರ್ನಾಟಕಕ್ಕೆ ಸಾಂಸ್ಕೃತಿಕ ನಾಯಕನಲ್ಲ. ಅವರು ಇಡೀ ವಿಶ್ವದ ನಾಯಕ ಎಂದರು.

    ಕಳೆದ 900 ವರ್ಷಗಳ ಹಿಂದೆ ಜಗತ್ತೇ ಮೆಚ್ಚಿ ಆದರಿಸುವಂತಹ ಸಂಸತ್ತನ್ನು ನೀಡಿ ಹೋಗಿರುವುದು ಸಾಮಾನ್ಯ ಮಾತಲ್ಲ. ಅವರು ಸಂಕಷ್ಟಗಳನ್ನೆದುರಿಸಿ, ಅನುಭವಿಸಿ ಒಂದು ತತ್ವ ಸಿದ್ಧಾಂತವನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ. ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರ ಆಶಯದಂತೆ ಈ ಬಾರಿಯೂ ಮೂರುದಿನಗಳ ಕಾಲ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆದರ್ಶವಾಗಿ ಆಚರಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ.

    Also Read: ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ | ಯುವ ಕಾಂಗ್ರೆಸ್‍ ಕಾರ್ಯಕರ್ತರಿಂದ ಪ್ರತಿಭಟನೆ  

    ಜಯಂತಿಯ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಬಂಧ, ವಚನಗಾಯನ, ಕಂಠಪಾಠ, ವೇಷಭೂಷಣ ಸ್ಪರ್ಧೆ ಸೇರಿದಂತೆ ತತ್ವಧಾರಿತವಾಗಿ ಏನು ಬೇಕೋ ಅದನ್ನೆಲ್ಲವನ್ನು ನಾವು ನೀವೆಲ್ಲರೂ ಸೇರಿ ಮಾಡೋಣ.

    ಶ್ರೀಮಠದ ವತಿಯಿಂದ ಈ ಹಿಂದೆ ಪ್ರಕಟಗೊಳ್ಳುತ್ತಿದ್ದ “ಸತ್ಯಶುದ್ಧ ಕಾಯಕ” ತ್ರೈಮಾಸಿಕ ಪತ್ರಿಕೆಯನ್ನು ಜಯಂತಿ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ತಯಾರಿ ನಡೆದಿದೆ. ವಚನಕಾರರ ವಚನಗಳ ಕಿರುಹೊತ್ತಿಗೆಯನ್ನು ಪ್ರಕಟಿಸುವ ಆಶಯವಿದೆ ಎಂದರು.

    ಸಭೆಯ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಈ ನಾಡಿನಲ್ಲಿ ಬಸವ ಜಯಂತಿಯನ್ನು ಮುರುಘಾಮಠದ ಶಾಖಾಮಠವಾದ ದಾವಣಗೆರೆ ವಿರಕ್ತಮಠದಲ್ಲಿ ಮೃತ್ಯುಂಜಯ ಅಪ್ಪಗಳ ನೇತೃತ್ವದಲ್ಲಿ ಹರ್ಡೇಕರ್ ಮಂಜಪ್ಪನವರು ಮೊದಲಿಗೆ ಆರಂಭಿಸಿದ್ದು ವಿಶೇಷ.

    Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ

    ಶ್ರೀಮಠವು ಬಸವತತ್ವದ ಅನುಸರಣೆ ಮತ್ತು ಪ್ರಸಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂಚೂಣಿಯಲ್ಲಿದೆ ಎಂದರು. ಬಸವಣ್ಣ ಒಂದು ಮಹಾಬೆಳಕು. ಆ ಬೆಳಕಿನಲ್ಲಿ ನಾವುಗಳೆಲ್ಲರೂ ಸಾಗಬೇಕಿದೆ. ಆ ತತ್ವ ಚಿರನೂತನವಾದದ್ದು, ಅವುಗಳ ಅನುಸರಿಸರಿಕೆಯಲ್ಲಿ ನಾವು ಸದಾ ಮುಂದಿರಬೇಕೆ0ದು ಕರೆ ನೀಡಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಂಶೋಧಕ, ಸಾಹಿತಿ, ವಿದ್ವಾಂಸರು ಆದ ಡಾ. ಬಿ ರಾಜಶೇಖರಪ್ಪ ಅವರು ಮಾತನಾಡಿ ಬಹು ಹಿಂದಿನಲೂ ಬಸವ ಜಯಂತಿಯನ್ನು ಶ್ರೀಮಠವು ಆಚರಿಸಿಕೊಂಡು ಬಂದಿದೆ. ಆ ಎಲ್ಲ ಕಾರ್ಯಕ್ರಮಗಳು ಯಥಾವತ್ತಾಗಿ ನಡೆಯುತ್ತಾ ಬಂದಿವೆ ಎಂದರು.

    ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ ಮಾತನಾಡಿ, ಬಸವಣ್ಣ ಅಂದರೇನೆ ಆದರ್ಶ. ಆದರ್ಶಕ್ಕೆ ಚ್ಯುತಿ ಬಾರದಂತೆ ಆಡಂಬರ ರಹಿತವಾಗಿ ಆದರ್ಶವೇ ಮೈವೆತ್ತಂತೆ ಜಯಂತಿ ಆಚರಣೆ ಕಾರ್ಯಕ್ರಮಗಳು ಜರುಗಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.

    ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ, ಸರ್ವರ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರ ಕೊಡುಗೆ ಆಶಯಗಳನ್ನು ಜನತೆಗೆ ತಿಳಿಸುವ ಕೆಲಸ ಸರ್ವರ ಸಹಭಾಗಿತ್ವದಲ್ಲಿ ಆಚರಿಸುವಂತಾಗಬೇಕೆಂದು ಸಲಹೆ ನೀಡಿದರು.

    Also Read: PU ರಿಸಲ್ಟ್ | ವಾಸವಿ ವಿದ್ಯಾ ಸಂಸ್ಥೆಗೆ ಉತ್ತಮ ಫಲಿತಾಂಶ

    ಜಿಲ್ಲಾ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ವೀರೇಶ್ ಮಾತನಾಡಿ, ಎಲ್ಲರೂ ಒಟ್ಟಾಗಿ ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಎಲ್ಲರೂ ಸೇರಿ ಆಚರಿಸೋಣ. ಅದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಳ್ಳೋಣ ಎಂದು ಹೇಳಿದರು.

    ಲೇಖಕ ಎಚ್. ಆನಂದಕುಮಾರ್, ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೆಸ್ವಾಮಿ, ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಸಂಗಮ್ ಮಾತನಾಡಿದರು.

    ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಟಿ. ನಂದೀಶ್, ಡಾ.ಯಶೋದ ರಾಜಶೇಖರಪ್ಪ ಸೇರಿದಂತೆ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ವಿವಿಧ ಸಮಾಜಗಳ ಮುಖಂಡರುಗಳಾದ ಷಡಾಕ್ಷರಯ್ಯ, ಕುಬೇರಪ್ಪ, ಶಶಿಧರಬಾಬು, ವಿಜಯಲಕ್ಷ್ಮಿ, ಗೀತಾ ಮುರುಗೇಶ್, ಜಯಶೀಲ, ಮಹಮ್ಮದ್ ಸಾಧಿಕ್ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.

    Also read: ಹೊಳೆಯುವ ಮೈಕಾಂತಿ ಪಡೆಯಬೇಕೆ…?ನಿಮ್ಮ ಚರ್ಮದ ಆರೈಕೆ ಹೀಗಿರಲಿ!

    ವಿವಿಧ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

    ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾರ್ ವಚನ ಗೀತೆಗಳನ್ನು ಹಾಡಿದರು. ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ಸ್ವಾಗತಿಸಿದರು. ಡಾ. ನವೀನ್ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top