ಮೊಬೈಲ್‍ಗಾಗಿ ಜೀವವನ್ನೇ ಕಳೆದುಕೊಂಡ ಯುವಕ

ಯಶವಂತ್

ಚಿತ್ರದುರ್ಗ ನ್ಯೂಸ್.ಕಾಂ: ಮೊಬೈಲ್ ಒಂದಲ್ಲದಿದ್ದರೆ ಹತ್ತು ಖರೀಧಿಸಬಹುದು. ಆದರೆ, ಹೋದ ಜೀವ ಬರುತ್ತಾ. ಇಂಥ ಸಣ್ಣ ಪುಟ್ಟ ಕಾರಣಗಳಿಗೆ ಜೀವ ಕಳೆದುಕೊಳ್ಳುವ ಆಲೋಚನೆಯ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ.

ಹೌದು, ಪುಟ್ಟ ಮೊಬೈಲೊಂದಕ್ಕೆ ಕೇವಲ 20 ವರ್ಷದ ತರುಣ ಜೀವವನ್ನೇ ಕಳೆದುಕೊಂಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಬಂದಿದ್ದ ವೇಳೆ ಮೊಬೈಲ್ ಕಳೆದುಕೊಂಡಿದ್ದ 20 ವರ್ಷದ ಯಶವಂತ್, ಆನಂತರ ತನ್ನ ಅಜ್ಜನಿಗೆ ಪ್ರತಿನಿತ್ಯ ಮೊಬೈಲ್ ಕೊಡಿಸುವಂತೆ ಕೇಳಿದ್ದಾನೆ.

ಇದನ್ನೂ ಓದಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕಿ

ಅಜ್ಜ ಉಗ್ರಪ್ಪ, ಈರುಳ್ಳಿ ಕೊಯ್ಲು ಮಾಡಿ, ಅದನ್ನು ಮಾರಾಟ ಮಾಡಿದ ತಕ್ಷಣ ಕೊಡಿಸುತ್ತೇನೆ. ಸ್ವಲ್ಪ ದಿನ ಸುಮ್ಮನಿರಪ್ಪ ಎಂದು ಮೊಮ್ಮಗನಿಗೆ ಸಮಾಧಾನ ಮಾಡಿದ್ದಾರೆ. ಆದರೂ ಯಶವಂತ್ ತನ್ನ ಹಠ ಬಿಟ್ಟಿರಲಿಲ್ಲ.

ಅ.18 ಬುಧವಾರ ಬೆಳಗ್ಗೆ ಕೀಟನಾಶಕ ಸೇವಿಸಿದ್ದಾನೆ. ತಕ್ಷಣ ಅವನನ್ನು ಐಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದೊಯ್ಯುವಾಗ ಯಶವಂತ್ ಮೃತಪಟ್ಟಿದ್ದಾನೆ.

17 ವರ್ಷಗಳ ಹಿಂದೆ ಯಶವಂತ್ ತಂದೆ ಮೃತಪಟ್ಟಿದ್ದರು. ತಾಯಿ ಬೇರೆಡೆ ಕೆಲಸ ಮಾಡುತ್ತಿದ್ದರು. ಈ ಕಾರಣಕ್ಕೆ ತನ್ನ ಅಜ್ಜನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಈಗ ಮೊಬೈಲ್‍ಗಾಗಿ ಮೊಮ್ಮಗನೇ ಇಲ್ಲವಾದ ಸ್ಥಿತಿಯಲ್ಲಿ ಕುಟುಂಬ ರೋಧಿಸುತ್ತಿದೆ.

ಮೊಬೈಲ್‍ಗಾಗಿ ಯಶವಂತ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version