CHITRADURGA NEWS | 26 April 2025
ಬಾಲಿವುಡ್ ಬಾದ್ ಶಾ ಎಂದೆ ಕರೆಯುವ ನಟ ಶಾರುಖ್ ಖಾನ್ ಭಾರತದ ಚಲನಚಿತ್ರೋದ್ಯಮದಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ ಮತ್ತು ಇವರು ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಹೊಂದಿದ್ದಾರೆ.
ನಟ ಅಭಿನಯದಲ್ಲಿ ಮಾತ್ರವಲ್ಲ ಫಿಟ್ ಲುಕ್ಗೂ ಹೆಸರುವಾಸಿಯಾಗಿದ್ದಾರೆ. ಶಾರುಖ್ ಖಾನ್ ವಾರದ ಹೆಚ್ಚಿನ ದಿನಗಳಲ್ಲಿ ಆರೋಗ್ಯಕರವಾದ ಆಹಾರವನ್ನು ತಿನ್ನುತ್ತಾರಂತೆ. ಹಾಗಾಗಿ ಅವರು ಈಗಲೂ ಫಿಟ್ ಆಗಿ ಇದ್ದಾರೆ. ನಟ ಶಾರುಖ್ ಖಾನ್ ಫಿಟ್ ಆಗಿರಲು ಪ್ರತಿದಿನ ಈ 5 ಆರೋಗ್ಯಕರ ಆಹಾರಗಳನ್ನು ಸೇವಿಸುತ್ತಾರಂತೆ
ತೆಳ್ಳಗಿನ ಮಾಂಸ:
ಶಾರುಖ್ ಖಾನ್ ಅವರು ಕೆಲವೊಮ್ಮೆ ಬೆಳಗ್ಗಿನ ಉಪಾಹಾರವನ್ನು ಬಿಟ್ಟುಬಿಡುತ್ತಾರೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ ಪ್ರೋಟೀನ್ ವಿಷಯಕ್ಕೆ ಬಂದಾಗ, ಅವರು ಸ್ಕಿನ್ಔಟ್ ಚಿಕನ್ ಮತ್ತು ಟರ್ಕಿಯಂತಹ ತೆಳ್ಳಗಿನ ಮಾಂಸದ ಪೀಸ್ಗಳನ್ನು ತಿನ್ನುತ್ತಾರಂತೆ.
ಮೊಟ್ಟೆಯ ಬಿಳಿಭಾಗ:
ಶಾರುಖ್ ಅವರ ಆಹಾರದಲ್ಲಿ ಪ್ರೋಟೀನ್ಗಳು ಸಮೃದ್ಧವಾಗಿದ್ದು, ಕಾರ್ಬೋಹೈಡ್ರೇಟ್ಗಳು ಕಡಿಮೆ ಇರುತ್ತದೆಯಂತೆ. ಹಾಗಾಗಿ ಇದು ಅವರಿಗೆ ತೆಳ್ಳಗೆ ಮತ್ತು ಸದೃಢವಾಗಿರುವ ಮೈಕಟ್ಟು ಹೊಂದಲು ಅನುವು ಮಾಡಿಕೊಡುತ್ತದೆ. ಮೊಟ್ಟೆಯ ಬಿಳಿಭಾಗವು ದೇಹದಲ್ಲಿ ಪ್ರೋಟೀನ್ ಅನ್ನು ಹೆಚ್ಚಿಸುವ ಆರೋಗ್ಯಕರ ಪದಾರ್ಥವಾಗಿದೆ. ಏಕೆಂದರೆ ಅವು ಹಲವಾರು ಅಗತ್ಯ ಖನಿಜಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿವೆ.
ಹಣ್ಣಿನ ರಸಗಳು:
ಶಾರುಖ್ ಅವರ ತರಬೇತುದಾರ ಮತ್ತು ಪೌಷ್ಟಿಕತಜ್ಞ ಪ್ರಶಾಂತ್ ಸಾವಂತ್ ನಟ 25 ವರ್ಷದ ವ್ಯಕ್ತಿಯಂತೆ ಶಕ್ತಿಯುತವಾಗಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಅವರು ಹಣ್ಣಿನ ರಸಗಳನ್ನು ಕುಡಿಯುತ್ತಾರಂತೆ. ಇದು ನೈಸರ್ಗಿಕ ಸಕ್ಕರೆಗಳು ಮತ್ತು ಪೋಷಕಾಂಶಗಳಿಂದ ತುಂಬಿದ್ದು, ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ದ್ವಿದಳ ಧಾನ್ಯಗಳು:
ಶಾರುಖ್ ಖಾನ್ ಪ್ರೋಟೀನ್ ಅನ್ನು ಹೆಚ್ಚಿಸುವ ಮತ್ತೊಂದು ಮಾರ್ಗವೆಂದರೆ ದ್ವಿದಳ ಧಾನ್ಯಗಳನ್ನು ಸೇವಿಸುವುದು. ಈ ಆಹಾರಗಳಲ್ಲಿ ಬಿ-ಗ್ರೂಪ್ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ, ಸತು, ಮೆಗ್ನೀಸಿಯಮ್, ಫೋಲೇಟ್, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಸಹ ಸಮೃದ್ಧವಾಗಿವೆ. ನಿಮ್ಮ ದೇಹದ ವಿವಿಧ ವ್ಯವಸ್ಥೆಗಳು ಸೂಕ್ತ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಇವು ಅನುವು ಮಾಡಿಕೊಡುತ್ತದೆ.
ಗ್ರಿಲ್ಡ್ / ಹಸಿ ತರಕಾರಿಗಳು:
ತರಕಾರಿಗಳು ನಾರಿನಂಶದಿಂದ ತುಂಬಿರುತ್ತವೆ. ಇದು ಸದೃಢವಾಗಿರಲು ಬಯಸುವ ಜನರಿಗೆ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ತರಕಾರಿಗಳು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ನೀವು ಹೆಚ್ಚಾಗಿ ತಿನ್ನುವ ಅಗತ್ಯವಿರುವುದಿಲ್ಲ. ತರಕಾರಿಗಳನ್ನು ಗ್ರಿಲ್ ಮಾಡುವುದರಿಂದ ಪೋಷಕಾಂಶಗಳನ್ನು ನಾಶಮಾಡದೆ ಅವುಗಳನ್ನು ದೇಹವು ಹೀರಿಕೊಳ್ಳಲು ಸುಲಭವಾಗುತ್ತದೆ.
ಈ ಆಹಾರಗಳನ್ನು ಸೇವಿಸುವ ಮೂಲಕ ನಟ ಶಾರುಖ್ಖಾನ್ ಫಿಟ್ ಆಗಿದ್ದಾರೆ. ಹಾಗಾಗಿ ನೀವು ನಟ ಶಾರುಖ್ ಖಾನ್ನಂತೆ ಫಿಟ್ ಆಗಿರಲು ಈ ಆಹಾರಗಳನ್ನು ಸೇವಿಸಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number