CHITRADURGA NEWS | 16 MARCH 2024
ಚಿತ್ರದುರ್ಗ: ಮಣ್ಣು ಕುಸಿದು, ಸೀಮೆಜಾಲಿ ಗಿಡ ಬೆಳೆದು ಸಂಪೂರ್ಣ ಮುಚ್ಚಿ ಹೋಗಿತ್ತು ರೇಖಲಗೆರೆ ಫೀಡರ್ ಚಾನಲ್. ಈ ಸಮಸ್ಯೆ ಅರಿತ ಶಾಸಕ ಎನ್.ವೈ.ಗೋಪಾಲಕೃಷ್ಣ ₹5 ಕೋಟಿ ವೆಚ್ಚದಲ್ಲಿ ಸಣ್ಣನೀರಾವರಿ ಇಲಾಖೆಯ ಸಹಯೋಗದಲ್ಲಿ ಚಿಕ್ಕಮಲ್ಲನಹೊಳೆ ಗ್ರಾಮದ ಬಳಿ ಇರುವ ರೇಖಲಗೆರೆ ಫೀಡರ್ ಚಾನಲ್ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ‘ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಬಳಿ ಇರುವ ರೇಖಲೆಗೆರೆ ಫೀಡರ್ ಚಾನಲ್ನಿಂದ ನೀರು ಹರಿದರೆ ಮೊಳಕಾಲ್ಮುರು ಕ್ಷೇತ್ರದ 5 ಕೆರೆಗಳಿಗೆ ನೀರು ಹರಿದು ಸುಮಾರು 2,000 ಎಕರೆಯಷ್ಟು ಭೂಮಿ ಹಸಿರಾಗಲಿದೆ’ ಎಂದರು.
ಕ್ಲಿಕ್ ಮಾಡಿ ಓದಿ: https://chitradurganews.com/49259-rashi-arecanut-price-in-hosanagar-market/

‘1893ರ ಸಮಯದಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಯಲುಸೀಮೆಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ಅವುಗಳಲ್ಲಿ ರೇಖಲಗೆರೆ ಫೀಡರ್ ಚಾನಲ್ ಸಹ ಒಂದು. ಇದು ಚಿತ್ರದುರ್ಗದ ಕಾತ್ರಾಳು ಕೆರೆ, ಸಂಗೇನಹಳ್ಳಿ ಕೆರೆಗಳ ಜಲಾನಯನ ಪ್ರದೇಶವಾಗಿದೆ’ ಎಂದು ತಿಳಿಸಿದರು.
‘ಸುಮಾರು 16 ಕಿ.ಮೀ.ವರೆಗೂ ನೈಸರ್ಗಿಕ ಇಳಿಜಾರಿಗೆ ಈ ಫೀಡರ್ ಚಾನಲ್ನಿಂದ ನೀರು ಹರಿಯಲಿದ್ದು, ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿ ಕೆರೆ, ರೇಖಲಗೆರೆ ಕೆರೆ, ರಾಮಸಾಗರದ ಕೆರೆ, ತಳಕು ಹೋಬಳಿಯ ಕೋಡಿಹಳ್ಳಿ ಕೆರೆ, ಘಟಪರ್ತಿ ಕೆರೆ ಸೇರಿದಂತೆ ಹತ್ತಾರು ಗೋಕಟ್ಟೆಗಳು ತುಂಬಲಿವೆ. ಇಲ್ಲಿ ನೀರು ಹರಿದರೆ, ಶಾಶ್ವತ ಬರ ಪೀಡಿತ ಪ್ರದೇಶವಾಗಿರುವ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ಸುಮಾರು 2,000 ಎಕರೆಯಷ್ಟು ಭೂಪ್ರದೇಶ ನೀರಾವರಿಯಾಗಿ ಬದಲಾಗಿ ಹಸಿರಿನಿಂದ ಕಂಗೊಳಿಸಲಿವೆ’ ಎಂದು ಹೇಳಿದರು.
‘ಕಳೆದ 30 ವರ್ಷಗಳಿಂದ ಫೀಡರ್ ಚಾನಲ್ ಸಾಗುವ ಮಾರ್ಗದುದ್ದಕ್ಕೂ ಸೀಮೆಜಾಲಿ ಗಿಡಗಳು ಬೆಳದಿವೆ. ಮಣ್ಣು ಗುಡ್ಡೆಗಳು ಕುಸಿದು ಕಾಲುವೆ ಮುಚ್ಚಿಹೋಗಿ ಯೋಜನೆಯ ಉದ್ದೇಶವೇ ವಿಫಲವಾಗಿತ್ತು. ಇದರಿಂದ ಐದು ಕೆರೆಗಳು ನೀರಿಲ್ಲದೇ ಶಾಶ್ವತವಾಗಿ ಬತ್ತಿಹೋಗಿದ್ದವು’ ಎಂದರು.
ಕ್ಲಿಕ್ ಮಾಡಿ ಓದಿ: https://chitradurganews.com/fixation-of-uniform-rate-for-drilling-of-borewell/
‘ಈ ಎಲ್ಲ ನೈಜ ಸಮಸ್ಯೆಗಳನ್ನು ಅರಿತು, ಯೋಜನೆಯನ್ನು ಸ್ಯಾಟಲೈಟ್ ಸರ್ವೇಕಾರ್ಯ ನಡೆಸಿ ₹5 ಕೋಟಿ ಮೊತ್ತದ ಕ್ರಿಯಾಯೋಜನೆ ತಯಾರಿಸಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಮಂಜೂರು ಮಾಡಿಸಿದ್ದೇನೆ. ಕಾಮಗಾರಿ ಆರಂಭಗೊಂಡ ನಂತರ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು. 3 ತಿಂಗಳಲ್ಲಿ ಕಾಲುವೆಯ ಪುನಶ್ಚೇತನ ಕಾರ್ಯ ಮುಕ್ತಾಯ ಗೊಳಿಸಬೇಕು. ಮಳೆಗಾಲ ಆರಂಭವಾದರೆ ಯೋಜನೆಯ ಸಾಧಕ ಬಾಧಕಗಳು ಅರ್ಥವಾಗುವುದಿಲ್ಲ ಮತ್ತು ಯೋಜನೆ ಕುಂಠಿತಗೊಳ್ಳಲಿದೆ’ ಎಂದು ಸಣ್ಣನೀರಾವರಿ ಇಲಾಖೆಯ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರಿಗೆ ಶಾಸಕರು ತಾಕೀತು ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
