CHITRADURGA NEWS | 24 JULY 2024
ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಲು ವಿದ್ಯುತ್ ಕಂಬ ಏರಿದ್ದ ೧೨ ವರ್ಷದ ಬಾಲಕ ಕಂಬದಲ್ಲೇ ಧಾರುಣವಾಗಿ ಮೃತಪಟ್ಟಿದ್ದಾನೆ.
ಮೊಳಕಾಲ್ಮೂರು ತಾಲೂಕು ಹನುಮಾಪುರದ ಓಬಳಸ್ವಾಮಿ ಎಂಬುವವರ ಪುತ್ರ ರಾಮಚಂದ್ರ ಮೃತ ಬಾಲಕ.

ಇದನ್ನೂ ಓದಿ: ಕಾರು-ಬೈಕ್ ನಡುವೆ ಭೀಕರ ಅಪಘಾತ | ಡಿಕ್ಕಿ ರಭಸಕ್ಕೆ ಎರಡು ತುಂಡಾದ ಬೈಕ್ | ಸವಾರ ಸ್ಥಳದಲ್ಲೇ ಸಾವು
ಬುಧವಾರ ಸಂಜೆ ಹನುಮಾಪುರ ಗ್ರಾಮದ ವಿದ್ಯುತ್ ಕಂಬವೊಂದರಲ್ಲಿ ಸಿಲುಕಿದ್ದ ಪಾರಿವಾಳ ಜೀವ ಉಳಿಸಲು ಬಾಲಕ ರಾಮಚಂದ್ರ ಕರೆಂಟಿನ ಕಂಬ ಹತ್ತಿದ್ದಾನೆ.
ಕಂಬದಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಿಸುವಾಗ ವಿದ್ಯುತ್ ಪ್ರವಹಿಸಿ ಬಾಲಕ ಕಂಬದ ಮೇಲೆಯೇ ಜೀವ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಜಾನ್, ವೇದಾಂತ ಮೈನ್ಸ್ ವಿರುದ್ಧ ಪ್ರತಿಭಟನೆ
ಮೂಕ ಜೀವ ಪಾರಿವಾಳದ ಜೀವ ಉಳಿಸಲು ಹೋದ ಎಳೆಯ ಜೀವ ರಾಮಚಂದ್ರನ ಪ್ರಾಣಪಕ್ಷಿ ಕಂಬದಲ್ಲೇ ಹಾರಿ ಹೋಗಿದೆ.
ಕಂಬದಲ್ಲಿದ್ದ ಬಾಲಕನ ಮೃತದೇಹ ಕಂಡು ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿತ್ತು. ಇಡೀ ಊರಿನ ಜನ ಮುಮ್ಮಲ ಮರುಗಿದೆ.
ಇದನ್ನೂ ಓದಿ: ಭಜನಾ ಗಾಯಕಿ ಅಂಬುಜಾಕ್ಷಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ
ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ತಾಲೂಕು ರಾಂಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
