Connect with us

    ಕೋಟೆನಾಡಲ್ಲಿ ಶರಣ ಸಾಹಿತ್ಯ ಸಮ್ಮೇಳನ | ಬೆಲ್ದಾಳ‌ ಶರಣರ ಅಧ್ಯಕ್ಷತೆ

    ಮುಖ್ಯ ಸುದ್ದಿ

    ಕೋಟೆನಾಡಲ್ಲಿ ಶರಣ ಸಾಹಿತ್ಯ ಸಮ್ಮೇಳನ | ಬೆಲ್ದಾಳ‌ ಶರಣರ ಅಧ್ಯಕ್ಷತೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 27 DECEMBER 2024

    ಚಿತ್ರದುರ್ಗ: ಜನವರಿ 18 ಮತ್ತು 19 ರಂದು ಚಿತ್ರದುರ್ಗದಲ್ಲಿ ಅಖಿಲ ಭಾರತ ಶರಣ‌ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ‌ ಸಿ.ಸೋಮಶೇಖರ್ ಹೇಳಿದರು.

    ಕ್ಲಿಕ್ ಮಾಡಿ ಓದಿ: ನಾಯಿ ಬಾಯಲ್ಲಿ ನವಜಾತ ಶಿಶು | ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ

    ಮುರುಘಾ ಮಠದ ಶಿರಸಿಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯುವ ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಭಾಗವಹಿಸುವರು. ಸುತ್ತೂರು‌ ಶ್ರೀ ಶಿವರಾತ್ರಿ ದೇಶಿಕೇಂದ್ರ, ಶ್ರೀಗಳು‌, ಗದುಗಿನ ತೋಂಟದಾರ್ಯ ಶ್ರೀಗಳು, ಡಾ.ಬಸವಕುಮಾರ‌ ಸ್ವಾಮೀಜಿ, ಮಾದಾರ‌ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

    ಸಾಂಸ್ಜೃತಿಕ ನಾಯಕ ಬಸವಣ್ಣ, ಮಹಿಳಾ ಸಂವೇದನೆ, ಶರಣ ಸಾಹಿತ್ಯ ಮತ್ತು ಯುವ ಜನಾಂಗ, ನಮ್ಮ ಪ್ರಾತಃ ಸ್ಮರಣೀಯರು, ಜಯದೇವ ಶ್ರೀ, ಸಿದ್ದೇಶ್ವರ ಸ್ವಾಮೀಜಿ, ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ‌ ಕುರಿತ ಗೋಷ್ಠಿ ನಡೆಯಲಿವೆ.

    ಕ್ಲಿಕ್ ಮಾಡಿ ಓದಿ: ರಸ್ತೆ ಅಭಿವೃದ್ಧಿ ಕಾಮಗಾರಿ | ಚಿಕ್ಕಜಾಜೂರಿನಿಂದ ಅಮೃತಾಪುರಕ್ಕೆ ಮಾರ್ಗ ಬದಲಾವಣೆ

    ಶರಣರ ವೈಚಾರಿಕ‌ ಚಿಂತನೆಗಳು, ಶರಣರ ನಾಟಕಗಳ ಕುರಿತ ಚಿಂತನೆ ಹಾಗೂ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ನಡೆಯಲಿದೆ.

    ಸಮಾರೋಪಕ್ಕೆ ಕೇಂದ್ರ ಸಚಿವರಾದ ವಿ.ಸೋಮಣ್ಣ, ಬಾಲ್ಕಿ‌ ಶ್ರೀಗಳು, ನಿಡುಸೋಸಿ‌ ಶ್ರೀಗಳು, ಡಾ.ಪ್ರಭಾಕರ ಕೋರೆ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಶರಣ ಸಾಹಿತ್ಯ‌ ಪರಿಷತ್ತಿಗೆ 950ಕ್ಕೂ ಹೆಚ್ಚು ದತ್ತಿಗಳಿವೆ. ಅನೇಕ ಜಿಲ್ಲಾ, ತಾಲೂಕು‌ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯುತ್ತವೆ.

    ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹತ್ತು ವರ್ಷಗಳ ನಂತರ ಚಿತ್ರದುರ್ಗದಲ್ಲಿ‌ ಸಮ್ಮೇಳನ ನಡೆಸುತ್ತಿದೆ.

    ಸಮ್ಮೇಳನದಲ್ಲಿ 25 ರಿಂದ 30 ಸಾವಿರ ಜನ‌ ಭಾಗವಹಿಸುತ್ತಿದ್ದಾರೆ.

    ಇದೊಂದು ದೊಡ್ಡ ಸಮ್ಮೇಳನವಾಗಿದ್ದು, ಮುಂದೆ ಯಾವ ಸ್ವರೂಪ ಬೇಕಾದರೂ ಪಡೆದುಕೊಳ್ಳಬಹುದು.‌‌ ಈ ಹಿನ್ನೆಲೆಯಲ್ಲಿ‌ ಸಾಕಷ್ಟು ಸಿದ್ಧತೆ ಮಾಡಿಕೊಂಡು,‌ ಅರ್ಥಪೂರ್ಣವಾಗಿ‌ ಆಚರಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.

    ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿನಿಲಯ ಪ್ರವೇಶಾತಿ | ಅರ್ಜಿ ಸಲ್ಲಿಸಲು ಜನವರಿ 10ರವರೆಗೆ ವಿಸ್ತರಣೆ

    ಬೆಲ್ದಾಳ ಶರಣರು ಸಮ್ಮೇಳನಾಧ್ಯಕ್ಷರು:

    ಪೂಜ್ಯ ಡಾ.ಸಿದ್ದರಾಮ ಬೆಲ್ದಾಳ ಶರಣರು ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

    ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಕೋಶಾಧ್ಯಕ್ಷ ಎಸ್.ಷಣ್ಮುಖಪ್ಪ, ಉಪಾಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣಿ, ಹಂಪಯ್ಯ, ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಇತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top