By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ

ಮುಖ್ಯ ಸುದ್ದಿ

ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ

chitradurganews.com
Last updated: 17 April 2024 08:09
chitradurganews.com
1 year ago
Share
ಏರೊಬಿಕ್ ಭತ್ತದ ತಳಿ
ಏರೊಬಿಕ್ ಭತ್ತದ ತಳಿ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 17 APRIL 2024

ಚಿತ್ರದುರ್ಗ: ಅಂತೂ ಬಯಲು ಸೀಮೆ, ಚಿತ್ರದುರ್ಗದಂತಹ ಜಿಲ್ಲೆಯಲ್ಲೂ ಬೆಳೆಯಬಹುದಾದ ಭತ್ತದ ತಳಿ ಆವಿಷ್ಕಾರವಾಗಿದೆ. ಇದರ ಮೊದಲ ಪ್ರಯೋಗ ಸಿರಿಗೆರೆ ಬೃಹನ್ಮಠದ ಶಾಂತಿವನದ ಸಮೀಪದಲ್ಲಿರುವ ಜಮೀನಿನಲ್ಲಿ ಯಶಸ್ವಿಯಾಗಿ ಮಾಡಲಾಗಿದೆ.

ಹೌದು, ಏಳೆಂಟು ತಿಂಗಳ ಹಿಂದೆ ಸಿರಿಗೆರೆಯಲ್ಲಿ ನಡೆದ ಸಭೆಯೊಂದರಲ್ಲಿ ಕೃಷಿ ವಿಜ್ಞಾನಿಗಳು ಕಡಿಮೆ ನೀರು ಬಳಕೆ ಮಾಡಿ, ಬಯಲು ಸೀಮೆಯಲ್ಲಿ ರಾಗಿ, ಜೋಳದ ಮಾದರಿಯಲ್ಲೇ ಬೆಳೆಯಬಹುದಾದ ಏರೊಬಿಕ್ ಭತ್ತದ ತಳಿ ಬಗ್ಗೆ ರೈತರಲ್ಲಿ ಹೊಸ ಕನಸೊಂದನ್ನು ಬಿತ್ತಿದ್ದರು.

ಇದನ್ನೂ ಓದಿ: ಬಯಲು ಸೀಮೆಯಲ್ಲೂ ಬೆಳೆಯುವ ಭತ್ತದ ತಳಿ ಅಭಿವೃದ್ಧಿ | ಏರೋಬಿಕ್ ಭತ್ತದ ಬಗ್ಗೆ ರೈತರಲ್ಲಿ ಹೊಸ ಕನಸು ಬಿತ್ತಿದ ಕೃಷಿ ವಿಜ್ಞಾನಿಗಳು

ಆಗ, ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಈ ಭತ್ತದ ತಳಿ ಬಗ್ಗೆ ಆಸಕ್ತಿ ವಹಿಸಿ ಎಲ್ಲ ಮಾಹಿತಿ ಸಂಗ್ರಹಿಸಿ, ಮೊದಲು ಇದನ್ನು ಮಠದ ಜಮೀನಿನಲ್ಲಿ ಬೆಳೆದು ಯಶಸ್ವಿಯಾದರೆ ರೈತರಿಗೆ ಬೀಜ ಕೊಡೋಣ ಎಂಬ ನಿರ್ಧಾರಕ್ಕೆ ಬಂದಿದ್ದರು.

ಏರೊಬಿಕ್ ಭತ್ತದ ತಳಿ
ಏರೊಬಿಕ್ ಭತ್ತದ ತಳಿ

ಈಗ್ಗೇ 45 ದಿನಗಳ ಹಿಂದೆ ಸಿರಿಗೆರೆ ಮಠದ ಶಾಂತಿವನದ ಬಳಿ ಮುಕ್ಕಾಲು ಎಕರೆ ಜಮೀನಿನಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಮಳೆ ಇಲ್ಲದ ಕಾರಣ 15 ದಿನಗಳಿಗೊಮ್ಮೆ ನೀರು ಬಿಡಲಾಗಿದೆ. ಈಗ ಉತ್ತಮ ಫಸಲು ಬಂದಿದೆ.

ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಏರೊಬಿಕ್ ಭತ್ತದ ತಳಿ ಬಗ್ಗೆ ವಿಶ್ವಾಸ ಮೂಡಿದೆ. ಇದರ ಸಾಧಕ-ಬಾದಕ ನೋಡಿಕೊಂಡು ಮುಂದಿನ ದಿನಗಳಲ್ಲಿ ರೈತರು ಬೆಳೆಯುವತ್ತ ಗಮನಹರಿಸಬಹುದು ಎನ್ನುವ ದೂರದೃಷ್ಟಿ ಹೊಂದಿದ್ದೇವೆ.

| ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ

ಏರೊಬಿಕ್ ಭತ್ತದ ತಳಿ ವಿಶೇಷವೇನು:

ಹಳೆಯ ಪದ್ಧತಿ ಪ್ರಕಾರ ಭತ್ತ ನಾಟಿ ಮಾಡುವಾಗ ಬೇರುಗಳು ಆಳವಾಗಿ ಇಳಿಯುತ್ತಿದ್ದವು. ಆದರೆ, ಹೊಸ ತಳಿಗಳು ಬೇರು ಮೇಲೆ ಇರುತ್ತಿದ್ದ ಪರಿಣಾಮ ಹೆಚ್ಚು ನೀರು ಬೇಡುತ್ತಿದ್ದವು. ಬೇರು ಆಳಕ್ಕೆ ಹೋದರೆ ಭೂಮಿಯೊಳಗಿನ ತೇವಾಂಶ ಪಡೆದು ಬೆಳೆಯುತ್ತವೆ. ಈ ರೀತಿಯ ತಳಿಯನ್ನು ಕ್ರಾಸಿಂಗ್ ಮಾಡಿ ಏರೋಬಿಕ್ ಎಂದು ಅಭಿವೃದ್ಧಿಪಡಿಸಿದ್ದು ಇದನ್ನು ರಾಗಿ, ಜೋಳದಂತೆ ಭಿತ್ತನೆ ಮಾಡಿ ಬೆಳೆಯಬಹುದು. ನಾಟಿ ಮಾಡುವ ಅವಶ್ಯಕತೆ ಇಲ್ಲ. ಇದರಲ್ಲಿ ನೀರು ನಿಲ್ಲಿಸುವ ಅಗತ್ಯವೂ ಇಲ್ಲ.

ಇದನ್ನೂ ಓದಿ: ಚಿತ್ರದುರ್ಗದ ಸಂಸದ, ನಾಡಿನ ಮುಖ್ಯಮಂತ್ರಿಯೇ ಆದರು

ಸಾಮಾನ್ಯವಾಗಿ ಈಗ ಇರುವ ಪದ್ಧತಿಯಲ್ಲಿ ಭತ್ತ ಬೆಳೆಯಲು 1 ಕೆ.ಜಿ ಭತ್ತ ಬೆಳೆಯಲು 5 ಸಾವಿರ ಲೀಟರ್ ನೀರಿನ ಅವಶ್ಯಕತೆ ಬರುತ್ತದೆ. ಆದರೆ, ಏರೋಬಿಕ್ ಭತ್ತ ಬೆಳೆಯಲು ಕೇವಲ 500 ರಿಂದ 2 ಸಾವಿರ ಲೀಟರ್ ನೀರು ಸಾಕಾಗುತ್ತದೆ. ಇಲ್ಲಿ ನೀರಿನ ಉಳಿತಾಯವಾಗುತ್ತದೆ.

ಏರೋಬಿಕ್ ಭತ್ತ ಬೆಳೆಯಲು ಎಷ್ಟು ಖರ್ಚು ಬರಬಹುದು:

ಏರೋಬಿಕ್ ವಿಧಾನದಲ್ಲಿ ಭತ್ತ ಬೆಳೆಯಲು ಒಂದು ಎಕರೆಗೆ ಕನಿಷ್ಟ 10 ರಿಂದ 13 ಸಾವಿರ ರೂ. ಖರ್ಚು ಬರುತ್ತದೆ. ಈ ತಳಿಗೆ ಸೂರ್ಯನ ಕಿರಣಗಳು ಈ ತಳಿಗೆ ಅತ್ಯವಶ್ಯ. ರಾಸಾಯನಿಕ ಬಳಸದೇ, ಫರ್ಟಿಲೈಜರ್ಸ್ ಇಲ್ಲದೆ ಕುರಿ, ಕೋಳಿ, ದನದ ಗೊಬ್ಬರ ಬಳಸಿಕೊಂಡು ಈ ತಳಿಯನ್ನು ಬೆಳೆಯಬಹುದು.

