CHITRADURGA NEWS | 14 June 2025
ಅತ್ತೆ-ಮಾವ ಹಿರಿಯರು, ಅವರ ಮಾತುಗಳನ್ನು ಪಾಲಿಸುವುದು ಒಳ್ಳೆಯದು. ಆದರೆ ಕೆಲವೊಮ್ಮೆ, ಅವರು ಹೇಳುವ ವಿಚಾರ ಕೆಟ್ಟದಾಗಿರಬಹುದು. ನೀವು ಅದನ್ನು ಪಾಲಿಸಿದರೆ, ನಿಮ್ಮ ಸಂತೋಷದ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಏಳಬಹುದು. ಹಾಗಾಗಿ ನೀವು ನಿಮ್ಮ ಅತ್ತೆ-ಮಾವನ ಸಲಹೆಯ ಮೇರೆಗೆ ಈ ಮೂರು ಕೆಲಸಗಳನ್ನು ಎಂದಿಗೂ ಮಾಡಬಾರದು. ಏಕೆಂದರೆ ಇವು ನಿಮ್ಮ ಸಂತೋಷದ ಮೇಲೆ ಪರಿಣಾಮ ಬೀರಬಹುದು. ಹಾಗಾದ್ರೆ ಆ ಮೂರು ಕೆಲಸಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
ಸಂಗಾತಿಯ ನಡವಳಿಕೆಯನ್ನು ಬದಲಾಯಿಸುವುದು

ಕೆಲವು ಅತ್ತೆ-ಮಾವ ತಮ್ಮ ಅಳಿಯ ಅಥವಾ ಸೊಸೆಯನ್ನು ತಮ್ಮ ಇಚ್ಛೆಯಂತೆ ಬದಲಾಯಿಸಲು ಬಯಸುತ್ತಾರೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ ಅಥವಾ ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಅಥವಾ ಅವರ ಉಡುಗೆ ತೊಡುಗೆ ಸರಿಯಾಗಿಲ್ಲ ಎಂದು ಅವರು ನಿಮಗೆ ಹೇಳಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಸಲಹೆಯ ಮೇರೆಗೆ ನಿಮ್ಮ ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸಿದರೆ, ಅದು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.
ಹಾಗಾಗಿ ನಿಮ್ಮ ಸಂಗಾತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಪ್ರೀತಿಸಿ. ಬೇರೆಯವರ ಸಲಹೆಯ ಮೇರೆಗೆ ಅವರು ಬದಲಾಗುವಂತೆ ಒತ್ತಾಯಿಸುವ ಬದಲು, ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ಪೋಷಕರಿಂದ ಅಂತರ ಕಾಯ್ದುಕೊಳ್ಳುವುದು
ಕೆಲವು ಅತ್ತೆ-ಮಾವನಿಗೆ ತಮ್ಮ ಸೊಸೆ ಅಥವಾ ಅಳಿಯ ತಮ್ಮ ಹೆತ್ತವರನ್ನು ಹೆಚ್ಚು ಭೇಟಿ ಮಾಡಬಾರದು, ಮಾತನಾಡಬಾರದು ಎಂದು ನಿರೀಕ್ಷಿಸುತ್ತಾರೆ. ಹಾಗಾಗಿ ಅವರ ಮಾತನ್ನು ಕೇಳಿ ನಂತರ ನೀವು ನಿಮ್ಮ ಹೆತ್ತವರಿಂದ ದೂರವಾದರೆ, ಅದು ಅವರ ಮನಸ್ಸಿಗೆ ನೋವುಂಟು ಮಾಡುವುದಲ್ಲದೆ ನಿಮ್ಮ ಮನಸ್ಸಿನಲ್ಲಿ ನೀವು ಒಬ್ಬಂಟಿ ಎಂಬ ಭಾವನೆ ಕಾಡುತ್ತದೆ.
ನಿಮ್ಮ ಪೋಷಕರು ನಿಮ್ಮನ್ನು ಬೆಳೆಸಿದ್ದಾರೆ ಮತ್ತು ಅವರನ್ನು ಗೌರವಿಸುವುದು, ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಅವರಿಂದ ದೂರವಿರುವುದು ನಿಮ್ಮ ವೈವಾಹಿಕ ಜೀವನದಲ್ಲಿ ಒತ್ತಡವನ್ನು ಉಂಟುಮಾಡಬಹುದು ಮತ್ತು ನೀವು ಒಂಟಿತನವನ್ನು ಅನುಭವಿಸುವಂತೆ ಮಾಡಬಹುದು.
ನಿಮ್ಮ ವೃತ್ತಿ ಅಥವಾ ಕನಸುಗಳನ್ನು ಬಿಟ್ಟುಬಿಡುವುದು
ಇದು ತುಂಬಾ ಸೂಕ್ಷ್ಮವಾದ ವಿಷಯ. ಕೆಲವೊಮ್ಮೆ, ಅತ್ತೆ-ಮಾವಂದಿರು ತಮ್ಮ ಸೊಸೆ ಅಥವಾ ಅಳಿಯನನ್ನು ತಮ್ಮ ವೃತ್ತಿ ಅಥವಾ ಕನಸುಗಳನ್ನು ಬಿಟ್ಟುಬಿಡುವಂತೆ ಕೇಳಬಹುದು, ವಿಶೇಷವಾಗಿ ಇದು ಕುಟುಂಬಕ್ಕೆ ಒಳ್ಳೆಯದು ಎಂಬುದು ಅವರು ನಂಬಿಕೆ. ಅವರ ಒತ್ತಾಯದ ಮೇರೆಗೆ ನೀವು ನಿಮ್ಮ ಕನಸುಗಳನ್ನು ಅಥವಾ ವೃತ್ತಿಜೀವನವನ್ನು ಬಿಟ್ಟುಬಿಟ್ಟರೆ, ಭವಿಷ್ಯದಲ್ಲಿ ನೀವು ಈ ಬಗ್ಗೆ ಪಶ್ಚತಾಪ ಪಡಬೇಕಾಗಿಬರಹುದು.
ಅದರ ಬದಲು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ನಿಮ್ಮ ವೃತ್ತಿ ಅಥವಾ ಕನಸುಗಳು ನಿಮಗೆ ಎಷ್ಟು ಮುಖ್ಯ ಎಂಬುದನ್ನು ಅವರಿಗೆ ವಿವರಿಸಿ. ಆರೋಗ್ಯಕರ ಸಂಬಂಧದಲ್ಲಿ, ದಂಪತಿ ಇಬ್ಬರೂ ಪರಸ್ಪರರ ಕನಸುಗಳನ್ನು ಗೌರವಿಸುತ್ತಾರೆ ಮತ್ತು ಅವುಗಳನ್ನು ನನಸಾಗಿಸಲು ಸಹಾಯ ಮಾಡುತ್ತಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
