By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: BREAKING NEWS ಒಂದೇ ಮನೆಯಲ್ಲಿ ಐದು ಜನರ ಅಸ್ತಿಪಂಜರ | ಸಾವಿಗೆ ಇದೇ ಕಾರಣ ನೋಡಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » BREAKING NEWS ಒಂದೇ ಮನೆಯಲ್ಲಿ ಐದು ಜನರ ಅಸ್ತಿಪಂಜರ | ಸಾವಿಗೆ ಇದೇ ಕಾರಣ ನೋಡಿ

ಮುಖ್ಯ ಸುದ್ದಿ

BREAKING NEWS ಒಂದೇ ಮನೆಯಲ್ಲಿ ಐದು ಜನರ ಅಸ್ತಿಪಂಜರ | ಸಾವಿಗೆ ಇದೇ ಕಾರಣ ನೋಡಿ

chitradurganews.com
Last updated: 16 May 2024 19:32
chitradurganews.com
1 year ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS |16 MAY 2024

ಚಿತ್ರದುರ್ಗ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗ ನಗರದ ಜೈಲು ರಸ್ತೆಯ ಮನೆಯಲ್ಲಿ ಐದು ಜನರ ಅಸ್ತಿಪಂಜರ ಪತ್ತೆ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ.

ಜೈಲು ರಸ್ತೆಯಲ್ಲಿದ್ದ ನಿವೃತ್ತ ಇಂಜಿನಿಯರ್ ದೊಡ್ಡಸಿದ್ದವ್ವನಹಳ್ಳಿ ಮೂಲದ ಜಗನ್ನಾಥ ರೆಡ್ಡಿ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿತ್ತು. ಮೃತಪಟ್ಟು 5 ವರ್ಷಗಳ ನಂತರ ಅಸ್ತಿಪಂಜರದ ಮಾದರಿಯಲ್ಲಿ ಮೃತರ ದೇಹಗಳು ಸಿಕ್ಕಿದ್ದವು.

ಇದನ್ನೂ ಓದಿ: BEAKING NEWS ಪಾಳುಬಿದ್ದ ಮನೆಯಲ್ಲಿ ಅಸ್ತಿಪಂಜರ ಮಾದರಿಯಲ್ಲಿ ಶವ ಪತ್ತೆ | ಬೆಚ್ಚಿ ಬಿದ್ದ ಸಾರ್ವಜನಿಕರು

ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ ಅವರ ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತು.

ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಲೀಲಾ
ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಲೀಲಾ

ಈ ಸಂಬಂಧ ಪೋಸ್ಟ್ ಮಾರ್ಟಮ್ ಹಾಗೂ ಎಫ್‍ಎಸ್‍ಎಲ್ ವರದಿ ಬರೋಬ್ಬರಿ 5 ತಿಂಗಳ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭ್ಯವಾಗಿದೆ.

ಇದನ್ನೂ ಓದಿ: ಐದು ಜನರ ಅಸ್ಥಿಪಂಜರ ಪ್ರಕರಣ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದೇನು

ಪೋಸ್ಟ್ ಮಾರ್ಟಮ್ ವರದಿಯಲ್ಲಿ ಐದು ಜನರ ದೇಹದ ಮೂಳೆಗಳಲ್ಲಿ ಯಾವುದೇ ಹೊಡೆತ ಬಿದ್ದ ಅಥವಾ ಮುರಿತ ಕಂಡು ಬಂದಿಲ್ಲ ಎನ್ನುವ ವರದಿ ಬಂದಿತ್ತು.

ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ
ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ

ಈಗ ಎಫ್‍ಎಸ್‍ಎಲ್ ವರಿದಿ ಕೂಡಾ ಬಂದಿದ್ದು, ವರದಿಯಲ್ಲಿ ನಿದ್ರೆ ಮಾತ್ರೆ ಸೇವಿಸಿರುವ ಬಗ್ಗೆ ಉಲೇಖವಾಗಿದೆ. ಅಸ್ತಿಪಂಜರಗಳ ಕೆಲ ಮಾದರಿ ಹಾಗೂ ಕೆಲವರ ಚರ್ಮದ ಮಾದರಿ ಸಂಗ್ರಹಿಸಿದ್ದ ತಜ್ಞರು ಪತ್ತೆ ಮಾಡಿರುವ ಅಂಶಗಳಲ್ಲಿ ನಿದ್ರೆ ಮಾತ್ರೆ ಸೇವಿಸಿರುವುದು ಈಗ ಸಿಕ್ಕಿರುವ ವರದಿಯಲ್ಲಿ ದೃಢಪಟ್ಟಿದೆ.

