By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ನೀರಿನ ನಿರ್ವಹಣೆ ಸರಿಯಾದರೆ ದಾಳಿಂಬೆ ಇಳುವರಿ ಸಾಧ್ಯ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ನೀರಿನ ನಿರ್ವಹಣೆ ಸರಿಯಾದರೆ ದಾಳಿಂಬೆ ಇಳುವರಿ ಸಾಧ್ಯ

ಹಿರಿಯೂರು

ನೀರಿನ ನಿರ್ವಹಣೆ ಸರಿಯಾದರೆ ದಾಳಿಂಬೆ ಇಳುವರಿ ಸಾಧ್ಯ

News Desk Chitradurga News
Last updated: 6 February 2025 19:46
News Desk Chitradurga News
5 months ago
Share
ಬಬ್ಬೂರು
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 06 FEBRUARY 2025

ಹಿರಿಯೂರು: ದಾಳಿಂಬೆಯು ನಮ್ಮ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಲ್ಲಿ ಒಂದಾಗಿದ್ದು, ಬೆಳೆಯಲ್ಲಿ ಸಮರ್ಪಕ ನೀರಿನ ನಿರ್ವಹಣೆ, ಸುಸಜ್ಜಿತ ಉತ್ಪಾದನೆ ತಾಂತ್ರಿಕತೆಗಳು ಮತ್ತು ಸಮಗ್ರ ಪೀಡೆ ನಿರ್ವಹಣೆಯ ಪದ್ದತಿ ಅಳವಡಿಕೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ತಿಳಿಸಿದರು.

Also Read: B.Ed ಫಲಿತಾಂಶ | SRS ಕಾಲೇಜಿಗೆ ಮೂರು ರ್ಯಾಂಕ್

ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿಯಲ್ಲಿ ವೈಜ್ಞಾನಿಕ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ, ದಾಳಿಂಬೆ ಬೆಳೆಯ ಸುಸಜ್ಜಿತ ಉತ್ಪಾದನೆ ಕ್ರಮಗಳು, ನೀರಿನ ನಿರ್ವಹಣೆ, ಸಮಗ್ರರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭೂಮಿಯ ಮೇಲೆ ಶೇ 70 ರಷ್ಟು ನೀರಿದ್ದರೂ ಶೇ 2% ಮಾತ್ರ ಕೃಷಿ, ಕೈಗಾರಿಕೆ ಮತ್ತು ದಿನ ನಿತ್ಯ ಬಳಕೆಗೆ ಯೋಗ್ಯವಾಗಿದ್ದು ವೈಜ್ಞಾನಿಕವಾಗಿ ಈ ಶುದ್ದ ನೀರಿನ ಮಿತ ಹಾಗೂ ಸಮರ್ಥ ಬಳಕೆ ತಮ್ಮಲ್ಲೇರ ಜವಬ್ದಾರಿಯಾಗಿದೆಂದರು.

ತುಂತುರು ಮತ್ತು ಹನಿ ನೀರಾವರಿ ಪದ್ದತಿಗಳ ಅಳವಡಿಕೆಯಿಂದ ಕೃಷಿಯಲ್ಲಿ 30-40% ನೀರಿನ ಉಳಿತಾಯ, ವಿದ್ಯುಚ್ಚಕ್ತಿಯ ಉಳಿತಾಯ, ಕೂಲಿ ಆಳುಗಳ ಉಳಿತಾಯ, ಸಮಯದ ಉಳಿತಾಯ, ಕಳೆಗಳ ನಿರ್ವಹಣೆ ಮತ್ತು ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದು. ಹನಿ ನೀರಾವರಿ ಪದ್ದತಿಯಲ್ಲಿ ರಸಾವರಿ ಬಳಸಿ ರಸಗೊಬ್ಬರ ನೀಡುವುದರಿಂದ ರಸಗೊಬ್ಬರದ ಸಮರ್ಪಕ ಬಳಕೆಯಿಂದ ವ್ಯವಯಸಾಯದ ಖರ್ಚು ಕಡಿಮೆಯಾಗಿ 20-30% ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದರು.

Also Read: ವಿಜಯರಾಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ | ಶಾಂತವೀರ ಶ್ರೀಗಳಿಂದ ಸನ್ಮಾನ 

 ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬಿದ್ದ ನೀರನ್ನು ಇಂಗಿಸಲು ಕಂದಕ ಬದುಗಳ ನಿರ್ಮಾಣ ಮಾಡಬೇಕು ಮತ್ತು ಕೃಷಿ ಹೊಂಡದಲ್ಲಿ ನೀರು ಸಂಗ್ರಹಣೆ ಮಾಡಿ ಬೆಳೆಯ ಸಂದಿಗ್ದ ಹಂತದಲ್ಲಿ ನೀರು ಹಾಯಿಸಲು ಅನೂಕೂಲವಾಗುತ್ತದೆ.

