CHITRADURGA NEWS | 27 JUNE 2025
ಚಿತ್ರದುರ್ಗ: ಬಯಲು ಸೀಮೆ ಜನರ ಕುಡಿಯುವ ನೀರಿನ ವಿಚಾರದಲ್ಲಿ ಈಗ ರಾಜಕೀಯ ಪ್ರಾರಂಭವಾಗಿದೆ.
ಕೆಲ ರೈತರು, ಉಳಿದಂತೆ ಕೆಲ ರಾಜಕಾರಣಿಗಳು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿಗೆ ಬರಬೇಕಿದ್ದ ಒಂದು ಟಿಎಂಸಿ ನೀರನ ಹರಿವಿನ ಮಾರ್ಗದಲ್ಲಿ ಕಾಲುವೆ ಸೀಳಿದ್ದನ್ನೆ ದೊಡ್ಡ ವಿಚಾರ ಮಾಡಿ ಬೀದಿಗಿಳಿದಿದ್ದಾರೆ. ಇದು ಸಹಜವಾಗಿ ಕೋಟೆ ನಾಡಿನ ಜನರನ್ನು ಕೆರಳಿಸಿದೆ.

ಏನಿದು ಒಂದು ಟಿಎಂಸಿ ನೀರಿನ ಕತೆ:
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹೊಸದುರ್ಗ ತಾಲೂಕಿನ ಎಲ್ಲ ಗ್ರಾಮಗಳಿಗೂ ಭದ್ರಾ ಜಲಾಶಯದಿಂದ ಒಂದು ಟಿಎಂಸಿ ನೀರು ತಂದು ಗುರುತ್ವಾಕರ್ಷಣ ಬಲದ ಮೇಲೆ ಹರಿಸಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
2014-15 ರಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದರೂ, ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಆದರೆ,ಈಗ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ.
ಹೊಸದುರ್ಗ ತಾಲೂಕಿನ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಅಜ್ಜಂಪುರ ಹಾಗೂ ಚಿಕ್ಕಮಗಳೂರು ನಗರಕ್ಕೂ ಈ ಮಾರ್ಗದಲ್ಲಿ ನೀರು ಹರಿಯಲಿದೆ.
ಭದ್ರಾ ಜಲಾಶಯದ ಬಳಿ ಈಗಾಗಲೇ 9 ಎಕರೆ ಪ್ರದೇಶದಲ್ಲಿ ನೀರು ಶುದ್ಧೀಕರಣ ಘಟಕದ ಕೆಲಸವೂ ನಡೆಯುತ್ತಿದೆ.
ಲಕ್ಕುವಳ್ಳಿ ಬಳಿಯಿರುವ ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮಾರ್ಗವಾಗಿ ಹೊಸದುರ್ಗಕ್ಕೆ ನೀರು ಹರಿದು ಬರಬೇಕಿದೆ.
ಇದನ್ನೂ ಓದಿ: ಪೋಲಿಸರ ದೌರ್ಜನ್ಯ ಖಂಡಿಸಿ ರೈತರ ಪ್ರತಿಭಟನೆ
ಜಲಾಶಯದಿಂದ ನೀರು ಹರಿಯುವ ಮಾರ್ಗದಲ್ಲಿ ದಾವಣಗೆರೆ ಜಿಲ್ಲೆಗೆ ಹೋಗುವ ಭದ್ರಾ ಬಲನಾಲೆಯನ್ನು ದಾಟಿ ನೀರು ಹರಿಯಬೇಕಿದ್ದು, ಇಂಜಿನಿಯರ್ಗಳು ನಾಲೆಯನ್ನು ಸೀಳಿ ನೀರು ಮುಂದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ನಾಲೆ ಸೀಳಿದ್ದಕ್ಕೆ ದಾವಣಗೆರೆ ರೈತರ ಆಕ್ಷೇಪ:
ಭದ್ರಾ ಬಲನಾಲೆ ಸೀಳಿದ್ದರಿಂದ ಕಡೆಯ ಭಾಗದ ರೈತರಿಗೆ ನೀರು ಹರಿಯದಂತಾಗುತ್ತದೆ. ಇದು ಸಂಪೂರ್ಣ ಅವೈಜ್ಞಾನಿಕ ಕಾಮಗಾರಿ, ಅಕ್ವಾಡಕ್ಟ್(ಮೇಲ್ಗಾಲುವೆ) ಮಾಡಿಕೊಂಡು ನೀರು ತೆಗೆದುಕೊಂಡು ಹೋಗಿ ಎಂದು ದಾವಣಗೆರೆ ಜಿಲ್ಲೆಯ ರಾಜಕಾರಣಿಗಳು, ರೈತರು ಈಗ ಧ್ವನಿ ಎತ್ತಿದ್ದಾರೆ.