ಇದನ್ನೂ ಓದಿ: ಜೈಲು ರಸ್ತೆ ಬಳಿ ಮನೆಯಲ್ಲಿ ಐದು ಜನರ ನಿಗೂಢ ಸಾವಿನ ಕುರಿತು ದೂರು ದಾಖಲು

ಇನ್ನೂ ಪ್ರಕರಣದ ಸಮಗ್ರ ತನಿಖೆಗಾಗಿ ಮನೆಯ ವಿವಿಧ ವಸ್ತುಗಳನ್ನು ಜಾಲಾಡಿದ್ದ ತಜ್ಞರ ತಂಡಕ್ಕೆ ಮನೆಯ ಎರಡು ಪಾತ್ರೆಗಳಲ್ಲಿ ಸೈನೆಡ್ ಐರನ್ ಅಂಶ ಇರುವುದು ಖಚಿತವಾಗಿದೆ.

ಪುತ್ರಿ ತ್ರಿವೇಣಿ
ಪುತ್ರಿ ತ್ರಿವೇಣಿ

ಆದರೆ, ಈ ಐದು ಜನ ಸೈನೆಡ್ ಸೇವಿಸಿದ್ದರೆ ಎನ್ನುವುದಕ್ಕೆ ಸೂಕ್ತ ದಾಖಲೆ ಅಥವಾ ಪರೀಕ್ಷೆ ವೇಳೆ ರಾಸಾಯನಿಕಗಳು ಪತ್ತೆಯಾಗಿಲ್ಲ.

ಇದನ್ನೂ ಓದಿ: ಡೆತ್‍ನೋಟ್ ರಹಸ್ಯ | ಐವರ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು

ಐದು ಜನರು 2019 ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಅದರಂತೆ ಎಫ್‍ಎಸ್‍ಎಲ್ ವರದಿಯಲ್ಲೂ ಸಿಕ್ಕಿರುವ ಅಸ್ತಿಪಂಜರಗಳ ಆಧಾರದಲ್ಲಿ ಐದು ಜನ ಮೃತಪಟ್ಟು ನಾಲ್ಕೂವರೆಯಿಂದ ಐದು ವರ್ಷಗಳ ಹಿಂದೆ ಮೃತಪಟ್ಟಿರಬಹುದು ಎಂದು ದಾಖಲಿಸಲಾಗಿದೆ.

ಇದನ್ನೂ ಓದಿ: ತನಿಖಾ ತಂಡದ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ | ರೋಚಕ ತಿರುವು ಪಡೆಯುತ್ತಿದೆ ಅಸ್ಥಿಪಂಜರ ಪತ್ತೆ ಪ್ರಕರಣ | ಎಫ್‌ಎಸ್‌ಎಲ್‌ ವರದಿಯತ್ತ ಎಲ್ಲರ ಚಿತ್ತ ‌

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaFive SkeletonsFSL ReportHouse of DeathKannada Latest NewsPolicePost-mortemಎಫ್‍ಎಸ್‍ಎಲ್ ವರದಿಐದು ಅಸ್ತಿಪಂಜರಕನ್ನಡ ಲೇಟೆಸ್ಟ್ ನ್ಯೂಸ್ಚಿತ್ರದುರ್ಗಪೊಲೀಸ್ಪೋಸ್ಟ್ ಮಾರ್ಟಮ್ಸಾವಿನ ಮನೆ
Share This Article
Facebook Email Print
Previous Article ನಾರಾಯಣಸ್ವಾಮಿ ಪರವಾಗಿ ಕೆ.ಎಸ್.ನವೀನ್ ಮತಯಾಚನೆ ನಾರಾಯಣಸ್ವಾಮಿ ಪರವಾಗಿ ಕೆ.ಎಸ್.ನವೀನ್ ಮತಯಾಚನೆ
Next Article ಅಸ್ಥಿಪಂಜರ ಸಿಕ್ಕ ಮನೆ ಅಸ್ಥಿಪಂಜರ ಸಿಕ್ಕ ಮನೆಯಲ್ಲಿ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳೆಷ್ಟು ಗೊತ್ತಾ
Leave a Comment

Leave a Reply Cancel reply

Your email address will not be published. Required fields are marked *

APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಕಡಲೆಕಾಳು, ಶೇಂಗಾ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up