By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Controversy: ಲಿಂಗಾಯತ ಸ್ವತಂತ್ರ ಧರ್ಮ: ಸಾಣೇಹಳ್ಳಿ ಶ್ರೀ | ಹಿಂದೂ ಎನ್ನುವುದು ವಿಶಾಲ ಮಹಾಸಾಗರ: ವಚನಾನಂದ ಶ್ರೀ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Controversy: ಲಿಂಗಾಯತ ಸ್ವತಂತ್ರ ಧರ್ಮ: ಸಾಣೇಹಳ್ಳಿ ಶ್ರೀ | ಹಿಂದೂ ಎನ್ನುವುದು ವಿಶಾಲ ಮಹಾಸಾಗರ: ವಚನಾನಂದ ಶ್ರೀ

ಮುಖ್ಯ ಸುದ್ದಿಹೊಳಲ್ಕೆರೆ

Controversy: ಲಿಂಗಾಯತ ಸ್ವತಂತ್ರ ಧರ್ಮ: ಸಾಣೇಹಳ್ಳಿ ಶ್ರೀ | ಹಿಂದೂ ಎನ್ನುವುದು ವಿಶಾಲ ಮಹಾಸಾಗರ: ವಚನಾನಂದ ಶ್ರೀ

chitradurganews.com
Last updated: 8 August 2024 22:29
chitradurganews.com
11 months ago
Share
sri vachananda swamiji - sanehally shree
ಶ್ರೀ ವಚನಾನಂದ ಸ್ವಾಮೀಜಿ - ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 08 AUGUST 2024

ಚಿತ್ರದುರ್ಗ: ಹೊಳಲ್ಕೆರೆ ಒಂಟಿ ಕಂಬದ ಮಠದ ಆವರಣದಲ್ಲಿ ಗುರುವಾರ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ 30ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಹಾಗೂ ಲಿಂಗಾಯತ ಧರ್ಮಗಳ ಕುರಿತ ಮಾತುಗಳು ಮಾರ್ಧನಿಸಿವೆ.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಿಂದೂ ಧರ್ಮದ ಕುರಿತು ಆಡಿದ ಮಾತುಗಳಿಗೆ ಅಪಸ್ವರ ಕೇಳಿ ಬಂದಿವೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ತೋಟಗಾರಿಕೆ ತರಬೇತಿ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಶ್ರೀಗಳು ತಮ್ಮ ಭಾಷಣದಲ್ಲಿ, ಸಮಾಜದ ಎಲ್ಲಾ ಅನಿಷ್ಠಗಳ ನಿವಾರಣೆಗೆ ಎಲ್ಲಾ ಕ್ಷೇತ್ರಗಳಲ್ಲಿ ಬಸವಣ್ಣನವರು ದಾಪುಗಾಲು ಹಾಕಿದ್ದರು.

ವೇದ, ಪುರಾಣ, ಶಾಸ್ತ್ರ ಪ್ರಚಾರ, ಪ್ರಸಾರ ನಡೆದಿತ್ತು. ಆದರೆ, ಶರಣರು ಆ ವೇದಗಳನ್ನು ತಿರಸ್ಕಾರ ಮಾಡಿದ್ದರು.

ಇದನ್ನೂ ಓದಿ: ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ | ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿಶೇಷ ಲೇಖನ

ವೇದವೆಂಬುರು ಓದಿನ ಮಾತು, ಪುರಾಣವೆಂಬುದು ಪುಂಡರಗೋಷ್ಠಿ, ಶಾಸ್ತ್ರವೆಂಬುದು ಸಂಖ್ಯೆಯ ಸ್ತುತಿ ಎಂದು ಹೇಳುವ ಮೂಲಕ ಲಿಂಗಾಯತ ಧರ್ಮದ ಹುಟ್ಟಿಗೆ ಬಸವಾದಿ ಶರಣರು ಕಾರಣರಾದರು.

ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗ ಅಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿದು ಬಂತು 2195 ಕ್ಯೂಸೆಕ್ ನೀರು

ಹಿಂದೂ ಧರ್ಮ ಅಂದರೆ ಎಲ್ಲ ರೀತಿಯ ಅನಿಷ್ಠ, ಅನಾಚಾರ ಒಳಗೊಂಡಿರುವಂಥದ್ದು. ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಿಂಧೂ ನದಿಯ ದಡದಲ್ಲಿ ಸಿಂಧೂ ದೇಶದವರು ಎಂಬ ಅರ್ಥದಲ್ಲಿ ಹಿಂದೂ ಅನ್ನುವುದಾದರೆ, ಖಂಡಿತ ನಾವು ಹಿಂದೂ ಧರ್ಮದವರಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು ಎಂದು ಹೇಳಿದರು.

ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ಬಲವಾಗಿ ತುಂಬಿಕೊಂಡಿವೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.

