CHITRADURGA NEWS | 29 AUGUST 2024
ಚಿತ್ರದುರ್ಗ: ಹಳೆಯ ವೈಷಮ್ಯದ ಕಾರಣಕ್ಕೆ ವ್ಯಕ್ತಿಯೊಬ್ಬರ ಕೊಲೆ ಮಾಡಿ ತಲೆಕಡಿದು, ರುಂಡ ಹಿಡಿದುಕೊಂಡು ಹೋಗಿದ್ದ ವ್ಯಕ್ತಿಗೆ ಚಿತ್ರದುರ್ಗ ನ್ಯಾಯಾಲಯ(court) ಜೀವಾವಧಿ ಶಿಕ್ಷೆ ವಿಧಿಸಿದೆ.
ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಿರಿಯೂರು ತಾಲೂಕು ಶ್ರವಣಗೆರೆ ಗ್ರಾಮದ ಶ್ರೀನಿವಾಸನಿಗೆ ಜೀವಾವಧಿ ಶಿಕ್ಷೆ ವಿಧಿಸಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ: ದಿನ ಭವಿಷ್ಯ | ಆಗಸ್ಟ್ 29 | ಗುರುರಾಯರ ಕೃಪೆಯೊಂದಿಗೆ ಬಗೆಹರಿಯಲಿವೆ ಧೀರ್ಘಾವಧಿ ಸಮಸ್ಯೆ
ಶ್ರವಣಗೆರೆ ಮಲ್ಲಣ್ಣ ಎಂಬುವವರ ಪುತ್ರ ರಮೇಶ ಕೊಲೆಯಾದ ವ್ಯಕ್ತಿಯಾಗಿದ್ದಾರೆ.
ಘಟನೆಯ ವಿವರ: ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ರಮೇಶ ಯುಗಾದಿ ಹಬ್ಬಕ್ಕಾಗಿ 2022 ಏಪ್ರಿಲ್ 7 ರಂದು ಸ್ವಗ್ರಾಮ ಶ್ರವಣಗೆರೆಗೆ ಬಂದಿದ್ದಾರೆ. ಅದೇ ದಿನ ಹೆಂಡತಿ ಮಕ್ಕಳು ತವರು ಮನೆಗೆ ಜಾತ್ರೆಗೆ ಹೋಗಿದ್ದಾರೆ.
ಮನೆಯಲ್ಲಿ ರಮೇಶ ಹಾಗೂ ಆತನ ತಂದೆ ಮಲ್ಲಣ್ಣ ಮಾತ್ರ ಇದ್ದರು. ರಮೇಶ ಗ್ರಾಮದಲ್ಲಿ ನಡೆಯುತ್ತಿದ್ದ ದೇವಿ ಮಹಾತ್ಮೆ ನಾಟಕದ ಪ್ರಾಕ್ಟೀಸ್ ನೋಡಿಕೊಂಡು ಬಂದು ರಾತ್ರಿ 11 ಗಂಟೆಗೆ ಮನೆಯಲ್ಲಿ ಮಲಗಿದ್ದಾರೆ. ತಂದೆ ಮಲ್ಲಣ್ಣ ಮನೆಯ ಹೊರಗೆ ಜಗುಲಿ ಮೇಲೆ ಮಲಗಿದ್ದಾರೆ.
ಇದನ್ನೂ ಓದಿ: ಗೌರಸಮುದ್ರ ಮಾರಮ್ಮನ ಹುಂಡಿಯಲ್ಲಿ 10.66 ಲಕ್ಷ | ಎಲ್ಲಿ ಜಮೆ ಆಯ್ತು ಗೊತ್ತಾ
ರಾತ್ರಿ 1.30ರ ವೇಳೆಗೆ ಜೋರಾಗಿ ಕಿರುಚಾಡಿದ ಶಬ್ದ ಬಂದಿದೆ. ಆಗ ಮನೆಯ ಒಳಗಿನಿಂದ ಸೀನ ಅಲಿಯಾಸ್ ಶ್ರೀನಿವಾಸ್ ಪ್ಲಾಸ್ಟಿಕ್ ಕವರ್ನಲ್ಲಿ ಏನೋ ಹಿಡಿದುಕೊಂಡು ಹೊರಗೆ ನಡೆದಿದ್ದಾನೆ. ಮಲ್ಲಣ್ಣ ಏನೋ ಸೀನಾ ಅದು ಎಂದರೂ ಮಾತನಾಡಿಲ್ಲ.
ಆತಂಕದಿಂದ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ರೂಮಿನಲ್ಲಿ ಮಲಗಿದ್ದ ಮಗ ರಮೇಶನನ್ನು ಕೊಲೆ ಮಾಡಿ ಆತನ ರುಂಡವನ್ನು ಚೀಲದಲ್ಲಿ ಹಾಕಿಕೊಡು ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ, ನೇರ ನೇಮಕಾತಿಗೆ ಸಂದರ್ಶನ
ಆರೋಪಿ ಶ್ರೀನಿವಾಸ ಈ ಹಿಂದೆಯೂ ನೀವು ನಮ್ಮ ಮನೆಗೆ ವಾಮಾಚಾರ ಮಾಡಿಸುತ್ತಿರಾ, ನಮ್ಮ ಮನೆ ಏಳಿಗೆ ಆಗುತ್ತಿಲ್ಲ ಎಂದು ರಮೇಶನ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದನು ಎನ್ನುವುದು ತಿಳಿದು ಬಂದಿದೆ.
ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿಎಸ್ಐ ಎನ್.ಪರಶುರಾಮ್ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಸಿಪಿಐ ಕೆ.ಆರ್.ರಾಘವೇಂದ್ರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