ಕೃಷಿ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್‍ಸೆಟ್ ಪಡೆಯಲು ಸಂಬಂಧಪಟ್ಟ ರೈತಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಅನುಕೂಲ ಪಡೆದು ಕೊಳ್ಳಬಹುದೆಂದರು.

ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ. ಶ್ರೀಧರ್ ಅವರು ದಾಳಿಂಬೆ ಬೆಳೆಯಲ್ಲಿ ಅನುಸರಿಸಬೇಕಾದ ಸುಸಜ್ಜಿತ ಉತ್ಪಾದನೆ ಕ್ರಮಗಳ ಕುರಿತು ಮಾಹಿತಿ ನೀಡಿ, ವೈಜ್ಞಾನಿಕ ನೀರಿನ ಸಮರ್ಪಕ ಹಾಗೂ ಸಮಗ್ರ ಬೆಳೆ ನಿರ್ವಹಣೆಯಿಂದ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವೆಂದರು.

Also Read: ನರೇಗಾ ಹಬ್ಬದಲ್ಲಿ ಚಿತ್ರದುರ್ಗ ಜಿಲ್ಲೆಗೆ ಮೂರು ಪ್ರಶಸ್ತಿ

ಕೀಟ ಶಾಸ್ತ್ರಜ್ಞರಾದ ಡಾತಾರಣ ಅವರು ದಾಳಿಂಬೆ ಬೆಳೆಯಲ್ಲಿ ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು. ಮುನಿರಬಾದ್‍ನ ತೋಟಗಾರಿಕೆ ಕಾಲೇಜಿನ ರೋಗಶಾಸ್ತ್ರಜ್ಞರಾದ ಡಾ, ರಾಘವೇಂದ್ರ ಆಚಾರಿ ಅವರು ಈ ಬೆಳೆಯಲ್ಲಿ ಬರುವ ರೋಗಗಳ ಸಮಗ್ರ ನಿರ್ವಹಣೆ ಕುರಿತು ಗೂಗಲ್ ಮೀಟ್ ಮೂಲಕ ವಿಷಯ ಮಂಡನೆ ಮಾಡಿದರು.

ಜೈನ್ ಇರಿಗೇಷನ್ ಸಂಸ್ಥೆಯ ಪ್ರತಿನಿಧಿಯಾದ ಕೆ.ದೇವರಾಜ್ ಅವರು ಹನಿ ನೀರಾವರಿ ಘಟಕಗಳನ್ನು ಕ್ಷೇತ್ರ ಮಟ್ಟದಲ್ಲಿ ಅಳವಡಿಸುವ ವಿನ್ಯಾಸ ಹಾಗೂ ನಿರ್ವಹಣೆಯ ವಿಧಾನವನ್ನುತಿಳಿಸಿದರು.

ಹನಿ ನೀರಾವರಿ ಪದ್ದತಿಯಲ್ಲಿ ವಿವಿಧ ಫಿಲ್ಟರ್‍ಗಳ ನಿರ್ವಹಣೆ ಬಗ್ಗೆ ಮಾಹತಿ ನೀಡಿ, ದೈನಂದಿನ ಫಿಲ್ಟರ್‍ಗಳಲ್ಲಿ ಡ್ರೈನ್ ಕವಾಟಗಳನ್ನು ತೆರೆಯುವುದು, ವಾರಕ್ಕೊಮ್ಮೆಮೆಶ್ ಮತ್ತುಡಿಶ್ ಫಿಲ್ಟರ್ ಗಾಗಿ ಫಿಲ್ಟರ್ ಎಲಿಮೆಂಟ್ ತೆರೆಯುವಿಕೆಹಾಗೂ ತಿಂಗಳಿಗೊಮ್ಮೆ ಹೈಡ್ರೋಸೈಕ್ಲೋನ್ ಫಿಲ್ಟರ್‍ನ ಸಂಗ್ರಹಕೊಠಡಿಯಲ್ಲಿ ಸೈಡ್‍ಕ್ಯಾಪ್ ತೆರೆಯುವುದು ಬಹಳ ಮುಖ್ಯವೆಂದರು.

ಎಲ್ಲಾ ಡ್ರಿಪ್ ಲ್ಯಾಟರಲ್‍ಗಳ ಫ್ಲಶಿಂಗ್‍ನ್ನು ಪ್ರತಿ15 ದಿನಗಳಿಗೊಮ್ಮೆ ಮಾಡಬೇಕು. ಹನಿ ನೀರಾವರಿಘಟಕದ ನಿರ್ದಿಷ್ಟ ಅವಧಿಯ ಕಾರ್ಯಾಚರಣೆಯ ನಂತರ ಉಪ್ಪು ಶೇಖರಣೆ ಸಂಭವಿಸುತ್ತದೆ.

