By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: AYYAPPA SWAMY; ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಒಂದು ವಾರ ಧಾರ್ಮಿಕ ಕಾರ್ಯಕ್ರಮಗಳು | ಭಕ್ತಿ ಕುಸುಮಾಂಜಲಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » AYYAPPA SWAMY; ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಒಂದು ವಾರ ಧಾರ್ಮಿಕ ಕಾರ್ಯಕ್ರಮಗಳು | ಭಕ್ತಿ ಕುಸುಮಾಂಜಲಿ

ಮುಖ್ಯ ಸುದ್ದಿ

AYYAPPA SWAMY; ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಒಂದು ವಾರ ಧಾರ್ಮಿಕ ಕಾರ್ಯಕ್ರಮಗಳು | ಭಕ್ತಿ ಕುಸುಮಾಂಜಲಿ

chitradurganews.com
Last updated: 2 July 2024 11:35
chitradurganews.com
12 months ago
Share
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 2 JULY 2024

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ(AYYAPPA SWAMY) ದೇಗುಲ ಆರಂಭವಾಗಿ 25 ವರ್ಷಗಳ ಸಂದ ಹಿನ್ನೆಲೆಯಲ್ಲಿ ಜುಲೈ 5 ರಿಂದ 11 ರವರೆಗೆ ದೇವಸ್ಥಾನದಲ್ಲಿ ವಿವಿಧ ಹೋಮ, ಹವನಾದಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಹಾಕುಂಬಾಭಿಷೇಕದ ಉದ್ಘಾಟನೆಯನ್ನು ಬೆಂಗಳೂರಿನ ವೈದ್ಯ ಡಾ.ಎಚ್.ಎಸ್.ಕಾರ್ತಿಕ್ ನೆರವೇರಿಸುವರು.

ಇದನ್ನೂ ಓದಿ: MADAKARI NAYAKA ; ದುರ್ಗದಲ್ಲಿ ಮದಕರಿ ನಾಯಕರ ಪಟ್ಟಾಭಿಷೇಕ | ಭಾಗವಹಿಸಿದ್ದ ಗಣ್ಯರು ಹೇಳಿದ್ದೇನು..?

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣವಾಗಿ 25 ಸಂವತ್ಸರಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ಗರ್ಭಗುಡಿಯ ಸುತ್ತಲೂ ತಾಮ್ರದ ಹೊದಿಕೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಬೆಳ್ಳಿಯ ಕವಚ ಅಳವಡಿಸಲಾಗಿದೆ.

ಜುಲೈ 5 ರಂದು ಕೇರಳದ ತಂತ್ರಿಗಳಾದ ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಸತೀಶ್ ಶರ್ಮ ಅವರ ಸಂಗಡಿಗರಿಂದ ಪ್ರಾತಃಕಾಲ ಮತ್ತು ಸಂಧ್ಯಾಕಾಲದಲ್ಲಿ ವಿಶೇಷವಾಗಿ ದೇವಸ್ಥಾನದ ಆವರಣದಲ್ಲಿ ಆಚಾರ್ಯ ವರ್ಣಂ, ಸ್ಥಳ ಶುದ್ಧೀಕರಣ, ವಾಸ್ತುಶಾಂತಿ, ವಾಸ್ತು ಬಲಿ, ಅಂಕುರಾರ್ಪಣ ಪೂಜಾ ಕಾರ್ಯಗಳು ನಡೆಯಲಿವೆ.

