By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಅತ್ತೆ-ಮಾವ ಹೇಳಿದ ಈ 3 ಕೆಲಸಗಳನ್ನು ಎಂದಿಗೂ ಮಾಡಬೇಡಿ; ನಿಮ್ಮ ಜೀವನ ಹಾಳಾಗುತ್ತದೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಅತ್ತೆ-ಮಾವ ಹೇಳಿದ ಈ 3 ಕೆಲಸಗಳನ್ನು ಎಂದಿಗೂ ಮಾಡಬೇಡಿ; ನಿಮ್ಮ ಜೀವನ ಹಾಳಾಗುತ್ತದೆ

Life Style

ಅತ್ತೆ-ಮಾವ ಹೇಳಿದ ಈ 3 ಕೆಲಸಗಳನ್ನು ಎಂದಿಗೂ ಮಾಡಬೇಡಿ; ನಿಮ್ಮ ಜೀವನ ಹಾಳಾಗುತ್ತದೆ

News Desk Chitradurga News
Last updated: 14 June 2025 11:04
News Desk Chitradurga News
2 weeks ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 14 June 2025

ಅತ್ತೆ-ಮಾವ ಹಿರಿಯರು, ಅವರ ಮಾತುಗಳನ್ನು ಪಾಲಿಸುವುದು ಒಳ್ಳೆಯದು. ಆದರೆ ಕೆಲವೊಮ್ಮೆ, ಅವರು ಹೇಳುವ ವಿಚಾರ ಕೆಟ್ಟದಾಗಿರಬಹುದು. ನೀವು ಅದನ್ನು ಪಾಲಿಸಿದರೆ, ನಿಮ್ಮ ಸಂತೋಷದ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಏಳಬಹುದು. ಹಾಗಾಗಿ ನೀವು ನಿಮ್ಮ ಅತ್ತೆ-ಮಾವನ ಸಲಹೆಯ ಮೇರೆಗೆ ಈ ಮೂರು ಕೆಲಸಗಳನ್ನು ಎಂದಿಗೂ ಮಾಡಬಾರದು. ಏಕೆಂದರೆ ಇವು ನಿಮ್ಮ ಸಂತೋಷದ ಮೇಲೆ ಪರಿಣಾಮ ಬೀರಬಹುದು. ಹಾಗಾದ್ರೆ ಆ ಮೂರು ಕೆಲಸಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

ಸಂಗಾತಿಯ ನಡವಳಿಕೆಯನ್ನು ಬದಲಾಯಿಸುವುದು

ಕೆಲವು ಅತ್ತೆ-ಮಾವ ತಮ್ಮ ಅಳಿಯ ಅಥವಾ ಸೊಸೆಯನ್ನು ತಮ್ಮ ಇಚ್ಛೆಯಂತೆ ಬದಲಾಯಿಸಲು ಬಯಸುತ್ತಾರೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ ಅಥವಾ ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಅಥವಾ ಅವರ ಉಡುಗೆ ತೊಡುಗೆ ಸರಿಯಾಗಿಲ್ಲ ಎಂದು ಅವರು ನಿಮಗೆ ಹೇಳಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಸಲಹೆಯ ಮೇರೆಗೆ ನಿಮ್ಮ ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸಿದರೆ, ಅದು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.

ಹಾಗಾಗಿ ನಿಮ್ಮ ಸಂಗಾತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಪ್ರೀತಿಸಿ. ಬೇರೆಯವರ ಸಲಹೆಯ ಮೇರೆಗೆ ಅವರು ಬದಲಾಗುವಂತೆ ಒತ್ತಾಯಿಸುವ ಬದಲು, ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ಪೋಷಕರಿಂದ ಅಂತರ ಕಾಯ್ದುಕೊಳ್ಳುವುದು

ಕೆಲವು ಅತ್ತೆ-ಮಾವನಿಗೆ ತಮ್ಮ ಸೊಸೆ ಅಥವಾ ಅಳಿಯ ತಮ್ಮ ಹೆತ್ತವರನ್ನು ಹೆಚ್ಚು ಭೇಟಿ ಮಾಡಬಾರದು, ಮಾತನಾಡಬಾರದು ಎಂದು ನಿರೀಕ್ಷಿಸುತ್ತಾರೆ. ಹಾಗಾಗಿ ಅವರ ಮಾತನ್ನು ಕೇಳಿ ನಂತರ ನೀವು ನಿಮ್ಮ ಹೆತ್ತವರಿಂದ ದೂರವಾದರೆ, ಅದು ಅವರ ಮನಸ್ಸಿಗೆ ನೋವುಂಟು ಮಾಡುವುದಲ್ಲದೆ ನಿಮ್ಮ ಮನಸ್ಸಿನಲ್ಲಿ ನೀವು ಒಬ್ಬಂಟಿ ಎಂಬ ಭಾವನೆ ಕಾಡುತ್ತದೆ.