ಇದನ್ನೂ ಓದಿ: ಒಂಟಿ ಕಂಬದ ಮಠದಲ್ಲಿ ಮಲ್ಲಿಕಾರ್ಜುನ ಶ್ರೀ ಸ್ಮರಣೋತ್ಸವ | ಹತ್ತಾರು ಮಠಾಧೀಶರು ಭಾಗೀ | ಯರ‍್ಯಾರು ಏನು ಹೇಳಿದ್ರು

ಇದಾದ ಬಳಿಕ ಮಾತನಾಡಿದ ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ, ಹಿಂದೂ ಧರ್ಮದ ಪರವಾಗಿ ಮಾತುಗಳನ್ನು ಆರಂಭಿಸಿದರು.

ಹಿಂದೂ ಎನ್ನುವುದು ಅತ್ಯಂತ ಸನಾತನವಾದುದು. ಯಾರು ಏನು ಬೇಕಾದರೂ ಹೇಳಬಹುದು. ಆದರೆ, ಹಿಂದೂ ಎನ್ನುವುದು ವಿಶಾಲವಾದ ಮಹಾಸಾಗರ ಎಂದರು.

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಚಿತ್ರದುರ್ಗ ರೈಲ್ವೇ ಯೋಜನೆಗೆ 150 ಕೋಟಿ

ಹಿಂದೂ ಧರ್ಮದಲ್ಲಿ ಕೇವಲ ವೈದಿಕರಿರಲಿಲ್ಲ. ಅದು ಕೇವಲ ದ್ವೈತ, ಅದ್ವೈತ ಅಲ್ಲ, ಅದು ಶಕ್ತಿ ವಿಶಿಷ್ಠಾದ್ಯವೈತ, ಜನಪದ, ಬುಡಕಟ್ಟು ಎಲ್ಲವನ್ನೂ ಒಳಗೊಂಡಿದೆ.

ಎಲ್ಲಾ ಮೂಲ ಪುರುಷರು ಇದ್ದದ್ದು ಹಿಂದೂ ಧರ್ಮದಲ್ಲೇ. ವೀರಶೈವ ಲಿಂಗಾತರ ತತ್ವಗಳು ಬೇರೆ ಬೇರೆ ಇರಬಹುದು. ಆದರೆ, ನಾವೆಲ್ಲಾ ಒಗ್ಗಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ.

ಇದನ್ನೂ ಓದಿ: ವೇದಾವತಿ ಜೊತೆಗೆ ನೇತ್ರಾವತಿ ಸಮಾಗಮ | ಎತ್ತಿನಹೊಳೆ ನೀರು ವಿವಿ ಸಾಗರಕ್ಕೆ | ಈ ವರ್ಷವೂ ಮಾರಿಕಣಿವೆ ಕೋಡಿ ಪಕ್ಕಾ

ನಿಮ್ಮ ಮಠ, ಪೀಠ, ತತ್ವಗಳು ಏನೇ ಇರಬಹುದು. ಸಾಮಾಜಿಕ, ರಾಜಕೀಯ, ಬೌದ್ಧಿಕವಾಗಿ ನಾವೆಲ್ಲಾ ಒಂದಾಗಿರಬೇಕು. ಶ್ರೀ ಮಲ್ಲಿಕಾರ್ಜುನ ಗುರುಗಳಲ್ಲಿ ಈ ರೀತಿಯ ಬೇಧಗಳಿರಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaDr. Panditharadhya Shivacharya SwamijiHarihara Panchamasali MathHinduismHolalkereHosdurgakannada latestLingayatismSanehalli SriTaralbalu Branch MathVachanananda SwamijiVeerashaivaVidaಕನ್ನಡ ಲೇಟೆಸ್ಟ್ ಅಪೇಟ್ಸ್ಚಿತ್ರದುರ್ಗಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿತರಳಬಾಳು ಶಾಖಾ ಮಠಲಿಂಗಾಯತ ಧರ್ಮವಚನಾನಂದ ಸ್ವಾಮೀಜಿವಿವಾದವೀರಶೈವಸಾಣೇಹಳ್ಳಿ ಶ್ರೀಹರಿಹರ ಪಂಚಮಸಾಲಿ ಮಠಹಿಂದೂ ಧರ್ಮಹೊಸದುರ್ಗಹೊಳಲ್ಕೆರೆ
Share This Article
Facebook Email Print
Previous Article arecanut price list Today AdikeRate: ಆಗಸ್ಟ್ 08 | ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ರೇಟ್
Next Article Power Cut chitradurga News (3) Power cut; ಚಿತ್ರದುರ್ಗ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Leave a Comment

Leave a Reply Cancel reply

Your email address will not be published. Required fields are marked *

APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಕಡಲೆಕಾಳು, ಶೇಂಗಾ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up