ಕ್ರೈಂ ಸುದ್ದಿ
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ರೈತರು ಮೃತ

Published on
CHITRADURGA NEWS | 06 MARCH 2025
ಹೊಳಲ್ಕೆರೆ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ರೈತರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಲ್ಲಿಕಟ್ಟೆ ಗ್ರಾಮದ ನಾಗರಾಜ(35) ಹಾಗೂ ಶ್ರೀನಿವಾಸ(48) ಮೃತ ರೈತರಾಗಿದ್ದಾರೆ.
ಹೊಳಲ್ಕೆರೆ ತಾಲೂಕು ನಲ್ಲಿಕಟ್ಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ತೋಟದಲ್ಲಿ ತೆಂಗಿನ ಕಾಯಿ ಕೀಳಲು ಹೋಗಿದ್ದಾಗ ಈಜಲು ಹೋಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
12 ಅಡಿ ಆಳದ ಕೃಷಿ ಹೊಂಡವಿದ್ದು, ನೀರಿನಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರು ಯುವ ರೈತರ ಸಾವಿನ ದುಃಖ ಇಡೀ ಗ್ರಾಮವನ್ನು ಆವರಿಸಿದ್ದು, ಆಕ್ರಂಧನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಚಿತ್ರಹಳ್ಳಿ ಪಿಎಸ್ಐ ಕಾಂತರಾಜ್ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
Continue Reading
You may also like...
Related Topics:Chitradurga, Chitradurga Latest, Chitradurga news, Chitrahalli, Holalkere, Kannada News, Krishi Honda, Police, ಕನ್ನಡ ಸುದ್ದಿ, ಕೃಷಿ ಹೊಂಡ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಚಿತ್ರಹಳ್ಳಿ, ಪೊಲೀಸ್, ಹೊಳಲ್ಕೆರೆ

Click to comment