By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಬಸವೇಶ್ವರರಿಗೆ ಅವಮಾನದ ಮಾಡಿದ ವೀರಶೈವ ಲಿಂಗಾಯತರು; ಛಲವಾದಿ ಸಮುದಾಯ ಆಕ್ರೋಶ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಬಸವೇಶ್ವರರಿಗೆ ಅವಮಾನದ ಮಾಡಿದ ವೀರಶೈವ ಲಿಂಗಾಯತರು; ಛಲವಾದಿ ಸಮುದಾಯ ಆಕ್ರೋಶ

ಮುಖ್ಯ ಸುದ್ದಿ

ಬಸವೇಶ್ವರರಿಗೆ ಅವಮಾನದ ಮಾಡಿದ ವೀರಶೈವ ಲಿಂಗಾಯತರು; ಛಲವಾದಿ ಸಮುದಾಯ ಆಕ್ರೋಶ

News Desk Chitradurga News
Last updated: 25 December 2023 14:50
News Desk Chitradurga News
2 years ago
Share
SHARE
https://chat.whatsapp.com/Jhg5KALiCFpDwME3sTUl7x

ಚಿತ್ರದುರ್ಗನ್ಯೂಸ್‌.ಕಾಂ

ಚಿತ್ರದುರ್ಗದ ನಗರದಲ್ಲಿ ವೀರಶೈವ ಲಿಂಗಾಯತ ಯುವಕರ ಗುಂಪು ರಾತ್ರೋರಾತ್ರಿ ಒನಕೆ ಓಬವ್ವ ವೃತ್ತದ ಹೈಮಾಸ್ಟ್‌ ದೀಪದ ಕೆಳಗೆ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಮುಂದಾಗುವ ಮೂಲಕ ವಿಶ್ವಗುರು ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ, ಛಲವಾದಿ ಸಮುದಾಯದ ಮುಖಂಡ ನಿರಂಜನ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಾಣೇಹಳ್ಳಿಯಲ್ಲಿ ‘ವರ್ಷದ ಹರ್ಷ’; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ

‘ವಿಶ್ವಕ್ಕೆ ಬೆಳಕಾದ ಬಸವೇಶ್ವರರ ಪುತ್ಥಳಿಯನ್ನು ಯಾರಿಗೂ ತಿಳಿಯದಂತೆ ರಾತ್ರಿ ವೇಳೆ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದು ಖಂಡನೀಯ. ನಗರದಲ್ಲಿ ಬಸವೇಶ್ವರರ ಪುತ್ಥಳಿ, ಪ್ರತಿಮೆ ನಿರ್ಮಾಣಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಈಗಾಗಲೇ ಇರುವ ಒನಕೆ ಓಬವ್ವ ಪ್ರತಿಮೆ ಸ್ಥಳದಲ್ಲಿ ಯಾವುದೇ ಪುತ್ಥಳಿ ಪ್ರತಿಷ್ಠಾಪನೆ ಮಾಡಬಾರದು. ಒಂದು ವೇಳೆ ಇಂತಹ ಘಟನೆ ಮರುಕಳಿಸಿದರೆ ಹೋರಾಟ ನಡೆಸಲಾಗುತ್ತದೆ ’  ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ಈ ಸ್ಥಳದಲ್ಲಿ ಬಸವ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಕೆಲ ಸಮುದಾಯಗಳನ್ನು ಎತ್ತಿ ಕಟ್ಟುವ ಕೆಲಸ ಆಗುತ್ತಿದೆ. ಹಾಗಾಗಿ ಈ ಕೃತ್ಯಕ್ಕೆ ಮುಂದಾದವರ ಮೇಲೆ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕೋಟೆನಾಡಲ್ಲಿ ಮಹಾತ್ಮರ ಪ್ರತಿಮೆಗಳು ರಾತ್ರೋರಾತ್ರಿ ತಲೆಯೆತ್ತುವ ವಿಸ್ಮಯ..!

‘ನಗರದಲ್ಲಿ ಖಾಲಿ ಇರುವ ವೃತ್ತ ಅಥವಾ ಸ್ಥಳದಲ್ಲಿ ಕಾನೂನು ಬದ್ಧವಾಗಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ನಮ್ಮ ಸಂಪೂರ್ಣ ಬೆಂಬಲವಿದೆ. ಅವರು ಎಲ್ಲ ಸಮುದಾಯಕ್ಕೂ ಗುರುಗಳಾಗಿದ್ದಾರೆ. ಒಂದು ಪ್ರತಿಮೆ ಅಥವಾ ಪುತ್ಥಳಿ ಇರುವ ಸ್ಥಳದಲ್ಲಿ ಮತ್ತೊಂದು ಪ್ರತಿಮೆ ಇಲ್ಲವೇ ಪುತ್ಥಳಿ ನಿರ್ಮಾಣ ಮಾಡುವುದು ತಪ್ಪು’ ಎಂದು ತಿಳಿಸಿದರು.

ಇದನ್ನೂ ಓದಿ: ಬೈಕ್‌ಗೆ ಅಡ್ಡ ಬಂದ ಹಾವು; ಕೂದಲೆಳೆಯಲ್ಲಿ ಮೂವರು ಪಾರು

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ‘ಛಲವಾದಿ ಸಮುದಾಯಕ್ಕೆ ವಿಶ್ವಗುರು ಬಸವೇಶ್ವರರ ಬಗ್ಗೆ ಅಪಾರ ಗೌರವವಿದೆ. ಅವರ ತತ್ವವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಸಾಗುತ್ತಿದ್ದೇವೆ. ಆದರೆ ವೀರಶೈವ ಲಿಂಗಾಯತ ಯುವಕರ ಗುಂಪು ಒನಕೆ ಓಬವ್ವ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು ಖಂಡನೀಯ. ಈ ಮೂಲಕ ಬಸವಣ್ಣನವರಿಗೆ ಅವರದೇ ಸಮುದಾಯ ಅವಮಾನ ಮಾಡಿದೆ’ ಎಂದರು.

ಸಮಾಜದ ಮುಖಂಡರಾದ ಪ್ರಸನ್ನ ಕುಮಾರ್‌, ಅಣ್ಣಪ್ಪ, ಗುರುಮೂರ್ತಿ, ಧನಂಜಯ, ರವೀಂದ್ರ, ಜಯರಾಂ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BasaveshwarChalavadiChitradurgacirclePutthaliShameಅವಮಾನಚಿತ್ರದುರ್ಗಛಲವಾದಿಪುತ್ಥಳಿಬಸವೇಶ್ವರವೃತ್ತ
Share This Article
Facebook Email Print
Previous Article ಬೈಕ್‌ಗೆ ಅಡ್ಡ ಬಂದ ಹಾವು; ಕೂದಲೆಳೆಯಲ್ಲಿ ಮೂವರು ಪಾರು
Next Article ಹೆದ್ದಾರಿಯಲ್ಲಿ ಧಗಧಗನೆ ಉರಿದ ಕಾರು ಹೆದ್ದಾರಿಯಲ್ಲಿ ಧಗಧಗನೆ ಉರಿದ ಕಾರು | ಪ್ರಾಣಾಪಯಾದಿಂದ ಪಾರಾದ ಪ್ರಯಾಣಿಕರು
Leave a Comment

Leave a Reply Cancel reply

Your email address will not be published. Required fields are marked *

ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up