ಇದನ್ನೂ ಓದಿ: ರಾಜಾವೀರ ಮದಕರಿ ನಾಯಕ ಪಟ್ಟಾಭಿಷೇಕ | ಚಿತ್ರದುರ್ಗದಂತಹ ಕೋಟೆ ಏಷ್ಯಾ ಖಂಡದಲ್ಲೇ ಇಲ್ಲ | ಡಾ.ಎಸ್.ಎನ್.ಮಹಾಂತೇಶ್

ನಂತರ ಗಣ ಹೋಮ, ತತ್ವ ಕಲಶ ಅಭಿಷೇಕ, ಬ್ರಹ್ಮಾದಿ ಪರಿಕಲಾ ಅಭಿಷೇಕಗಳು, ಪ್ರತಿಷ್ಠ ಹೋಮ, ಕಲಶಾಭಿಷೇಕ ಹಾಗೂ ಜೀವ ಕಲಶ ಪೂಜೆ ಇನ್ನು ಅನೇಕ ರೀತಿಯ ಪ್ರತಿμÁ್ಠಪನ ಪೂಜಾ ಕೈಂಕರಗಳು ಜರುಗಲಿವೆ.

ಶ್ರೀ ಅಯ್ಯಪ್ಪ ಸ್ವಾಮಿ
ಶ್ರೀ ಅಯ್ಯಪ್ಪ ಸ್ವಾಮಿ

ಜುಲೈ 6 ರಂದು ಬೆಳಿಗ್ಗೆ ಗಣಪತಿ ಅಥರ್ವ ಶಿಷ್ಯ ಹೋಮ, ಪೂರ್ಣಾಹುತಿ ಮಹಾ ಮಂಗಳಾರತಿ ಪೂಜೆ ನೆರವೇರುವುದು. ಸಂಜೆ ವಿವಿಧ ಗಣ್ಯರಿಂದ ವಿಶೇಷ ಕಾರ್ಯಕ್ರಮ ನಡೆಯಲಿವೆ.

ಇದನ್ನೂ ಓದಿ: ಜಿಲ್ಲೆಯ 158 ಸಹಕಾರ ಸಂಘಗಳಿಗೆ ಕಂಪ್ಯೂಟರ್ ಅಳವಡಿಕೆ | ಇಲ್ಯಾಸ್‍ ಉಲ್ಲಾ ಷರೀಪ್

ಜುಲೈ 7 ಭಾನುವಾರ ಬೆಳಗ್ಗೆ ಚೋರಶಾಂತಿ ಹೋಮ, ತತ್ವ ಕಳಶ ಪೂಜೆ, ತತ್ವ ಹೋಮ, ಕಳಶಾಭಿಷೇಕ, ಬ್ರಹ್ಮಕಳಸ ಪೂಜೆ, ಪರಿಕಳಶ ಪೂಜೆ ಹಾಗೂ ನವಗ್ರಹ ಸಹಿತ ಶ್ರೀ ರುದ್ರ ಹೋಮ ಪೂರ್ಣಾಹುತಿ ಮಹಾ ಮಂಗಳಾರತಿ ನೆರವೇರುವುದು.

ಜು.8 ರಂದು ಸ್ಕಂದ ಹೋಮ ಹಾಗೂ ಅಶ್ಲೇಷ ಬಲಿ ಪೂಜೆ ಮಹಾ ಮಂಗಳಾರತಿ ಹೋಮ ನೆರವೇರುವುದು. ಸಂಜೆ ಸಂಗೀತಗಾರರಾದ ಶ್ರೀ ಮಹೇಂದ್ರ ದಾಸ್, ಶ್ರೀರಾಮಚಂದ್ರ, ಸುನೀತ್ ಜೋಗಿ ಅವರಿಂದ ಭಕ್ತಿ ಕುಸುಮಾಂಜಲಿ ಕಾರ್ಯಕ್ರಮ ನೆರವೇರುವುದು.

ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ

ಜು.9 ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ಪೂರ್ಣಾಹುತಿ ಮಹಾ ಮಂಗಳಾರತಿ ಪೂಜಾ ನೆರವೇರುವುದು.

Sri Ayyappa Swamy Temple Silver Jubilee
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ

ಪ್ರತಿ ದಿನ ಸಂಜೆ 6.30ಕ್ಕೆ ಮಂಗಳೂರಿನ ಯಶವಂತ್ ಸುರಭಿ ಸೌಂಡ್ ಸಂಗೀತಗಾರರಿಂದ ಪ್ರತಿನಿತ್ಯ ಕುಸುಮಾಂಜಲಿ ಕಾರ್ಯಕ್ರಮ ನೆರವೇರುವುದು.

ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!

ಜು.9 ಸಂಜೆ ಶ್ರೀ ಅಯ್ಯಪ್ಪ ಯಕ್ಷಗಾನ ಕೊಕ್ಕರಣೆ ಮೇಳ ಮಂಗಳೂರು ಇವರಿಂದ ಯಕ್ಷಗಾನ ನೆರವೇರುವುದು.
ಕುಂಭಾಭಿಷೇಕದ ದಿನದಂದು ಮಹಾ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜು.10 ರಂದು ಬೆಳಿಗ್ಗೆ 7 ಕರ್ಕಾಟಕ ಲಗ್ನದ ಶುಭ ಮಹೂರ್ತದಲ್ಲಿ ಪ್ರತಿμÁ್ಠಪನಾ ಬ್ರಹ್ಮ ಕಳಸಾಭಿಷೇಕ, ಕುಂಭೇಶ ಕಳಶಾಭಿಷೇಕ, ನಿದ್ರಾ ಕಳಸ ಅಭಿಷೇಕ, ಪ್ರತಿμÁ್ಠಬಲಿ ಹಾಗೂ ಚಂಡಿಕಾ ಹೋಮ ನೆರವೇರಿಸಲಾಗುವುದು.

ಈ ಧಾರ್ಮಿಕ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳಿಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ಮೆದೇಹಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅನ್ನದಾನ

ಜು.11 ರಂದು ಬೆಳಿಗ್ಗೆ ಶ್ರೀ ಆಂಜನೇಯ ಮೂಲ ಮಂತ್ರ ಹೋಮ ಹಾಗೂ ಪೂರ್ಣಾಹುತಿ ಹಾಗೂ ಸಂಜೆ 6 ಗಂಟೆಗೆ ಪವಿತ್ರವಾದ 18 ಮೆಟ್ಟಿಲುಗಳಿಗೆ ಪಡಿ ಪೂಜಾ ಕಾರ್ಯಕ್ರಮದ ಮುಖಾಂತರ ಏಳು ದಿನಗಳ ಕಾರ್ಯಕ್ರಮ ಸಮಾಪ್ತಿಯಾಗಲಿದ್ದು, ಸಮಸ್ತ ಭಕ್ತಾದಿಗಳು ಭಾಗವಹಿಸುವಂತೆ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್, ಕಾರ್ಯದರ್ಶಿಗಳಾದ ಎಂ.ಪಿ.ವೆಂಕಟೇಶ್, ಬಿ.ಎಸ್.ಮೋಹನ್‍ಕುಮಾರ್, ಉಪಾಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.

350 ವರ್ಷಗಳ ಹಿನ್ನೆಲೆಯ ಸ್ಥಳ ಮಹಿಮೆ:

ಐತಿಹಾಸಿಕ ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಇರುವ ಸ್ಥಳಕ್ಕೆ ವಿಶೇಷ ಮಹತ್ವ ಇದೆ. ಇಲ್ಲಿ 350 ವರ್ಷಗಳ ಹಿಂದೆ ಪ್ರತಿμÁ್ಠಪನೆಯದ ಶ್ರೀ ಭೀಮಶಂಕರ ಮತ್ತು ಶ್ರೀ ಭೀಮಾಂಜನೇಯ ಸ್ವಾಮಿಯ ದೇವಸ್ಥಾನವಿದೆ. ಇದೇ ಆವರಣದಲ್ಲಿ ಶ್ರೀ ರಾಮತೀರ್ಥ ಸ್ವಾಮೀಜಿ ಅವರ ಸಹಕಾರದೊಂದಿಗೆ ಕೇರಳಾದ ವಾಸ್ತುಶಿಲ್ಪಿಗಳಾದ ಕಾಸರಗೋಡಿನ ಕಮಲಕ್ಷನ್ ತಪತಿ ಪರಿಮಳಾಚಾರ್, ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ನಗರದ ಭಕ್ತರ ಸಹಯೋಗದಲ್ಲಿ ಶ್ರೀಗಣೇಶ, ಶ್ರೀ ಸುಬ್ರಹ್ಮಣ್ಯ, ಶ್ರೀ ವಿಷ್ಣು ವಿಗ್ರಹಗಳನ್ನು ಶಂಕು ಸ್ಥಾಪನೆ ಮಾಡಲಾಗಿತ್ತು.