Also Read: ಮಾ.4 ರಿಂದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ

ಸಾಧನದ ಹೊರಮೇಲ್ಮೈಯಲ್ಲಿಉಪ್ಪು ಶೇಖರಣೆಯನ್ನು ನಾವುಗಮನಿಸಿದಾಗ ಆಮ್ಲಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಬೆಳೆಯ ಹಂತದಲ್ಲಿ ನಿಯಮಿತವಾಗಿ ಫಾಸ್ಪರಿಕ್‍ಆಮ್ಲವನ್ನು ಬಳಸುವುದರಿಂದ ಬೆಳೆಗೆ ರಂಜಕ ಪೋಷಕಾಂಶ ಪೂರೈಸಲು ಸಹಕಾರಿಯಾಗುವುದಲ್ಲದೆ, ಹನಿ ನೀರಾವರಿ ಘಟಕದಲ್ಲಿ ಉಪ್ಪು ಶೇಖರಣೆಯಾಗುವುದನ್ನು ಸಹ ತಡೆಯಬಹುದು.

ಬೆಳೆಯ ಅವಧಿ ಮುಗಿದಾಗ ಆಸಿಡ್ ಚಿಕಿತ್ಸೆಗಾಗಿ 35% ಕೇಂದ್ರೀಕೃತ ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಬೇಕು. ಆಸಿಡ್ ಚಿಕಿತ್ಸೆಯನ್ನು ಕೈಗೊಳ್ಳುವಾಗ ಕಣ್ಣುಗಳು ಮತ್ತು ಚರ್ಮದೊಂದಿಗೆ ಆಮ್ಲದ ಸಂಪರ್ಕವು ಅಪಾಯಕಾರಿಯಾದ್ದರಿಂದ ದಯವಿಟ್ಟು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದರು.

ಹನಿ ನೀರಾವರಿ ವ್ಯವಸ್ಥೆಯಲ್ಲಿಕೀಟ,ಅಳಿಲು ಮತ್ತು ಇಲಿಗಳ ಹಾನಿಯನ್ನುತಡೆಗಟ್ಟಲುನೀರಾವರಿ ಮುಗಿದಾಗಅಥವಾ ಬೆಳೆ ಮುಗಿದಾಗ ಅಥವಾ ಕೊಯ್ಲು ಮಾಡುವಾಗ ಹನಿನೀರಾವರಿ ಕೊಳವೆಗಳನ್ನು ಹೊಲದಲ್ಲಿ ಬೀಡದೆ ಅವುಗಳನ್ನು ಸರಿಯಾಗಿ ನೆರಳಿನಲ್ಲಿ ಸಂಗ್ರಹಿಸಿ ಮುನ್ನೇಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದರು.

Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ? 

ಹನಿ ನೀರಾವರಿ ವ್ಯವಸ್ಥೆಯಲ್ಲಿ ನೀರಿನಗುಣಮಟ್ಟದ ಮಾನದಂಡಗಳು ಮತ್ತುಹನಿ ನೀರಾವರಿ ವ್ಯವಸ್ಥೆಯಲ್ಲಿ ಸೂಕ್ತವಾದ ನೀರಿನಲ್ಲಿ ಕರಗುವ ರಸಗೊಬ್ಬರಗಳಕುರಿತು ಮಾಹಿತಿ ನೀಡಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:AgricultureBabbur FarmChitradurgaChitradurga newsChitradurga UpdatesFarmersHiriyurKannada Latest NewsKannada NewsMangoPomegranatePrime Minister's Agriculture Irrigation Schemeಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಕೃಷಿಚಿತ್ರದುರ್ಗಚಿತ್ರದುರ್ಗ ನ್ಯೂಸ್ದಾಳಿಂಬೆಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಬಬ್ಬೂರುಫಾರಂಮಾವುರೈತರುಹಿರಿಯೂರು
Share This Article
Facebook Email Print
Previous Article ವಿಜಯರಾಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ | ಶಾಂತವೀರ ಶ್ರೀಗಳಿಂದ ಸನ್ಮಾನ 
Next Article Vijayendra-Sriramulu ಶ್ರೀರಾಮುಲುಗೆ ಪೈಪೋಟಿ ಕೊಡುವಷ್ಟು ದೊಡ್ಡ ನಾಯಕ ನಾನಲ್ಲ | ಬಿ.ವೈ.ವಿಜಯೇಂದ್ರ
Leave a Comment

Leave a Reply Cancel reply

Your email address will not be published. Required fields are marked *

ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up