ಇದನ್ನೂ ಓದಿ: ಬಬ್ಬೂರು ಫಾರ್ಮ್‌ ಕಾಮಗಾರಿ | ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

ಇನ್ನೂ ಈ ತಳಿಯನ್ನು ಅಡಕೆ ಹಾಕಿದ ರೈತರು ಕೂಡಾ ಅಡಕೆ ನಾಟಿ ಮಾಡಿದ 1 ರಿಂದ 3 ವರ್ಷಗಳವರೆಗೆ ಅಡಿಕೆ ಸಾಲುಗಳ ನಡುವೆ ಬೆಳೆಯಬಹುದು. ನಾಟಿ ಮಾಡದ 4 ತಿಂಗಳಲ್ಲೇ ಉತ್ತಮ ಇಳುವರಿ ದೊರೆಯುತ್ತದೆ ಎಂದು ರೈತರಿಗೆ ತಿಳಿಸಿದರು.

ಏರೊಬಿಕ್ ಭತ್ತದ ತಳಿ
ಏರೊಬಿಕ್ ಭತ್ತದ ತಳಿ

ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಬಿತ್ತನೆಗೆ ಎಕರೆಗೆ 25 ಕೆ.ಜಿ ಭತ್ತದ ಬೀಜ ಬೇಕಾಗುತ್ತದೆ. ಆದರೆ, ಏರೋಬಿಕ್ ಪದ್ಧತಿಯಲ್ಲಿ ಒಂದು ಎಕರೆಗೆ 5 ಕೆ.ಜಿ. ಬೀಜ ಸಾಕಾಗುತ್ತದೆ. ಈ ತಳಿಯಲ್ಲಿ ರೋಗ ನಿರೋಧಕ ಶಕ್ತಿ ಇರುವುದು ರೈತರಿಗೆ ವರದಾನವಾಗಲಿದೆ.

ಮಳೆ ಆಶ್ರಯಿಸಿ ಎಲ್ಲಾ ರೀತಿಯ ಭೂಮಿಯಲ್ಲಿ ಈ ಭತ್ತದ ತಳಿಯನ್ನು ಬೆಳೆಯಬಹುದು. ಕಡಿಮೆ ನೀರು ಬಳಸಿ ಭತ್ತ ಬೆಳೆಯಬಹುದು ಎನ್ನುವುದು ವಿಶೇಷವಾಗಿದ್ದು, ಇದು ರೈತ ಸ್ನೇಹಿಯಾಗಿದೆ.

| ಪ್ರೊ.ಎಚ್.ಇ.ಶಶಿಧರ್, ಏರೊಬಿಕ್ ಭತ್ತ ತಳಿ ತಜ್ಞ ಹಾಗೂ ಕೃಷಿ ವಿಜ್ಞಾನಿ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:AerobicBayalu SeemeChitradurgaDr.Sri.Shivamurthy Shivacharya SwamijiPragyaRice BreedingSirigereಏರೊಬಿಕ್ಚಿತ್ರದುರ್ಗಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಪ್ರಯೋಗಬಯಲು ಸೀಮೆಭತ್ತದ ತಳಿಸಿರಿಗೆರೆ
Share This Article
Facebook Email Print
Previous Article ತಿಪ್ಪೇರುದ್ರಸ್ವಾಮಿ ಆಶ್ರಮ ಚಿತ್ರದುರ್ಗದ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ತಾಯಿ ಮಗಳು ಆತ್ಮಹತ್ಯೆ | ನೀರಿನ ಸಂಪಿನಲ್ಲಿ ಮೃತದೇಹ ಪತ್ತೆ
Next Article ವದ್ದೀಕೆರೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ | 22ರಂದು ಬ್ರಹ್ಮ ರಥೋತ್ಸವ
Leave a Comment

Leave a Reply Cancel reply

Your email address will not be published. Required fields are marked *

ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
ಸೋಲು ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‍ ಗೌಡ
ಮುಖ್ಯ ಸುದ್ದಿ
Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up