Temple of Sri Bhimashankara and Sri Bhimanjaneya Swamy
ಶ್ರೀ ಭೀಮಶಂಕರ ಮತ್ತು ಶ್ರೀ ಭೀಮಾಂಜನೇಯ ಸ್ವಾಮಿಯ ದೇವಸ್ಥಾನ

ಇದನ್ನೂ ಓದಿ: ಶ್ರೀ ಅಯ್ಯಪ್ಪಸ್ವಾಮಿ 24ನೇ ವರ್ಷದ ಲಕ್ಷದೀಪೋತ್ಸವ | ಮಧ್ಯ ಕರ್ನಾಟಕದ ಶಬರಿಮಲೆ ಚಿತ್ರದುರ್ಗದಲ್ಲಿ ಸಂಭ್ರಮ

1999 ಜೂನ್ 20 ರಂದು ಶ್ರೀ ಅಯ್ಯಪ್ಪ ಸ್ವಾಮಿಯ ಪಂಚಲೋಹದ ವಿಗ್ರಹವನ್ನು ಪ್ರತಿμÁ್ಠಪಿಸಲಾಯಿತು. ಪ್ರತಿ ವರ್ಷವೂ ಸನ್ನಿಧಾನದಲ್ಲಿ ವಿಶೇಷವಾಗಿ ವಾರ್ಷಿಕೋತ್ಸವ, ಬ್ರಹ್ಮೋತ್ಸವ ಹಾಗೂ ಅಯ್ಯಪ್ಪ ಮಾಲಾಧಾರಿಗಳಿಗೆ ಉಚಿತ ಅನ್ನದಾನ ಕಾರ್ಯಕ್ರಮ ಮತ್ತು ದೀಪೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತಿವೆ.

ಮೊದಲನೇ ಕುಂಭಾಭಿಷೇಕವು 2012ನೇ ಸಾಲಿನಲ್ಲಿ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತ್ತು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BrahmakalashaChitradurgaChitradurga Ayyappa SwamyKannada Latest NewsKumbabhishekaMedehalli RoadRajata MahotsavaShri Ayyappa Swamyಕನ್ನಡ ಲೇಟೆಸ್ಟ್ ನ್ಯೂಸ್ಕುಂಬಾಭಿಷೇಕಚಿತ್ರದುರ್ಗಚಿತ್ರದುರ್ಗ ಅಯ್ಯಪ್ಪ ಸ್ವಾಮಿಬ್ರಹ್ಮಕಲಶಮೆದೇಹಳ್ಳಿ ರಸ್ತೆರಜತ ಮಹೋತ್ಸವಶ್ರೀ ಅಯ್ಯಪ್ಪ ಸ್ವಾಮಿ
Share This Article
Facebook Email Print
Previous Article MADAKARI NAYAKA ; ದುರ್ಗದಲ್ಲಿ ಮದಕರಿ ನಾಯಕರ ಪಟ್ಟಾಭಿಷೇಕ | ಭಾಗವಹಿಸಿದ್ದ ಗಣ್ಯರು ಹೇಳಿದ್ದೇನು..?
Next Article Dr.G.V.Basavaraj IMA AWARD; ಚಿತ್ರದುರ್ಗ ಮೂಲದ ವೈದ್ಯ ಡಾ.ಜಿ.ವಿ.ಬಸವಾಜ್ ಅವರಿಗೆ ಅತ್ಯುನ್ನತ ಪ್ರಶಸ್ತಿ
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up