ಇದೇ ಕಾರಣಕ್ಕೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವು ಮುಖಂಡರು ಉಗ್ರ ಹೋರಾಟವನ್ನೇ ನಡೆಸಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ಜೂನ್ 26 | ಯಾವ ಅಡಿಕೆಗೆ ಎಷ್ಟು ರೇಟ್
ನಾಲೆ ಸೀಳಿದ್ದನ್ನು ವಿರೋಧಿಸಿ ಜೂನ್ 28ಕ್ಕೆ ದಾವಣಗೆರೆ ಬಂದ್ ಕರೆಯನ್ನೂ ಕೊಡಲಾಗಿದೆ.
ಮತ್ತೊಂದೆಡೆ ರೈತ ಮುಖಂಡರಾದ ಕೆ.ಟಿ.ಗಂಗಾಧರ್, ದಾವಣಗೆರೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡುವ ಬಗ್ಗೆ ತಿಳಿಸಿದ್ದು, ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.
ಐಐಎಸ್ಸಿ ತಜ್ಞರ ವರದಿಗೆ ತೀರ್ಮಾನ
ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಒಡೆದು ನೀರು ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನುವ ವಿಚಾರವಾಗಿ ಬಿಆರ್ಪಿಯಲ್ಲಿ ಸೋಮವಾರ ಸಭೆ ನಡೆದಿದೆ. ಈ ಸಭೆಯ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಹಿಸಿಕೊಂಡಿದ್ದರು.
ಸಭೆಯಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೈತ ಮುಖಂಡರು, ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ವೇಳೆ ಸಭೆಯಲ್ಲಿ ನಾಲೆ ಒಡೆದು ನೀರು ಒಯ್ಯುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISC) ವಿಜ್ಞಾನಿಗಳಿಂದ ವರದಿ ಪಡೆಯಲು ತೀರ್ಮಾನಿಸಲಾಗಿದೆ.
ಚಿತ್ರದುರ್ಗದಲ್ಲೂ ರೈತರ ಆಕ್ರೋಶ:
1 ಟಿಎಂಸಿ ಕುಡಿಯುವ ನೀರಿನ ವಿಚಾರದಲ್ಲಿ ದಾವಣಗೆರೆ ರೈತರು ನಡೆಸಿದ ಹೋರಾಟ, ಪ್ರತಿಭಟನೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಕುಡಿಯುವ ನೀರಿಗೆ ಅಡ್ಡಿ ಪಡಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹೊಸದುರ್ಗ ಪೊಲೀಸರಿಂದ ಕೊಲೆ ಆರೋಪಿಗಳ ಬಂಧನ | ಹುಣವಿನಡು ಗ್ರಾಮದಲ್ಲಿ ನಡೆದಿದ್ದ ಭೀಕರ ಹತ್ಯೆ
ಭದ್ರಾ ನೀರಿಗಾಗಿ ಜೂನ್ 28 ರಂದು ಹೊಸದುರ್ಗ ಬಂದ್ ಮಾಡಲು ಪಕ್ಷಾತೀತವಾಗಿ ತೀರ್ಮಾನ ತೆಗೆದುಕೊಂಡಿದ್ದು, ನೀರು ಹರಿಯಲು ಬಿಡದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಜಿಲ್ಲೆಯ ರೈತರು ಸಿದ್ಧರಾಗಿದ್ದಾರೆ.
ಭದ್ರಾ ಜಲಾಶಯದಿಂದ 21 ನಾಲೆಗಳ ಮೂಲಕ ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಗೂ ನೀರು ತೆಗೆದುಕೊಂಡು ಹೋಗಲಾಗಿದೆ. ಆಗ ಪ್ರಶ್ನೆ ಮಾಡದವರು, ಹೊಸದುರ್ಗಕ್ಕೆ ನೀರು ತರುವಾಗ ಮಾತ್ರ ಯಾಕೆ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಷಯ ಪ್ರಸ್ತಾಪ ಮಾಡುತ್ತೇವೆ. ಹಾಗೂ ಅಡ್ಡಿಪಡಿಸಿದರೆ ನ್ಯಾಯಾಲಯಕ್ಕೆ ಹೋಗೋಣ ಎಂದು ಹೊಸದುರ್ಗ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರ್ವ ಪಕ್ಷಗಳ ಹಾಗೂ ರೈತರ ಸಭೆಯಲ್ಲಿ ಶಾಸಕರು ಹೇಳಿದ್ದಾರೆ.
ಇದನ್ನೂ ಓದಿ:ಜಿಲ್ಲೆಗೆ ಮತ್ತೊಂದು ಏಕಲವ್ಯ ವಸತಿ ಶಾಲೆಗೆ ಮನವಿ | ಜೆ.ಪಿ.ನಡ್ಡಾಗೆ ಗೋವಿಂದ ಕಾರಜೋಳ ಪತ್ರ
ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸಲ್ಲದು. ಹೊಸದುರ್ಗ ಬಂದ್ಗೆ ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
