ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡ ನ.30 (ಗುರುವಾರ)ರ ಮಧ್ಯಾಹ್ನ 12.15ಕ್ಕೆ ವಿಜಯ ಯಾತ್ರೆ ಮೂಲಕ ಚಿತ್ರದುರ್ಗಕ್ಕೆ ಆಗಮಿಸುತ್ತಿದೆ. ನಗರದ ಪ್ರಸನ್ನ ಚಿತ್ರಮಂದಿರಕ್ಕೆ ನಟ ಅಭಿಷೇಕ್ ಅಂಬರೀಶ್, ನಿರ್ದೇಶಕ ದುನಿಯಾ ಸೂರಿ, ನಟಿ ರಚಿತಾ ರಾಮ್ ಹಾಗೂ ಇಡೀ ‘ಬ್ಯಾಡ್ ಮ್ಯಾನರ್ಸ್’ ತಂಡ ಆಗಮಿಸುತ್ತಿದೆ.
ಈಗಾಗಲೇ ಚಿತ್ರತಂಡ ವಿಜಯ ಯಾತ್ರೆಯನ್ನು ಮಂಡ್ಯ, ಮದ್ದೂರು, ಮೈಸೂರು, ತುಮಕೂರಿನಲ್ಲಿ ಯಶಸ್ವಿಗೊಳಿಸಿದ್ದು, ಇದೀಗ ಚಿತ್ರದುರ್ಗಕ್ಕೆ ಆಗಮಿಸುತ್ತಿದೆ. ತಂಡಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಾಥ್ ನೀಡಲಿದ್ದಾರೆ ಎಂದು ಪ್ರಸನ್ನ ಚಿತ್ರಮಂದಿರದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅಮರ್ ಬಳಿಕ ಸೂರಿ ನಿರ್ದೇಶನಕದಲ್ಲಿ ಅಭಿಷೇಕ್ ಅಂಬರೀಶ್ ಕೈಯಲ್ಲಿ ಗನ್ ಹಿಡಿದು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಖಾಡಕ್ಕಿಳಿದಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಅವರದ್ದು ಹೇಳಿ ಮಾಡಿಸಿದ ಮೈಕಟ್ಟು. ಫೈಟ್ಗಳನ್ನು ಕೂಡ ಸಲೀಸಲಾಗಿ ಮಾಡಿರುವುದು ಪ್ರೇಕ್ಷರನ್ನು ಫಿದಾಗೊಳಿಸಿದೆ.
ಪುಟ್ಟಣ್ಣ ಕಣಗಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ‘ಕ್ಯಾರೆ ಬುಲ್ಬುಲ್’ ಎನ್ನುತ್ತಾ ಜಲೀಲಾನ ಮೂಲ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಅಂಬರೀಷ್ ಮುಂದೆ ರೆಬಲ್ ಸ್ಟಾರ್ ಆಗಿ ಮಿಂಚಿ ಅಭಿಮಾನಗಳ ಮನದಲ್ಲಿ ವಿರಾಜಮಾನವಾಗಿದ್ದಾರೆ.
ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಶ್ ಗೂ ಕೂಡ ಚಿತ್ರದುರ್ಗ ಎಂದರೆ ಎಲ್ಲಿಲ್ಲದ ಪ್ರೀತಿ. ಆ ಕಾರಣಕ್ಕೆ ಕೆಲ ತಿಂಗಳ ಅಂತರದಲ್ಲಿ ಮೂರನೇ ಬಾರಿ ಕೋಟೆನಾಡಿಗೆ ಆಗಮಿಸುತ್ತಿದ್ದಾರೆ.
ಸೆ.21 ಹಿಂದೂ ಮಹಾಗಣಪತಿ ಬಳಿ ರೈತರಿಗಾಗಿ ಪ್ರಾರ್ಥನೆ ಮಾಡಿದ್ದ ಅಭಿಷೇಕ್ ಪುನಃ ಅ.8 ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಇದೀಗ ’ಬ್ಯಾಡ್ ಮ್ಯಾನರ್ಸ್’ ಮೂಲಕ ಪುನಃ ಆಗಮಿಸುತ್ತಿದ್ದಾರೆ. ಇವರ ಆಗಮನದ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.