By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಅರೆಪೆಟ್ಟಾದ ಹಾವು – ವಿಪರೀತ ಗಾಳಿ, ಮಳೆ | ಬೈಕ್ ಅಪಘಾತ – ಮುಂದೇನಾಯ್ತು..?
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಅರೆಪೆಟ್ಟಾದ ಹಾವು – ವಿಪರೀತ ಗಾಳಿ, ಮಳೆ | ಬೈಕ್ ಅಪಘಾತ – ಮುಂದೇನಾಯ್ತು..?

ಕ್ರೈಂ ಸುದ್ದಿ

ಅರೆಪೆಟ್ಟಾದ ಹಾವು – ವಿಪರೀತ ಗಾಳಿ, ಮಳೆ | ಬೈಕ್ ಅಪಘಾತ – ಮುಂದೇನಾಯ್ತು..?

chitradurganews.com
Last updated: 26 May 2024 19:55
chitradurganews.com
1 year ago
Share
AI IMAGE
AI IMAGE
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 26 MAY 2024

ಚಳ್ಳಕೆರೆ: ಬೈಕಿನಲ್ಲಿ ಹೋಗುವಾಗ ರಸ್ತೆಗೆ ಅಡ್ಡ ಬಂದ ಹಾವಿನ ಮೇಲೆ ಟೈಯರ್ ಹತ್ತಿದೆ. ಈ ವೇಳೆ ಅರೆಪೆಟ್ಟಾದ ಹಾವನ್ನು ಮತ್ತೆ ಮೂರು ಜನ ಬಂದು ಹಾವು ಹೊಡೆದು ವಾಪಾಸು ಹೋಗುವಾಗ ಅಪಘಾತವಾಗಿರುವ ಸುದ್ದಿ ಇದು.

ಚಳ್ಳಕೆರೆ ತಾಲೂಕು ನಾಗಗೊಂಡನಹಳ್ಳಿ ನಿವಾಸಿ ಪವನ್ ಮೇ.24 ರಂದು ಮಧ್ಯಾಹ್ನ 12 ಗಂಟೆ ವೇಳೆ ಚಳ್ಳಕೆರೆಗೆ ತೆರಳುತ್ತಿದ್ದಾಗ ಕರೀಕೆರೆ ಬಳಿ ಹಾವಿನ ಮೇಲೆ ಬೈಕ್ ಹರಿಸಿದ್ದಾರೆ. ಈ ವೇಳೆ ಹಾವು ಅರೆಪಟ್ಟಾಗಿದೆ.

ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | 114 ಅಡಿ ತಲುಪಿದ ಜಲಾಶಯ ಮಟ್ಟ

ಈ ಕಾರಣಕ್ಕೆ ಹಾವನ್ನು ಹೊಡೆಯಲು ನಾಗಗೊಂಡನಹಳ್ಳಿ ನಿವಾಸಿಗಳಾದ ಬೋರಯ್ಯ, ರಘು, ಅಜ್ಜಣ್ಣ ಮತ್ತು ತಿಪ್ಪೇಸ್ವಾಮಿ ಸೇರಿ ಪವನ್ ಜೊತೆಗೆ ಹಾವು ಹೊಡೆದು ಹಾಕಿದ್ದಾರೆ.

ಪವನ್ ಚಳ್ಳಕೆರೆ ಕಡೆಗೆ ಬಂದಿದ್ದು, ಉಳಿದ ಮೂರು ಜನ ವಾಪಾಸು ನಾಗಗೊಂಡನಹಳ್ಳಿ ಕಡೆಗೆ ತೆರಳಿದ್ದಾರೆ.
ಬೊರಣ್ಣ ಒಂದು ಬೈಕಿನಲ್ಲಿದ್ದರೆ ತಿಪ್ಪೇಸ್ವಾಮಿ ಮತ್ತು ರಘು ಮತ್ತೊಂದು ಬೈಕಿನಲ್ಲಿ ಬರುತ್ತಿರುವಾಗ ಮಳೆ, ಗಾಳಿ ಶುರುವಾಗಿದೆ. ಮಳೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೋರಣ್ಣ ಬೈಕ್ ವೇಗ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ಮೊಳಕಾಲ್ಮೂರು ಘಟನೆಗೆ ಬೆಸ್ಕಾಂ ಸ್ಪಷ್ಟನೆ | ಹಾಗಾದರೆ ಅಂದು ರಾತ್ರಿ ಎಷ್ಟೊತ್ತು ವಿದ್ಯುತ್ ಇರಲಿಲ್ಲ

ಹಾಲಿಗೊಂಡನಹಳ್ಳಿಯಿಂದ ಮುಂದೆ ರಾಘವೇಂದ್ರ ಪಾಟೀಲರ ಕೋಳಿ ಫಾರಂ ಬಳಿ ಜೊತೆಗೆ ತಿಪ್ಪೇಸ್ವಾಮಿ ಮತ್ತು ರಘು ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ.

ಎರಡೂ ಬೈಕುಗಳು ಬಿದ್ದು ಜಖಂ ಆಗಿವೆ. ಮೂರು ಜನ ಗಾಯಗೊಂಡಿದ್ದಾರೆ. ಬೋರಣ್ಣ ಅವರ ತಲೆಗೆ ಪೆಟ್ಟು ಬಿದ್ದಿದೆ. ತಕ್ಷಣ ಮೂರು ಜನರನ್ನು 108 ಅಂಬ್ಯುಲೆನ್ಸ್ ಮೂಲಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದೆ.

ಇದನ್ನೂ ಓದಿ: ಮೂಡಿಗೆರೆ ಬಳಿ ಭೀಕರ ಅಪಘಾತದಲ್ಲಿ ಮಡಿದವರಿಗೆ ಪರಿಹಾರದ ಭರವಸೆ | ಸಚಿವ ಡಿ.ಸುಧಾಕರ್

ಬೋರಣ್ಣನಿಗೆ ಹೆಚ್ಚು ಪೆಟ್ಟು ಬಿದ್ದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲು ವೈದ್ಯರು ಸಲಹೆ ನಿಡಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲೇ ಬೋರಣ್ಣ ಮೃತಪಟ್ಟಿದ್ದಾರೆ.

ಚಳ್ಳಕೆರೆ ತಾಲೂಕು ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Bike AccidentChallakereChitradurga newsKannada NewsParashurampurPoliceRainSnakewindಕನ್ನಡ ಸುದ್ದಿಗಾಳಿಚಳ್ಳಕೆರೆಚಿತ್ರದುರ್ಗ ನ್ಯೂಸ್ಪರಶುರಾಂಪುರಪೊಲೀಸ್ಬೈಕ್ ಅಪಘಾತಮಳೆಹಾವು
Share This Article
Facebook Email Print
Previous Article ಮಹಿಳೆಯರಿಗೆ ಐಟಿಐ ಸೀಟುಗಳು ಲಭ್ಯ | ONLINE ಮೂಲಕ ಅರ್ಜಿ ಹಾಕಿ
Next Article ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣಯ್ಯ ಕಾಂಗ್ರೆಸ್ OPS ಪರವಾಗಿದೆ | MLC ಪುಟ್ಟಣ್ಣ
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up