ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟಿಸಿದವರ ಮೇಲೆ ಎಫ್‍ಐಆರ್ | ಕಪ್ಪು ಭಾವುಟ ಪ್ರದರ್ಶನ, ಮೊಟ್ಟೆ ಎಸೆಯಲು ನಡೆದಿತ್ತಾ ಪ್ಲಾನ್ !

CHITRADURGA NEWS | 30 MARCH 2024

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರ ಕಾರಿಗೆ ಮೊಟ್ಟೆ ಹೊಡೆದು ಕಪ್ಪು ಬಾವುಟ ಪ್ರದರ್ಶನಕ್ಕೆ ರಘುಚಂದನ್‌ ಬೆಂಬಲಿಗರು ಸಿದ್ಧತೆ ನಡೆಸಿದ್ದರು ಎಂಬ ಅಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಶುಕ್ರವಾರ ಸಂಜೆ ಹಿರಿಯೂರು ಮೂಲಕ ಚಿತ್ರದುರ್ಗಕ್ಕೆ ಗೋವಿಂದ ಎಂ.ಕಾರಜೋಳ ಆಗಮಿಸುತ್ತಾರೆ ಎಂಬ ವಿಷಯ ತಿಳಿದ ಟಿಕೆಟ್‌ ವಂಚಿತ ಎಂ.ಸಿ.ರಘುಚಂದನ್‌ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆಯಲ್ಲಿ ಜಮಾಯಿಸಿದ್ದರು. ವಿಷಯ ತಿಳಿದ ಪೊಲೀಸರು ಹಾಗೂ ಚುನಾವಣೆ ಎಫ್‌ಎಸ್‌ಟಿ ಅಧಿಕಾರಿ ಎಸ್‌.ಎನ್‌.ಹೇಮಂತರಾಜು ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ್ದಾರೆ.

ಕ್ಲಿಕ್ ಮಾಡಿ ಓದಿ: ನಾನು ನಂಬಿದವರೇ ನನ್ನ ಕತ್ತು ಕೊಯ್ದರು | ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಚಂದ್ರಪ್ಪ ವಾಗ್ದಾಳಿ

ಈ ವೇಳೆ 100ಕ್ಕೂ ಹೆಚ್ಚು ರಘುಚಂದನ್‌ ಬೆಂಬಲಿಗರು ರಸ್ತೆಯಲ್ಲಿ ಕುಳಿತು ಗೋ ಬ್ಯಾಕ್‌ ಘೋಷಣೆ ಕೂಗಿದ್ದಾರೆ. ಉದೇ ವೇಳೆ ಕಾರಿನಿಂದ ಕಪ್ಪು ಬಣ್ಣದ ಬಾವುಟ ಹಾಗೂ ಮೊಟ್ಟೆ ಟ್ರೈಯನ್ನು ಕೆಳಗೆ ಇಳಿಸಿದ್ದಾರೆ. ಇದನ್ನು ಎಫ್‌ಎಸ್‌ಟಿ ಅಧಿಕಾರಿ ಗಮನಿಸುತ್ತಿದ್ದಂತೆ ಕಾರನ್ನು ತೆಗೆದು ಕೊಂಡು ಸ್ಥಳದಿಂದ ಪಲಾಯಾನ ಮಾಡಿದ್ದಾರೆ.

ಘಟನೆ ಬಗ್ಗೆ ಹೇಮಂತ್‌ ರಾಜು ಬಡಾವಣೆ ಠಾಣೆಯಲ್ಲಿ 13 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ನವೀನ್‌, ಅಂಜಿನಪ್ಪ, ಚೇತನ, ತಿಮ್ಮಯ್ಯ, ಸುನೀಲ್‌, ಹುಸೇನ್‌, ಹರೀಶ್‌, ಭೂತೇಶ್‌, ಆನಂದ, ಭರತೇಶ, ವೀರೇಶ, ಶಶಿಧರ, ಕೊಟ್ರೇಶ್‌ ವಿರುದ್ಧ ದೂರು ದಾಖಲಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version