ನಿಮ್ಮ ಪೋಷಕರು ನಿಮ್ಮನ್ನು ಬೆಳೆಸಿದ್ದಾರೆ ಮತ್ತು ಅವರನ್ನು ಗೌರವಿಸುವುದು, ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಅವರಿಂದ ದೂರವಿರುವುದು ನಿಮ್ಮ ವೈವಾಹಿಕ ಜೀವನದಲ್ಲಿ ಒತ್ತಡವನ್ನು ಉಂಟುಮಾಡಬಹುದು ಮತ್ತು ನೀವು ಒಂಟಿತನವನ್ನು ಅನುಭವಿಸುವಂತೆ ಮಾಡಬಹುದು.

ನಿಮ್ಮ ವೃತ್ತಿ ಅಥವಾ ಕನಸುಗಳನ್ನು ಬಿಟ್ಟುಬಿಡುವುದು

ಇದು ತುಂಬಾ ಸೂಕ್ಷ್ಮವಾದ ವಿಷಯ. ಕೆಲವೊಮ್ಮೆ, ಅತ್ತೆ-ಮಾವಂದಿರು ತಮ್ಮ ಸೊಸೆ ಅಥವಾ ಅಳಿಯನನ್ನು ತಮ್ಮ ವೃತ್ತಿ ಅಥವಾ ಕನಸುಗಳನ್ನು ಬಿಟ್ಟುಬಿಡುವಂತೆ ಕೇಳಬಹುದು, ವಿಶೇಷವಾಗಿ ಇದು ಕುಟುಂಬಕ್ಕೆ ಒಳ್ಳೆಯದು ಎಂಬುದು ಅವರು ನಂಬಿಕೆ. ಅವರ ಒತ್ತಾಯದ ಮೇರೆಗೆ ನೀವು ನಿಮ್ಮ ಕನಸುಗಳನ್ನು ಅಥವಾ ವೃತ್ತಿಜೀವನವನ್ನು ಬಿಟ್ಟುಬಿಟ್ಟರೆ, ಭವಿಷ್ಯದಲ್ಲಿ ನೀವು ಈ ಬಗ್ಗೆ ಪಶ್ಚತಾಪ ಪಡಬೇಕಾಗಿಬರಹುದು.

ಅದರ ಬದಲು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ನಿಮ್ಮ ವೃತ್ತಿ ಅಥವಾ ಕನಸುಗಳು ನಿಮಗೆ ಎಷ್ಟು ಮುಖ್ಯ ಎಂಬುದನ್ನು ಅವರಿಗೆ ವಿವರಿಸಿ. ಆರೋಗ್ಯಕರ ಸಂಬಂಧದಲ್ಲಿ, ದಂಪತಿ ಇಬ್ಬರೂ ಪರಸ್ಪರರ ಕನಸುಗಳನ್ನು ಗೌರವಿಸುತ್ತಾರೆ ಮತ್ತು ಅವುಗಳನ್ನು ನನಸಾಗಿಸಲು ಸಹಾಯ ಮಾಡುತ್ತಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:attitudebehaviorChitradurgaChitradurga newsChitradurga Updatesfather-in-lawKannada Latest NewsKannada NewsLifeLifestylemother-in-lawಅತ್ತೆಅಸೆಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜೀವನಜೀವನಶೈಲಿನಡವಳಿಕೆಮಾವ
Share This Article
Facebook Email Print
Previous Article ಮೊಡವೆಗಳನ್ನು ಕಡಿಮೆ ಮಾಡಲು ಅರಿಶಿನದೊಂದಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ
Next Article ಭಾರತದ ಜನಪ್ರಿಯತೆ ಉತ್ತುಂಗಕ್ಕೆ | ಶಾಸಕ‌ ಎಂ.ಚಂದ್ರಪ್ಪ
Leave a Comment

Leave a Reply Cancel reply

Your email address will not be published. Required fields are marked *

ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up